ಇತ್ತೀಚೆಗಷ್ಟೇ ಪೊಲೀಸರ ಗುಂಡಿಗೆ ಬಲಿಯಾದ ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆ ಎನ್ ಕೌಂಟರ್ ಗೂ ಮುನ್ನ ಪೊಲೀಸರ ಮೇಲೆ ೯ ಗುಂಡುಗಳನ್ನು ಹಾರಿಸಿದ್ದ ಎಂಬ ಮಾಹಿತಿ ಸಿಕ್ಕಿದೆ. ಉತ್ತರ ಪ್ರದೇಶದ ಪೊಲೀಸರ ಮಾಹಿತಿ ಪ್ರಕಾರ ವಿಕಾಸ್ ದುಬೆ ಪರಾರಿಯಾಗುವ ಯತ್ನದಲ್ಲಿ ಪೊಲಿಸರ ಮೇಲೆ ೯ ಗುಂಡುಗಳನ್ನು ಹಾರಿಸಿದ್ದ. ಅವುಗಳಲ್ಲಿ ೩ ಪೊಲೀಸ್ ಸಿಬ್ಬಂದಿಗೆ ತಗುಲಿ ಗಾಯಗೊಂಡಿದ್ದರು ಎಂದು ಪೊಲಿಸರು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ಇನ್ನು ದುಬೆ ಪರಾರಿಯಾಗಲು ಯತ್ನಿಸುತ್ತಿದುದರಿಂದ ಪೊಲೀಸರು ಸಿಡಿಸಿದ ಗುಂಡುಗಳು ಆತನ ಬೆನ್ನಿಗೆ ನಾಟಬೇಕಿತ್ತು. ಅದರ ಬದಲು ದೇಹದ ಮುಂಭಾಗಕ್ಕೆ ನಾಟಿದ್ದು ಹೇಗೆ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿರುವ ವಿಶೇಷ ಕಾರ್ಯಪಡೆ ಸಿಬ್ಬಂದಿ, ಆತ ನಮ್ಮ ಮೇಲೆ ಗುಂಡು ಸಿಡಿಸಲು ಮುಂದೆ ತಿರುಗಿದ್ದ. ಆಗ ಗುಂಡುಗಳು ಆತನ ದೇಹವನ್ನು ಮುಂಭಾಗದಿಂದ ಹೊಕ್ಕವು ಎಂದು ಸ್ಪಷ್ಟಪಡಿಸಿದರು. ದುಬೆ ಸಾವು ಪ್ರೀಪ್ಲಾನಡ್ ಎಂಬ ಕೆಲ ಆರೋಪಗಳು ಬಂದ ಬೆನ್ನಲ್ಲೇ ಪೊಲೀಸರು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಘಟನೆಯಲ್ಲಿ ಮುಖ್ಯಪೇದೆ ಸರ್ವಿಂದರ್ ಸಿಂಗ್ ಸೆನಗಾರ್ ಅವರ ಎಡಗೈಗೆ ಗುಮಡು ತತಗುಲಿ ಗಾಯಗೊಂಡಿದ್ದರು. ಮತ್ತೋರ್ವ ಪೇದೆ ಬಿಮಲ್ ಕುಮಾರ್ ಅವರ ಎಡತೊಡೆಗೂ ಗುಂಡು ತಗುಲಿತ್ತು.
SIR ಕರಡು ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರು ಇದೆಯೇ ಎಂದು ಆನ್ಲೈನ್ನಲ್ಲಿ ಚೆಕ್ ಮಾಡಿ
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದಾಗಿದೆ. ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್ನಲ್ಲಿ SIR-2026,...








