ಇತ್ತೀಚೆಗಷ್ಟೇ ಪೊಲೀಸರ ಗುಂಡಿಗೆ ಬಲಿಯಾದ ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆ ಎನ್ ಕೌಂಟರ್ ಗೂ ಮುನ್ನ ಪೊಲೀಸರ ಮೇಲೆ ೯ ಗುಂಡುಗಳನ್ನು ಹಾರಿಸಿದ್ದ ಎಂಬ ಮಾಹಿತಿ ಸಿಕ್ಕಿದೆ. ಉತ್ತರ ಪ್ರದೇಶದ ಪೊಲೀಸರ ಮಾಹಿತಿ ಪ್ರಕಾರ ವಿಕಾಸ್ ದುಬೆ ಪರಾರಿಯಾಗುವ ಯತ್ನದಲ್ಲಿ ಪೊಲಿಸರ ಮೇಲೆ ೯ ಗುಂಡುಗಳನ್ನು ಹಾರಿಸಿದ್ದ. ಅವುಗಳಲ್ಲಿ ೩ ಪೊಲೀಸ್ ಸಿಬ್ಬಂದಿಗೆ ತಗುಲಿ ಗಾಯಗೊಂಡಿದ್ದರು ಎಂದು ಪೊಲಿಸರು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ಇನ್ನು ದುಬೆ ಪರಾರಿಯಾಗಲು ಯತ್ನಿಸುತ್ತಿದುದರಿಂದ ಪೊಲೀಸರು ಸಿಡಿಸಿದ ಗುಂಡುಗಳು ಆತನ ಬೆನ್ನಿಗೆ ನಾಟಬೇಕಿತ್ತು. ಅದರ ಬದಲು ದೇಹದ ಮುಂಭಾಗಕ್ಕೆ ನಾಟಿದ್ದು ಹೇಗೆ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿರುವ ವಿಶೇಷ ಕಾರ್ಯಪಡೆ ಸಿಬ್ಬಂದಿ, ಆತ ನಮ್ಮ ಮೇಲೆ ಗುಂಡು ಸಿಡಿಸಲು ಮುಂದೆ ತಿರುಗಿದ್ದ. ಆಗ ಗುಂಡುಗಳು ಆತನ ದೇಹವನ್ನು ಮುಂಭಾಗದಿಂದ ಹೊಕ್ಕವು ಎಂದು ಸ್ಪಷ್ಟಪಡಿಸಿದರು. ದುಬೆ ಸಾವು ಪ್ರೀಪ್ಲಾನಡ್ ಎಂಬ ಕೆಲ ಆರೋಪಗಳು ಬಂದ ಬೆನ್ನಲ್ಲೇ ಪೊಲೀಸರು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಘಟನೆಯಲ್ಲಿ ಮುಖ್ಯಪೇದೆ ಸರ್ವಿಂದರ್ ಸಿಂಗ್ ಸೆನಗಾರ್ ಅವರ ಎಡಗೈಗೆ ಗುಮಡು ತತಗುಲಿ ಗಾಯಗೊಂಡಿದ್ದರು. ಮತ್ತೋರ್ವ ಪೇದೆ ಬಿಮಲ್ ಕುಮಾರ್ ಅವರ ಎಡತೊಡೆಗೂ ಗುಂಡು ತಗುಲಿತ್ತು.
ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ
ಡಿಕೆ ಶಿವಕುಮಾರ್ ಅವರು ತುಮಕೂರನ್ನು 2ನೇ ಬೆಂಗಳೂರು ಆಗಿ ಅಭಿವೃದ್ಧಿಪಡಿಸುವ ಆಲೋಚನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ ತುಮಕೂರಿನಲ್ಲಿ ಆಯೋಜಿಸಿದ್ದ...








