ADVERTISEMENT
Tuesday, March 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ರಕ್ಷಕರೇ ಭಕ್ಷಕರಾದರೆ ಮುಲಾಜಿಲ್ಲ: ಅಪರಾಧ ಕೃತ್ಯದಲ್ಲಿ ಭಾಗಿಯಾಗುವ ಪೊಲೀಸರಿಗೆ ಡಿಜಿಪಿ ಖಡಕ್ ಎಚ್ಚರಿಕೆ

DGP Khadak warns policemen involved in criminal activities

Shwetha by Shwetha
December 7, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಕಳ್ಳತನ, ದರೋಡೆ ಮತ್ತು ವಂಚನೆಯಂತಹ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಇಲಾಖೆಗೆ ತೀವ್ರ ಮುಜುಗರ ತಂದೊಡ್ಡಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆಯಂತೆ, ರಕ್ಷಣೆ ನೀಡಬೇಕಾದವರೇ ಕೃತ್ಯ ಎಸಗುತ್ತಿರುವ ಪ್ರವೃತ್ತಿಗೆ ಕಡಿವಾಣ ಹಾಕಲು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಡಾ.ಎಂ.ಎ. ಸಲೀಂ ಅವರು ರೌದ್ರಾವತಾರ ತಾಳಿದ್ದಾರೆ. ಇನ್ಮುಂದೆ ಖಾಕಿ ಬಟ್ಟೆ ಧರಿಸಿ ಅಪರಾಧ ಎಸಗಿದರೆ ಕೇವಲ ಅಮಾನತು ಮಾತ್ರವಲ್ಲ, ಜೈಲು ಶಿಕ್ಷೆಯ ಜೊತೆಗೆ ಸೇವೆಯಿಂದಲೇ ವಜಾಗೊಳ್ಳುವ ಸಾಧ್ಯತೆಯ ಕಠಿಣ ಕ್ರಮಗಳು ಕಾದಿವೆ.

ಖಾಕಿ ವರ್ಚಸ್ಸಿಗೆ ಮಸಿ ಬಳಿಯುವ ಪ್ರಕರಣಗಳು

Related posts

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

March 3, 2026
ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

March 3, 2026

ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧೆಡೆ ನಡೆದ ದರೋಡೆ ಮತ್ತು ವಂಚನೆ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿಯೇ ಪ್ರಮುಖ ಆರೋಪಿಗಳಾಗಿರುವುದು ಜನಸಾಮಾನ್ಯರು ಪೊಲೀಸ್ ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಈ ಆತಂಕಕಾರಿ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ ಸಲೀಂ, ಇಲಾಖೆಯ ವರ್ಚಸ್ಸನ್ನು ಉಳಿಸಲು ಕಠಿಣ ಆದೇಶವನ್ನು ಹೊರಡಿಸಿದ್ದಾರೆ.

ಇತ್ತೀಚೆಗೆ ಇಲಾಖೆಯ ತಲೆತಗ್ಗಿಸುವಂತೆ ಮಾಡಿದ ಪ್ರಮುಖ ಪ್ರಕರಣಗಳು ಹೀಗಿವೆ:

ದಾವಣಗೆರೆಯ ಸಿನಿಮೀಯ ದರೋಡೆ: ಚಿನ್ನದ ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿದ್ದ ಇಬ್ಬರು ಪೊಲೀಸ್ ಉಪನಿರೀಕ್ಷಕರು (ಪಿಎಸ್ಐ), ತಾವು ಸಿಐಡಿ ಅಧಿಕಾರಿಗಳೆಂದು ಸುಳ್ಳು ಹೇಳಿ ಬೆದರಿಸಿದ್ದರು. ಅಷ್ಟೇ ಅಲ್ಲದೆ, ನಕಲಿ ಪಿಸ್ತೂಲ್ ತೋರಿಸಿ ಆತನನ್ನು ಬಸ್ ನಿಲ್ದಾಣದಲ್ಲಿ ಕೂಡಿಹಾಕಿ, ಸುಮಾರು 80 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ರಕ್ಷಣೆ ಮಾಡಬೇಕಾದ ಅಧಿಕಾರಿಗಳೇ ದರೋಡೆಕೋರರಂತೆ ವರ್ತಿಸಿದ್ದು ಇಲಾಖೆಗೆ ಶಾಕ್ ನೀಡಿತ್ತು.

