ಮಹತ್ವದ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಾಂಖರ್ ಸಾರ್ವಜನಿಕ ಹಣದ ದುರುಪಯೋಗ ಆರೋಪ ಕೇಳಿ ಬಂದ ಕಾರಣ ರಾಜ್ಯ ಸರಕಾರದ ಮಾಹಿತಿ ಕೋರಿದ್ದಾರೆ. ಮಮತಾ ಸರಕಾರ ಹೊಸ ಪೌರತ್ವ ಕಾನೂನಿನ ವಿರುದ್ಧ ಜಾಹೀರಾತು ಪ್ರಚಾರ ಅಭಿಯಾನವನ್ನು ಕೈಗೊಂಡಿತ್ತು . ಇದೀಗ ಅದನ್ನು ಅನುಮೋದಿಸಿದ ಅಧಿಕಾರಿಗಳ ಮಾಹಿತಿಯನ್ನು ಕೇಳಿದ್ದಾರೆ. ರಾಜ್ಯಪಾಲರ ಕಚೇರಿಯಿಂದ ಪ್ರಧಾನ ಕಾರ್ಯದರ್ಶಿ, ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳು ಅವರಿಗೆ ಸೂಕ್ತ ಮಾಹಿತಿ ಒದಗಿಸಲು ಸೂಚನೆ ನೀಡಿದ್ದಾರೆ.
ಈ ಮೊದಲು ಕೋಟಿ, ಕೋಟಿ ರೂಪಾಯಿಗಳನ್ನು ಪೌರತ್ವ ಕಾಯ್ದೆಯ ವಿರುದ್ಧ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗಿತ್ತು. ಹಿರಿಯ ಆಡಳಿತ ತಂಡ , ಪೊಲೀಸ್ ಕಾರ್ಯಕಾರಿಗಳು, ಮುಖ್ಯ ಮತ್ತು ಗೃಹ ಇಲಾಖೆಯ ಕಾರ್ಯದರ್ಶಿಗಳು ಭಾಗಿಯಾಗಿರುವುದು ವಿಪರ್ಯಾಸ ಎಂದು ಆತಂಕ ವ್ಯಕ್ತಪಡಿಸಿದರು. ಧನ್ಕರ್ ಈ ಮೊದಲು ರಾಜ್ಯ ಸರಕಾರಕ್ಕೆ ಹಣ ದುರುಪಯೋಗದ ಬಗ್ಗೆ ಚಾಟಿ ಬೀಸಿದ್ದರು. ಇತ್ತೀಚೆಗೆ ಕಲ್ಕತ್ತ ಹೈಕೋರ್ಟ್ ಎಲ್ಲ ಜಾಹಿರಾತುಗಳಿಗೆ ನಿರ್ಬಂಧ ಹೇರಿತ್ತು.
ಒಂದು ವೇಳೆ ಅಕ್ರಮ ಎಸಗಿದ್ದರೆ ಮಮತಾ ಕಾನೂನು ಕ್ರಮ ಎದುರಿಸಲಿದ್ದಾರೆ. ಈ ಮೊದಲು ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಯಡ್ಯೂರಪ್ಪ ತನ್ನ ಮುಖ್ಯಮಂತ್ರಿ ಸ್ಥಾನವನ್ನು ಕಳೆದು ಕೊಂಡಿದ್ದರು. ರಾಜ್ಯಪಾಲರ ನೋಟೀಸಿಗೆ ರಾಜ್ಯ ಸರಕಾರ ಯಾವ ರೀತಿ ಉತ್ತರ ನೀಡುತ್ತದೆ ಎಂದು ಕಾದು ನೋಡಬೇಕಿದೆ.








