ADVERTISEMENT
Wednesday, May 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಹೈಡ್ರಾಕ್ಸಿಕ್ಲೋರೋಕ್ವಿನ್, ರೆಮ್ ಡೆಸಿವಿಯರ್ ಪ್ರಭಾವ ಮತ್ತು ಪರಿಣಾಮಗಳ ಕುರಿತು ಬ್ರಿಟನ್ ಸಂಶೋಧಕರ ಅಧ್ಯಯನದ ವರದಿಗಳೇನು ಗೊತ್ತಾ?

admin by admin
July 27, 2020
in Health, Newsbeat, Saaksha Special, ಆರೋಗ್ಯ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಹೈಡ್ರಾಕ್ಸಿಕ್ಲೋರೋಕ್ವಿನ್, ರೆಮ್ ಡೆಸಿವಿಯರ್ ಪ್ರಭಾವ ಮತ್ತು ಪರಿಣಾಮಗಳ ಕುರಿತು ಬ್ರಿಟನ್ ಸಂಶೋಧಕರ ಅಧ್ಯಯನದ ವರದಿಗಳೇನು ಗೊತ್ತಾ?

ಹೊಸದಿಲ್ಲಿ, ಜುಲೈ 27: ಜಾಗತಿಕ ಮಟ್ಟದಲ್ಲಿ ಕೋವಿಡ್-19 ಗೆ ಯಾವ ಚಿಕಿತ್ಸೆಗಳು ಹೇಗೆ ಕೆಲಸ ಮಾಡುತ್ತಿವೆ ಅಥವಾ ಯಾವುದು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ ಎಂಬುದರ ಕುರಿತು ಬ್ರಿಟೀಶ್ ಸಂಶೋಧಕರ ಇತ್ತೀಚೆಗಿನ ಕೆಲವು ಹೊಸ ಅಧ್ಯಯನಗಳು ಹೆಚ್ಚಿನ ಮಾಹಿತಿ ನೀಡಿವೆ. ಉತ್ತಮ ಗುಣಮಟ್ಟದ ವಿಧಾನಗಳು ವಿಶ್ವಾಸಾರ್ಹ ಫಲಿತಾಂಶಗಳನ್ನು ನೀಡಿವೆ ಎನ್ನುವುದು ಈ ಹೊಸ ಅಧ್ಯಯನದಿಂದ ತಿಳಿದುಬಂದಿದೆ.

Related posts

ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ

ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ

May 19, 2026
ಟ್ರಂಪ್ ಮತ್ತೆ ಎಚ್ಚರಿಕೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಳ

ಟ್ರಂಪ್ ಮತ್ತೆ ಎಚ್ಚರಿಕೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಳ

May 19, 2026

ಬ್ರಿಟಿಷ್ ಸಂಶೋಧಕರು ಶುಕ್ರವಾರ ತಮ್ಮ ಸಂಶೋಧನೆಯಲ್ಲಿ ಕೊರೋನಾ ಸೋಂಕಿನಿಂದ ಸುಧಾರಿಸಲು ಸಹಾಯ ಮಾಡುವ ಏಕೈಕ ಔಷಧ ಡೆಕ್ಸಮೆಥಾಸೊನ್ ಎಂಬ ಅಗ್ಗದ ಸ್ಟೀರಾಯ್ಡ್ ಬಗ್ಗೆ ಅಧ್ಯಯನ ವರದಿಯೊಂದನ್ನು ಪ್ರಕಟಿಸಿದ್ದಾರೆ.
ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಕೇವಲ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಸಹಾಯ ಮಾಡುವುದಿಲ್ಲ ಎನ್ನುವುದರ ಕುರಿತಾಗಿ ಇತರ ಎರಡು ಅಧ್ಯಯನಗಳಲ್ಲಿ ಬೆಳಕು ಚೆಲ್ಲಲಾಗಿದೆ.