ಬೆಂಗಳೂರಿನ ಕೋಟ್ಯಂತರ ರೂ. ಕಳ್ಳತನ: ರಾಜಧಾನಿ ಬೆಂಗಳೂರಿನಲ್ಲಿ ಕ್ಯಾಶ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಮಾಜಿ ಸಿಬ್ಬಂದಿಯ ಜೊತೆಗೂಡಿ ಗೋವಿಂದಪುರ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಕೋಟ್ಯಂತರ ರೂಪಾಯಿ ದರೋಡೆಗೆ ಸ್ಕೆಚ್ ಹಾಕಿದ್ದರು. ಅತ್ಯಂತ ಯೋಜಿತವಾಗಿ ನಡೆದ ಈ ಕೃತ್ಯದಲ್ಲಿ ಪೊಲೀಸ್ ಸಿಬ್ಬಂದಿಯ ಪಾತ್ರವಿರುವುದು ಸಾಬೀತಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಮಾಲೂರು ಸುಲಿಗೆ ಪ್ರಕರಣ: ಬಿಪಿಒ ಸಂಸ್ಥೆಯ ಮ್ಯಾನೇಜರ್ ಒಬ್ಬರನ್ನು ಅಪಹರಿಸಿ ಹಣ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಮಾಲೂರಿನ ಹೆಡ್ ಕಾನ್ಸ್‌ಟೇಬಲ್ ಒಬ್ಬರನ್ನು ಬಂಧಿಸಲಾಗಿದೆ.

ಹಿರಿಯ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದ ಆದೇಶ

ಕೆಳಹಂತದ ಸಿಬ್ಬಂದಿ ತಪ್ಪು ಮಾಡಿದರೆ ಕೇವಲ ಅವರನ್ನಷ್ಟೇ ಹೊಣೆಗಾರರನ್ನಾಗಿ ಮಾಡದೆ, ಇನ್ಮುಂದೆ ಆಯಾ ಘಟಕದ ಮುಖ್ಯಸ್ಥರನ್ನೂ ಜವಾಬ್ದಾರರನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಘಟಕಾಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ:

ತೀವ್ರ ನಿಗಾ ಮತ್ತು ಹಿನ್ನೆಲೆ ಪರಿಶೀಲನೆ: ಪ್ರತಿಯೊಬ್ಬ ಅಧಿಕಾರಿಯು ತಮ್ಮ ಅಧೀನದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ನಡವಳಿಕೆ, ಪೂರ್ವಾಪರ ಮತ್ತು ಅವರ ಸಮಗ್ರತೆಯನ್ನು ನಿಯಮಿತವಾಗಿ ಪರಿಶೀಲಿಸಬೇಕು.

ನೈತಿಕ ಪಾಠ ಮತ್ತು ಎಚ್ಚರಿಕೆ: ಕಾನೂನುಬದ್ಧ ಕರ್ತವ್ಯಗಳು ಮತ್ತು ಭ್ರಷ್ಟಾಚಾರ ಅಥವಾ ಅಪರಾಧಗಳಲ್ಲಿ ಭಾಗಿಯಾದರೆ ಆಗುವ ಗಂಭೀರ ಪರಿಣಾಮಗಳ ಬಗ್ಗೆ ಸಿಬ್ಬಂದಿಗೆ ನಿರಂತರವಾಗಿ ಅರಿವು ಮೂಡಿಸಬೇಕು. ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

