ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್ ಕರ್ನಾಟಕಕ್ಕೆ ಪ್ರವೇಶಿಸಿದೆ. ತೆಲಂಗಾಣಕ್ಕೆ ಪ್ರಯಾಣಿಸಿದ್ದ ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದನ್ನು ತೆಲಂಗಾಣ ಆರೋಗ್ಯ ಸಚಿವರು ಖಚಿತ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ 24 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಇತ್ತೀಚೆಗಷ್ಟೇ ದುಬೈಗೆ ಪ್ರವಾಸ ತೆರಳಿದ್ದು, ಅಲ್ಲಿ ಹಾಂಕಾಂಗ್ ಮೂಲದ ವ್ಯಕ್ತಿಗಳ ಜೊತೆ ಕೆಲಸ ಮಾಡಿದ್ದರು. ಫೆಬ್ರವರಿ 19ರಂದು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಇವರಿಗೆ ಥರ್ಮಲ್ ಸ್ಕಾನಿಂಗ್ ನಡೆಸಲಾಗಿತ್ತು. ಆದರೆ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ನಂತರ ಬೆಂಗಳೂರಿನ ಮನೆಗೆ ವಾಪಸಾಗಿ ಎರಡು ದಿನಗಳ ನಂತರ ಹೈದರಾಬಾದ್ ಗೆ ಬಸ್ ನಲ್ಲಿ ತೆರಳಿದ್ದರು. ಹೈದರಾಬಾದ್ ನಲ್ಲಿ ಜ್ವರ ಕಾಣಿಸಿಕೊಂಡಿದ್ದು, ಅಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇವರ ರಕ್ತ ಮಾದರಿಯಲ್ಲಿ ಪಾಸಿಟಿವ್ ಬಂದ ಕಾರಣ ಹೈದರಾಬಾದ್ ನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.
Bengaluru – ಕರಾವಳಿಯ ಸಂಸ್ಕøತಿ ತುಳುನಾಡಿನ ಸೀಮೆ ದಾಟಬಾರದು.. ಮೈಸೂರು ಕಂಬಳ ಬಗ್ಗೆ ಸಂತೋಷ್ ಗುರೂಜಿ ಅಸಂತೋಷ..!?
bengaluru tuluvera chavadi - gunaranjan shetty ಬೆಂಗಳೂರು- ಕರಾವಳಿಯ ಸಂಸ್ಕøತಿ, ಪರಂಪರೆ ಮತ್ತು ಪದ್ಧತಿಯ ಭಾಗವಾಗಿರುವ ಕಂಬಳ ತುಳುನಾಡಿನ ಸೀಮೆಯನ್ನು ದಾಟಿ ಹೋಗಬಾರದು ಎಂದು ಡಾ....