ಈ ರೀತಿಯ ಅಧ್ಯಯನಗಳ ನಡೆಯುವ ತಿಂಗಳುಗಳ ಮೊದಲು, ವೈದ್ಯರು ಮತ್ತು ರೋಗಿಗಳು ತಮ್ಮದೇ ಆದ ಪ್ರತ್ಯೇಕ ಚಿಕಿತ್ಸೆಯನ್ನು ಪ್ರಯತ್ನಿಸಿದ್ದರಿಂದ ಸ್ಪಷ್ಟವಾದ ಉತ್ತರಗಳು ಸಿಗುವಲ್ಲಿ‌ ವಿಫಲವಾಗಿದೆ. ವೈದ್ಯಕೀಯ ಕ್ಷೇತ್ರವು ಮುಂದುವರಿಯಲು ಮತ್ತು ರೋಗಿಗಳ ಫಲಿತಾಂಶಗಳು ಸುಧಾರಿಸಲು, ಆಗಾಗ ಇಂತಹ ಅನಿರ್ದಿಷ್ಟ ಅಧ್ಯಯನಗಳು ಅಗತ್ಯ ಎಂದು ಬ್ರಿಟಿಷ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಡಾ.‌ ಆಂಥೋನಿ ಫೌಸಿ ಮತ್ತು ಹೆಚ್. ಕ್ಲಿಫರ್ಡ್ ಲೇನ್ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿನ ತಮ್ಮ ವರದಿಯಲ್ಲಿ ಬರೆದುಕೊಂಡಿದ್ದಾರೆ. ಚಿಕಿತ್ಸೆಗಳು ಮತ್ತು ಪರೀಕ್ಷಾ ಸಂಯೋಜನೆಗಳನ್ನು ಹೋಲಿಸುವ ಹೆಚ್ಚಿನ ಅಧ್ಯಯನಗಳನ್ನು ಮಾಡುವ ಸಮಯ ಇದೀಗ ಬಂದಿದೆ ಎಂದು ನ್ಯೂಯಾರ್ಕ್‌ನ ಸ್ಲೋನ್ ಕೆಟ್ಟರಿಂಗ್ ಕ್ಯಾನ್ಸರ್ ಕೇಂದ್ರದ ಆರೋಗ್ಯ ನೀತಿ ತಜ್ಞ ಡಾ. ಪೀಟರ್ ಬಾಚ್ ಹೇಳಿದ್ದಾರೆ

ಇತ್ತೀಚಿನ ಚಿಕಿತ್ಸೆಯ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ:

1) ಡೆಕ್ಸಮೆಥಾಸೊನ್:

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ನೇತೃತ್ವದ ಬ್ರಿಟಿಷ್ ಅಧ್ಯಯನವು ಉರಿಯೂತವನ್ನು ತಗ್ಗಿಸಲು ವ್ಯಾಪಕವಾಗಿ ಬಳಸಲಾಗುವ ಒಂದು ರೀತಿಯ ಸ್ಟೀರಾಯ್ಡ್ ಅನ್ನು ಪರೀಕ್ಷಿಸಿತು. ಇದು ತೀವ್ರವಾದ ಲಕ್ಷಣಗಳುಳ್ಳ ಮತ್ತು ಕೋವಿಡ್-19 ಸೋಂಕಿನ ನಂತರದ ಹಂತಗಳಲ್ಲಿ ರೋಗಿಗಳಿಗೆ ಮಾರಕವಾಗಬಹುದು ಎನ್ನುವ ಆಘಾತಕಾರಿ ಸಂಗತಿಯನ್ನು ಬಹಿರಂಗಗೊಳಿಸಲಾಗಿದೆ. ಈ ಔಷಧವನ್ನು ನೀಡಿದ ಸುಮಾರು 2,104 ರೋಗಿಗಳ ಜೊತೆಗೆ ಸಾಮಾನ್ಯ ಆರೈಕೆ ಪಡೆಯುವ 4,321 ರೋಗಿಗಳಿಗೆ ಲಕ್ಷಣಗಳನ್ನು ಹೋಲಿಕೆ ಮಾಡಿ ಅಧ್ಯಯನ ವರದಿ ತಯಾರಿಸಲಾಗಿದೆ.