ಶೂನ್ಯ ಸಹಿಷ್ಣುತೆ: ಯಾವುದೇ ಪೊಲೀಸ್ ಸಿಬ್ಬಂದಿ ಅಕ್ರಮ ಚಟುವಟಿಕೆ ಅಥವಾ ದುರ್ವರ್ತನೆಯಲ್ಲಿ ತೊಡಗಿರುವುದು ಕಂಡುಬಂದರೆ, ಮುಲಾಜಿಲ್ಲದೆ ತಕ್ಷಣವೇ ಪೊಲೀಸ್ ಪ್ರಧಾನ ಕಚೇರಿಗೆ ವರದಿ ನೀಡಬೇಕು. ವಿಷಯವನ್ನು ಮುಚ್ಚಿಹಾಕಲು ಯತ್ನಿಸಿದರೆ ಮೇಲಧಿಕಾರಿಗಳೇ ಸಂಕಷ್ಟ ಎದುರಿಸಬೇಕಾಗುತ್ತದೆ.

ಮಾನಸಿಕ ಸ್ಥೈರ್ಯ ತುಂಬುವುದು: ಕೆಲವು ಬಾರಿ ಒತ್ತಡ ಅಥವಾ ಆರ್ಥಿಕ ಸಮಸ್ಯೆಯಿಂದ ಸಿಬ್ಬಂದಿ ಅಡ್ಡದಾರಿ ಹಿಡಿಯುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಸಿಬ್ಬಂದಿಯ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ನೈತಿಕ ಸ್ಥೈರ್ಯ ತುಂಬುವ ಮತ್ತು ಸಲಹೆ ನೀಡುವ ಕೆಲಸವನ್ನು ಮೇಲಧಿಕಾರಿಗಳು ಮಾಡಬೇಕು.

ಘೋರ ನಿರ್ಲಕ್ಷ್ಯ ಎಂದು ಪರಿಗಣನೆ

ಡಿಜಿಪಿ ಸಲೀಂ ಅವರು ತಮ್ಮ ಆದೇಶದಲ್ಲಿ ಅತ್ಯಂತ ಕಠಿಣವಾದ ಸಂದೇಶವನ್ನು ರವಾನಿಸಿದ್ದಾರೆ. ಇಲಾಖೆಯಲ್ಲಿ ದುರ್ನಡತೆಯನ್ನು ತಡೆಯುವಲ್ಲಿ ವಿಫಲರಾಗುವ ಘಟಕಾಧಿಕಾರಿಗಳ ವಿರುದ್ಧ ಘೋರ ನಿರ್ಲಕ್ಷ್ಯ ಎಂದು ಪರಿಗಣಿಸಿ, ಅಂತಹ ಅಧಿಕಾರಿಗಳ ವಿರುದ್ಧವೇ ಇಲಾಖಾ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪೊಲೀಸ್ ಇಲಾಖೆಯ ಘನತೆ, ಗೌರವ ಮತ್ತು ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ರಾಜ್ಯ ಪೊಲೀಸ್ ಇಲಾಖೆ ಸರ್ಜರಿಗೆ ಮುಂದಾಗಿದ್ದು, ತಪ್ಪು ಮಾಡುವ ಯಾರೇ ಆಗಲಿ ಇನ್ಮುಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದೆ.

ShareTweetSendShare
Join us on:

Related Posts

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

ಟಿ20 ವಿಶ್ವಕಪ್ ವೈಫಲ್ಯ: ಪಾಕಿಸ್ತಾನ ಆಟಗಾರರ ಮೇಲೆ ಭಾರೀ ದಂಡ

by Shwetha
March 3, 2026
0

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತ ತಲುಪಲು ವಿಫಲವಾದ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ತನ್ನ ಆಟಗಾರರ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಟೂರ್ನಿಯಲ್ಲಿ ನಿರಾಶಾಜನಕ ಪ್ರದರ್ಶನ...

ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

ಟ್ರಂಪ್‌ಗೆ ಮುಖಭಂಗ! ಸಂಧಾನದ ಆಫರ್ ಕಸದ ಬುಟ್ಟಿಗೆ ಎಸೆದ ಇರಾನ್ ಭದ್ರತಾ ಚಾಣಕ್ಯ: ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧದ ಕಾರ್ಮೋಡ

by Shwetha
March 3, 2026
0

ಪಶ್ಚಿಮ ಏಷ್ಯಾದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಕಿಚ್ಚು ತಣ್ಣಗಾಗುವ ಬದಲು ಮತ್ತಷ್ಟು ಉರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ್ದ ಸಂಧಾನದ ಪ್ರಸ್ತಾಪವನ್ನು...

ಪುಗಸಟ್ಟೆ ಕಲಿಸ್ತಾರಾ ಎಂದು ದರ್ಪ ತೋರಿದ್ದ ಶಿಕ್ಷಕಿಗೆ ಶಾಕ್: ಹಾಲ್ ಟಿಕೆಟ್ ತಡೆದಿದ್ದಕ್ಕೆ ಅಮಾನತು ಶಿಕ್ಷೆ

ಪುಗಸಟ್ಟೆ ಕಲಿಸ್ತಾರಾ ಎಂದು ದರ್ಪ ತೋರಿದ್ದ ಶಿಕ್ಷಕಿಗೆ ಶಾಕ್: ಹಾಲ್ ಟಿಕೆಟ್ ತಡೆದಿದ್ದಕ್ಕೆ ಅಮಾನತು ಶಿಕ್ಷೆ

by Shwetha
March 3, 2026
0

ರಾಣೇಬೆನ್ನೂರು: ವಿದ್ಯಾರ್ಥಿಗಳ ಪಾಲಿಗೆ ವಿದ್ಯಾದೇಗುಲವಾಗಬೇಕಿದ್ದ ಶಿಕ್ಷಣ ಸಂಸ್ಥೆಯೊಂದು ವ್ಯಾಪಾರ ಕೇಂದ್ರವಾಗಿ ಬದಲಾದ ಅಮಾನವೀಯ ಘಟನೆಗೆ ಶಿಕ್ಷಣ ಇಲಾಖೆ ಚುರುಕು ಮುಟ್ಟಿಸಿದೆ. ಶುಲ್ಕ ಬಾಕಿ ಇದೆ ಎಂಬ ಕಾರಣಕ್ಕೆ...

ವಿಶ್ವಗುರು ಪಟ್ಟಕ್ಕೇರಲು ಇದು ಸಕಾಲ, ಜಾಗತಿಕ ಶಾಂತಿಗೆ ಮುಂದಾಗಿ: ಪ್ರಧಾನಿ ಮೋದಿಗೆ ಓವೈಸಿ ಖಡಕ್ ಸಂದೇಶ

ವಿಶ್ವಗುರು ಪಟ್ಟಕ್ಕೇರಲು ಇದು ಸಕಾಲ, ಜಾಗತಿಕ ಶಾಂತಿಗೆ ಮುಂದಾಗಿ: ಪ್ರಧಾನಿ ಮೋದಿಗೆ ಓವೈಸಿ ಖಡಕ್ ಸಂದೇಶ

by Shwetha
March 3, 2026
0

ಹೈದರಾಬಾದ್: ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿರುವ ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಕಾರ್ಮೋಡ ದಟ್ಟವಾಗುತ್ತಿರುವ ಹೊತ್ತಿನಲ್ಲೇ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಪ್ರಧಾನಿ ನರೇಂದ್ರ...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (03-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 3, 2026
0

ದಿನ ಭವಿಷ್ಯ: 03-03-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಬಹಳ ಉತ್ಸಾಹದಾಯಕ ದಿನವಾಗಿದೆ. ರಾಶ್ಯಾಧಿಪತಿ ಕುಜನು ಅನುಕೂಲಕರ ಸ್ಥಾನದಲ್ಲಿರುವುದರಿಂದ ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗುತ್ತದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram