ಬಾಲಿವುಡ್ ನಲ್ಲಿನ ನೆಪೋಟಿಸಮ್ / ಸ್ವಜನಪಕ್ಷಪಾತ / ಬಾಲಿವುಡ್ ಮಾಫಿಯಾ ವಿರುದ್ಧ ಸಿಡಿದಿದ್ದೆರುವ ಕಂಗನಾ ರಣಾವತ್ ಸದ್ಯಕ್ಕೆ ಬಿ ಟೌನ ನ ಟಾಕ್ ಆಫ್ ದಿ ಟವನ್ ಆಗಿದ್ದಾರೆ. ಅದ್ರಲ್ಲೂ ಸುಶಾಂತ್ ಸಾವಿನ ಬಳಿಕ ಇದು ಕೊಲೆ ಎಂದು ವಾದಿಸುತ್ತಾ, ಕರಣ್ ಜೋಹರ್ ಸೇರಿ ದೊಡ್ಡ ದೊಡ್ಡ ಮಂದಿಯತ್ತ ಬೊಟ್ಟು ಮಾಡಿ ತೋರಿಸಿಯೇ ಸುದ್ದಿಯಲ್ಲಿರುವ ಕಂಗನಾ ಟಾಲಿವುಡ್ ನಟ ರಾಣಾದಗ್ಗುಬಾಟಿ ಜೊತೆ ಮಾತುಕತೆ ನಡೆಸಲು ಸಿದ್ಧರಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ರಾಣಾ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ನಟಿ ಕಂಗನಾ ಜೊತೆ ಮಾತುಕತೆ ನಡೆಸಲಿರುವ ಬಗ್ಗೆ ಕಂಗನಾ ಮಾಹಿತಿ ನೀಡಿದ್ದು, ಈ ಇಬ್ಬರು ನಟರ ನಡುವಿನ ಚರ್ಚೆ ವಿಚಾರ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ತೆಲುಗು ಸ್ಟಾರ್ ರಾಣಾ ದಗ್ಗುಬಾಟಿ ಜೊತೆ ಸಿನಿಮಾ ಮಾಡುತ್ತಾರಾ, ಮತ್ತೆ ತೆಲುಗು ಚಿತ್ರರಂಗದ ಕಡೆ ಬರ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅಥವಾ ರಾಣಾ, ಕಂಗನಾ ಮುಂದಿನ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾರಾ ಎನ್ನುವುದು ಸಹ ಕುತೂಹಲದ ಸಂಗತಿಯಾಗಿದೆ.
ತಮಿಳುನಾಡು ರೈತರಿಗೂ ಸಿಹಿ ಸುದ್ದಿ ಕೊಟ್ಟರಾ ಡಿ ಕೆ ಶಿವಕುಮಾರ್ :ದಕ್ಷಿಣ ಭಾರತದ ಹೃದಯದಂತಿರುವ ಮೇಕೆದಾಟು ಯೋಜನೆ ಬಗ್ಗೆ ಕನ್ನಡಿಗರು ಮತ್ತು ತಮಿಳುನಾಡಿನವರು ತಿಳಿಯಲೇಬೇಕಾದ ಸತ್ಯವಿದು
ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ, ಇದು ಇಡೀ ದಕ್ಷಿಣ ಭಾರತದ ಪಾಲಿನ ಅತ್ಯಂತ ಮಹತ್ವದ ಮತ್ತು ಆಯಕಟ್ಟಿನ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ನಾವು ನೆರೆ...