ಉಸಿರಾಟದ ಯಂತ್ರಗಳ ಅಗತ್ಯವಿರುವ ರೋಗಿಗಳ ಸಾವುಗಳನ್ನು ಇದು 36% ರಷ್ಟು ಕಡಿಮೆ ಮಾಡಿದೆ. ಈ ಔಷಧದ ಚಿಕಿತ್ಸೆ ಪಡೆದ ಮೇಲೆ ಶೇ 41% ರಷ್ಟು ಸಾಮಾನ್ಯ ಆರೈಕೆ ನೀಡಲಾಗಿರುವ ರೋಗಿಗಳಲ್ಲಿ ಶೇ. 29% ಜನರು ಸಾವನ್ನಪ್ಪಿದ್ದಾರೆ. ಕೇವಲ ಪೂರಕ ಆಮ್ಲಜನಕದ ಅಗತ್ಯವಿರುವ ರೋಗಿಗಳಿಗೆ ಮಾತ್ರ ಇದು ಸಾವಿನ ಅಪಾಯವನ್ನು 18% ರಷ್ಟು ತಡೆಯುತ್ತದೆ.‌ ಔಷಧ ಪಡೆದ ಮೇಲೆ 23% ಜನರು ಮತ್ತು ಇತರ ವರ್ಗದ 26% ರಷ್ಟು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆದಾಗ್ಯೂ, ಇದು ಪ್ರಾರಂಭಿಕ ಹಂತಗಳಲ್ಲಿ ಅಥವಾ ಅನಾರೋಗ್ಯದ ಸೌಮ್ಯ ಪ್ರಕರಣಗಳಲ್ಲಿ ಹಾನಿಕಾರಕವೆಂದು ತೋರುತ್ತಿದೆ. ಔಷಧ ಪಡೆದವರಲ್ಲಿ 18% ಜನರು ಸಾವನ್ನಪ್ಪಿದರೆ, 14% ಜನರು ಸಾಮಾನ್ಯ ಆರೈಕೆಯನ್ನು ಪಡೆದು ಚೇತರಿಸಿಕೊಂಡಿದ್ದಾರೆ. ಇದು ‌ಯಾರಿಗೆ ಪ್ರಯೋಜನ ಮತ್ತು ಇದರಿಂದ ಯಾರಿಗೆ ಉಪಯೋಗವಿಲ್ಲ ಎಂಬ ಸ್ಪಷ್ಟತೆ ದೊರೆತರೆ ಬಹುಶಃ ಅನೇಕ ಜೀವಗಳನ್ನು ಉಳಿಸಬಹುದು ಎಂದು ಫೌಸಿ ಮತ್ತು ಲೇನ್ ಅಭಿಪ್ರಾಯಪಟ್ಟಿದ್ದಾರೆ.

2) ಹೈಡ್ರಾಕ್ಸಿಕ್ಲೋರೋಕ್ವಿನ್:

ಅದೇ ಆಕ್ಸ್‌ಫರ್ಡ್ ಅಧ್ಯಯನವು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಕಠಿಣ ರೀತಿಯಲ್ಲಿ ಪರೀಕ್ಷೆ ನಡೆಸಿದೆ. ಸಂಶೋಧಕರು ಈ ಹಿಂದೆ ಕೋವಿಡ್-19 ಯೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಇದು ಸಹಾಯ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

