ಧೋನಿ ಅದೃಷ್ಟವಂತ ನಾಯಕ.. ಧೋನಿಯ ಯಶಸ್ಸಿನ ಹಿಂದಿದೆ ಗಂಗೂಲಿಯ ಕಠಿಣ ಶ್ರಮ- ಗೌತಮ್ ಗಂಭೀರ್
ಟೆಸ್ಟ್ ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಯಶ ಸಾಧಿಸಲು ಪ್ರಮುಖ ಕಾರಣ ಜಹೀರ್ ಖಾನ್. ಜಹೀರ್ ಖಾನ್ನಂತಹ ವೇಗಿ ಧೋನಿ ನಾಯಕತ್ವಕ್ಕೆ ಸಿಕ್ಕಿರುವುದು ಪುಣ್ಯ. ಅಲ್ಲದೆ ಧೋನಿ ಒಬ್ಬ ಯಶಸ್ಸಿ ನಾಯನಾಗಲು ಗಂಗೂಲಿಯ ಶ್ರಮವಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.
ಜಹೀರ್ ಖಾನ್ ವಿಶ್ವದ ಶ್ರೇಷ್ಠ ಬೌಲರ್. ಜಹೀರ್ಖಾನ್ನಂತಹ ಪ್ರತಿಭೆಯನ್ನು ಹುಡಕಿದ್ದು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ. ಜಹೀರ್ಖಾನ್ ಇಲ್ಲದಿರುತ್ತಿದ್ರೆ ಧೋನಿ ಟೆಸ್ಟ್ ನಾಯಕನಾಗಿ ಯಶ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಜಹೀರ್ಖಾನ್ ಅವರು ಧೋನಿ ನಾಯಕತ್ವದಲ್ಲಿ 33 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಹಾಗೇ 123 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನಕ್ಕೇರಿತ್ತು. ಇನ್ನೊಂದೆಡೆ ಧೋನಿ ಏಕದಿನ ಕ್ರಿಕೆಟ್ನಲ್ಲಿ ಯಶಸ್ಸು ಸಾಧಿಸಲು ಟೀಮ್ ಇಂಡಿಯಾದಲ್ಲಿ ಶ್ರೇಷ್ಠ ಆಟಗಾರರಿದ್ರು. ಹೀಗಾಗಿ ಧೋನಿ ಯಶಸ್ವಿ ನಾಯಕನಾಗಲು ಸಾಧ್ಯವಾಯ್ತು ಎಂದು ಗಂಭೀರ್ ಹೇಳಿದ್ದಾರೆ.
ಧೋನಿ ಒಬ್ಬ ಅದೃಷ್ಟವಂತ ನಾಯಕ. ಅವರ ಬಳಿ ಒಂದು ಅದ್ಭುತವಾದ ತಂಡವೇ ಇತ್ತು. ಅದು ಮೂರು ಮಾದರಿಯ ಕ್ರಿಕೆಟ್ನಲ್ಲೂ. 2011ರ ವಿಶ್ವಕಪ್ ನಲ್ಲಿ ಧೋನಿಗೆ ತಂಡವನ್ನು ಮುನ್ನಡೆಸುವುದು ತುಂಬಾನೇ ಸುಲಭವಿತ್ತು. ತಂಡದಲ್ಲಿ ಸಚಿನ್, ಸೆಹ್ವಾಗ್, ನಾನು, ಯುವರಾಜ್ ಸಿಂಗ್, ಯೂಸೂಫ್ ಪಠಾಣ್, ವಿರಾಟ್ ಹೀಗೆ ಶ್ರೇಷ್ಠ ಆಟಗಾರರ ದಂಡೇ ಇತ್ತು. ಹೀಗಾಗಿಯೇ 2011ರ ವಿಶ್ವಕಪ್ ಗೆಲ್ಲಲು ಸಾಧ್ಯವಾಯ್ತು. ಈ ಯಶಸ್ಸಿಗೆ ಸೌರವ್ ಗಂಗೂಲಿಯೇ ಕಾರಣ. ಗಂಗೂಲಿಯವರ ಕಠಿಣ ಶ್ರಮ, ಬದ್ಧತೆ, ತ್ಯಾಗ, ಪ್ರತಿಭಾವಂತ ಆಟಗಾರರಿಗೆ ಮಣೆ ಹಾಕಿರುವುದರಿಂದ ನಾಯಕನಾಗಿ ಧೋನಿಗೆ ಹಲವು ಪ್ರಶಸ್ತಿಗಳನ್ನು ಗೆಲ್ಲಲು ಸಾಧ್ಯವಾಯ್ತು ಎಂದು ಗಂಭೀರ್ ಹೇಳಿದ್ದಾರೆ.