28 ದಿನಗಳ ನಂತರ, ಹೈಡ್ರಾಕ್ಸಿಕ್ಲೋರೊಕ್ವಿನ್ನಲ್ಲಿ ಸುಮಾರು 25.7% ರಷ್ಟು ಸಾಮಾನ್ಯ ಆರೈಕೆಯನ್ನು ಪಡೆದರೆ, 23.5% ನಷ್ಟು ಜನರು ಸಾವನ್ನಪ್ಪಿದ್ದಾರೆ. ಆಕಸ್ಮಿಕವಾಗಿ ಈ ಸಾವುಗಳು ಸಂಭವಿಸಿರಬಹುದು ಎಂದು ಮೊದಲು ನಂಬಲಾಗಿತ್ತು. ಆದರೆ ಈಗ, ವಿಜ್ಞಾನಿಗಳ ಸಂಶೋಧನಾ ತಾಣದಲ್ಲಿ ಪ್ರಕಟವಾದ ವಿವರಗಳು ಈ ಔಷದಿಯಿಂದಾಗಿ ಸಾವುಗಳು ಸಂಭವಿಸಿರಬಹುದು ಎನ್ನುವ ಅನುಮಾನ ಹುಟ್ಟಿಸಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಿದ ರೋಗಿಗಳಲ್ಲಿ 60% ನಷ್ಟು ಮಂದಿ 28 ದಿನಗಳ ನಂತರ ಆಸ್ಪತ್ರೆಯಿಂದ ಜೀವಂತ ಹೊರಬರುವವರ ಸಂಖ್ಯೆ ಕಡಿಮೆ ಇದೆ. ಶೇ. 63% ರಷ್ಟು ಜನರು ಸಾಮಾನ್ಯ ಆರೈಕೆ ಪಡೆದು ಬದುಕಿದ್ದಾರೆ. ಈ ಚಿಕಿತ್ಸೆಯನ್ನು ಪ್ರಾರಂಭಿಸಿದಾಗ ಉಸಿರಾಟದ ಯಂತ್ರಗಳ ಅಗತ್ಯವಿಲ್ಲದವರು ಸಹ 1% ನಷ್ಟು ರೋಗಿಗಳು ಸಾಯುವ ಸಾಧ್ಯತೆ ಹೆಚ್ಚು ಎಂದು ತಿಳಿಸಲಾಗಿದೆ. ಇತರ ಎರಡು ಪ್ರಯೋಗಗಳು ಔಷಧದ ಆರಂಭಿಕ ಚಿಕಿತ್ಸೆಯು ಸೌಮ್ಯ ಕೋವಿಡ್-19 ಹೊಂದಿರುವ ಹೊರರೋಗಿಗಳಿಗೆ ಸಹಾಯ ಮಾಡುವುದಿಲ್ಲ ಎಂದು ತಿಳಿದುಬಂದಿದೆ.

ಸಾಂಕ್ರಾಮಿಕ ಕಾಯಿಲೆಗಳ ಜರ್ನಲ್ ನಲ್ಲಿ ಪ್ರಕಟವಾದ ಸ್ಪೇನ್‌ನ 293 ಜನರ ಅಧ್ಯಯನವು ವೈರಸ್ ರೋಗಿಗಳ ಪ್ರಮಾಣವನ್ನು ಕಡಿಮೆ ಮಾಡುವುದರಲ್ಲಿ, ಹದಗೆಡುತ್ತಿರುವ ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ ಅಥವಾ ಚೇತರಿಸಿಕೊಳ್ಳುವ ಸಮಯದಲ್ಲಿ ಯಾವುದೇ ಮಹತ್ವದ ವ್ಯತ್ಯಾಸಗಳನ್ನು ಕಂಡುಕೊಂಡಿಲ್ಲ.

423 ಜನ ಲಘು ಅನಾರೋಗ್ಯದ ಕೋವಿಡ್-19 ರೋಗಿಗಳ ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಮಿನ್ನೇಸೋಟ ವಿಶ್ವವಿದ್ಯಾಲಯದ ವೈದ್ಯರು ನಡೆಸಿದ ಇದೇ ರೀತಿಯ ಅಧ್ಯಯನವು ಹೈಡ್ರಾಕ್ಸಿಕ್ಲೋರೋಕ್ವಿನ್ ರೋಗಲಕ್ಷಣದ ತೀವ್ರತೆಯನ್ನು ಗಣನೀಯವಾಗಿ ಕಡಿಮೆಗೊಳಿಸಲಿಲ್ಲ ಮತ್ತು ಹೆಚ್ಚಿನ ಅಡ್ಡಪರಿಣಾಮಗಳನ್ನು ತಂದಿದೆ ಎಂದು ಸಾಬೀತು ಮಾಡಲಾಗಿದೆ.

3) ರೆಮ್ ಡೆಸಿವಿಯರ್:

ಕೋವಿಡ್-19 ರೋಗಿಗಳಿಗೆ ಸಹಾಯ ಮಾಡುವ ಇತರ ಚಿಕಿತ್ಸೆಯಲ್ಲಿ ರೆಮ್ಡೆಸಿವಿರ್ ಕೂಡ ಒಂದು. ಇದು ಆಂಟಿವೈರಲ್ ಔಷದವಾಗಿದ್ದು, ಕರೋನಾ ಸೋಂಕಿತರಿಗೆ ರೋಗನಿಯಂತ್ರಣಕ್ಕಾಗಿ ಈ ಮಾತ್ರೆ ನೀಡಲಾಗುತ್ತಿದೆ.

ತೀವ್ರವಾದ ಕೋವಿಡ್ ಸೋಂಕಿಗೆ ರೆಮ್‌ಡೆಸಿವಿರ್‌ನ ಪಾತ್ರವನ್ನು ನಾವು ಕಂಡುಹಿಡಿಯಬೇಕಾಗಿದೆ ಎಂದು ಮೆಮೋರಿಯಲ್ ಸ್ಲೋನ್ ಕೆಟ್ಟರಿಂಗ್ಸ್ ಬ್ಯಾಚ್ ಇಮೇಲ್ ನಲ್ಲಿ ಬರೆದಿದ್ದಾರೆ. ಈ ಔಷಧವನ್ನು ಈಗ ಡೆಕ್ಸಮೆಥಾಸೊನ್ ಸಂಯೋಜನೆಯೊಂದಿಗೆ ಪರೀಕ್ಷಿಸಬೇಕಾಗಿದೆ. ರೆಮ್ ಡೆಸಿವಿರ್ ಅಧ್ಯಯನದ ವಿವರಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ, ಆದರೆ ಎಷ್ಟು ರೋಗಿಗಳು ಸ್ಟೀರಾಯ್ಡ್ಗಳು ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ನಂತಹ ಇತರ ಔಷಧಿಗಳನ್ನು ಪಡೆದಿದ್ದಾರೆ ಎಂಬುದನ್ನು ತಿಳಿಯಲು ಸಂಶೋಧಕರು ಉತ್ಸುಕರಾಗಿದ್ದಾರೆ.

ಏತನ್ಮಧ್ಯೆ, ಈಗ ಐವಿ ಆಗಿ ನೀಡಲಾಗಿರುವ ರಿಮೆಡೆಸಿವಿರ್ ಅನ್ನು ತಯಾರಿಸುವ ಗಿಲ್ಯಾಡ್ ಸೈನ್ಸಸ್, ಇನ್ಹೇಲ್ ಮಾಡಿದ ಆವೃತ್ತಿಯನ್ನು ಪರೀಕ್ಷಿಸಲು ಪ್ರಾರಂಭಿಸಿದೆ, ಅದು ಕಡಿಮೆ ಅನಾರೋಗ್ಯದ ಕೋವಿಡ್ -19 ರೋಗಿಗಳಲ್ಲಿ ಪ್ರಯತ್ನಿಸಲು ಅನುವು ಮಾಡಿಕೊಡುತ್ತದೆ ಮತ್ತು ಸಾಧ್ಯವಾದಷ್ಟು ಕಾಯಿಲೆಯಿಂದ ಬಳಲುವ ರೋಗಿಗಳನ್ನು ಆಸ್ಪತ್ರೆಗೆ ದಾಖಲಾಗದಂತೆ ತಡೆಯಬಹುದು ಎನ್ನಲಾಗಿದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಈ ಬ್ರಿಟನ್ ಸಂಶೋಧಕರು ಯುರೋಪಿಯನ್ ರೋಗಿಗಳ ಮೇಲೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮತ್ತು ರೆಮ್ ಡೆಸಿವಿರ್ ನಂತಹ ಮಾತ್ರೆಗಳ ಪ್ರಮಾಣ ಮತ್ತು ಪರಿಣಾಮಗಳನ್ನು ಅಧ್ಯಯನ ಮಾಡಿದ್ದಾರೆ. ಭಾರತದಂತಹ ರಾಷ್ಟ್ರಗಳಲ್ಲಿ ಇವೇ ಎರಡು ಮಾತ್ರೆಗಳನ್ನು ಪ್ರಮುಖವಾಗಿ ಕರೋನಾ ಸೋಂಕಿತರಿಗೆ ನೀಡಲಾಗುತ್ತಿದೆ ಮತ್ತು ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮಲ್ಲೂ ಈ ರೀತಿಯ ಆಮೂಲಾಗ್ರ ಸಂಶೋಧನೆಗಳಾಗಬೇಕಿದೆ.

Tags: BritishcoronavaccinecoronavirusCOVID-19hydroxychloroquinemedicineRemdesivirResearchViralcoronavirus
ShareTweetSendShare
Join us on:

Related Posts

ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ

ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ

by Shwetha
May 19, 2026
0

ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಪೋಷಕರಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಇತ್ತೀಚಿನ ತೈಲ ಬೆಲೆ ಏರಿಕೆಯು ನೇರವಾಗಿ ಶಾಲಾ ಮಕ್ಕಳ ಸಾರಿಗೆಯ ಮೇಲೆ...

ಟ್ರಂಪ್ ಮತ್ತೆ ಎಚ್ಚರಿಕೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಳ

ಟ್ರಂಪ್ ಮತ್ತೆ ಎಚ್ಚರಿಕೆ; ಅಮೆರಿಕ-ಇರಾನ್ ಉದ್ವಿಗ್ನತೆ ಹೆಚ್ಚಳ

by Shwetha
May 19, 2026
0

ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಆತಂಕಕಾರಿ ಹೇಳಿಕೆ ನೀಡಿ ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಾರೆ. ಇರಾನ್ ಜೊತೆಗಿನ ಅಣು ಒಪ್ಪಂದದ ಸಾಧ್ಯತೆಗಳು ಹಾಗೂ ಹೊಸ ಸಂಘರ್ಷದ ಭೀತಿಯ...

ವಿಸ್ಕಿ ರಮ್ ಬಿಯರ್ ಪ್ರಿಯರಿಗೆ ಬಂಪರ್ ಆಫರ್ ರಾಜ್ಯ ಸರ್ಕಾರದಿಂದ ಮದ್ಯದ ದರದಲ್ಲಿ ಭಾರಿ ಇಳಿಕೆ ಹೊಸ MRP ಲಿಸ್ಟ್ ಇಲ್ಲಿದೆ

ವಿಸ್ಕಿ ರಮ್ ಬಿಯರ್ ಪ್ರಿಯರಿಗೆ ಬಂಪರ್ ಆಫರ್ ರಾಜ್ಯ ಸರ್ಕಾರದಿಂದ ಮದ್ಯದ ದರದಲ್ಲಿ ಭಾರಿ ಇಳಿಕೆ ಹೊಸ MRP ಲಿಸ್ಟ್ ಇಲ್ಲಿದೆ

by Shwetha
May 19, 2026
0

ಬೆಂಗಳೂರು ಕರ್ನಾಟಕದ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರವು ಒಂದು ದೊಡ್ಡ ಸಿಹಿಸುದ್ದಿ ನೀಡಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026 27 ರ ರಾಜ್ಯ ಬಜೆಟ್...

ಕೇರಳ: 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ UDF ಸಂಪುಟ ಪ್ರಮಾಣ ವಚನ

ಕೇರಳ: 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ UDF ಸಂಪುಟ ಪ್ರಮಾಣ ವಚನ

by Shwetha
May 19, 2026
0

ವಿ.ಡಿ. ಸತೀಶನ್ ಅವರು ಕೇರಳದ ನೂತನ ಮುಖ್ಯಮಂತ್ರಿಯಾಗಿ ಭರ್ಜರಿ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಕೇರಳದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ವಿಶೇಷವೆಂದರೆ, ಕಳೆದ...

ಮುಷ್ಕರಕ್ಕೆ ಸಜ್ಜಾದ ನೌಕರರಿಗೆ ಬಿಗ್ ಶಾಕ್: ನೋ ವರ್ಕ್ ನೋ ಪೇ ನಿಯಮ ಜಾರಿಗೆ ತಂದ ಕೆಎಸ್ಆರ್ಟಿಸಿ

ಮುಷ್ಕರಕ್ಕೆ ಸಜ್ಜಾದ ನೌಕರರಿಗೆ ಬಿಗ್ ಶಾಕ್: ನೋ ವರ್ಕ್ ನೋ ಪೇ ನಿಯಮ ಜಾರಿಗೆ ತಂದ ಕೆಎಸ್ಆರ್ಟಿಸಿ

by Shwetha
May 19, 2026
0

ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಯಲ್ಲಿ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿರುವ ನೌಕರರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram