ADVERTISEMENT
Thursday, May 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

ಮಾನಸಿಕ ಒತ್ತಡ ನಿವಾರಣೆಗೆ ಸುಲಭ ಚಿಕಿತ್ಸೆ ಆಕ್ಯು ಪ್ರೆಸರ್..!

admin by admin
August 7, 2020
in Health, Newsbeat, ಆರೋಗ್ಯ
Share on FacebookShare on TwitterShare on WhatsappShare on Telegram

ಮಾನಸಿಕ ಒತ್ತಡ ನಿವಾರಣೆಗೆ ಸುಲಭ ಚಿಕಿತ್ಸೆ ಆಕ್ಯು ಪ್ರೆಸರ್..!

ಯಾವುದೇ ವ್ಯಕ್ತಿಯನ್ನು ಆರೋಗ್ಯವಂತನೆಂದು ಪರಿಗಣಿಸ ಬೇಕಾದರೆ ಆತ ದೈಹಿಕ, ಮಾನಸಿಕ, ಭೌದ್ಧಿಕ, ಸಾಮಾಜಿಕ ಹಾಗು ಆಧ್ಯಾತ್ಮಿಕವಾಗಿ ಸಬಲನಾಗಿರಬೇಕು. ವ್ಯಕ್ತಿಯ ಚಲನವಲನಗಳು, ವ್ಯವಹರಿಸುವ ರೀತಿ ನೀತಿ, ಆಡುವ ಮಾತುಗಳು ಆತನ ಆಲೋಚನೆಯ ಮೇಲೆ ನಿಂತಿರುತ್ತದೆ. ಅಂದರೆ ವ್ಯಕ್ತಿಯ ನಡವಳಿಕೆಗೆ ಆತನಲ್ಲಿ ಬರುವ ಚಿಂತನೆಯೇ ಕಾರಣ.

Related posts

ಬಂಗಾಳದ ಮಣ್ಣಲ್ಲಿ ಅರಳಿದ ಕೇಸರಿ ಕಮಲ: ಪ್ರಧಾನಿ ಮೋದಿ ವಿಶ್ವನಾಯಕ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಬಂಗಾಳದ ಮಣ್ಣಲ್ಲಿ ಅರಳಿದ ಕೇಸರಿ ಕಮಲ: ಪ್ರಧಾನಿ ಮೋದಿ ವಿಶ್ವನಾಯಕ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

May 7, 2026
ಡಿಕೆಶಿಗೆ ಸಿಗುತ್ತಾ ಮುಖ್ಯಮಂತ್ರಿ ಪಟ್ಟದ ಗಿಫ್ಟ್? ಡಿಕೆ ಸುರೇಶ್ ಹೇಳಿಕೆಯ ಹಿಂದಿನ ನಿಗೂಢತೆ ಏನು?

ಡಿಕೆಶಿಗೆ ಸಿಗುತ್ತಾ ಮುಖ್ಯಮಂತ್ರಿ ಪಟ್ಟದ ಗಿಫ್ಟ್? ಡಿಕೆ ಸುರೇಶ್ ಹೇಳಿಕೆಯ ಹಿಂದಿನ ನಿಗೂಢತೆ ಏನು?

May 7, 2026

ಸಕಾರಾತ್ಮಕ ಚಿಂತನೆಗಳು ವ್ಯಕ್ತಿಯನ್ನು ಏನನ್ನಾದರೂ ಸಾಧಿಸುವತ್ತ, ಛಲದಿಂದ ಬರುವ ಸಮಸ್ಯೆಗಳನ್ನು ಎದುರಿಸುತ್ತ ಪರಿಹಾರವನ್ನು ಹುಡುಕಿ ಗುರಿಯನ್ನು ಮುಟ್ಟುವ ಕಡೆ ಮನಸ್ಸನ್ನು ಕೇಂದ್ರೀಕರಿಸುತ್ತದೆ. ಆದರೆ ನಕಾರಾತ್ಮಕ ಚಿಂತನೆ ಶರೀರದ ಬಲವನ್ನು ಕುಗ್ಗಿಸಿ ಬಲಹೀನವನ್ನಾಗಿಸುತ್ತದೆ. ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು, ಏಕಾಗ್ರತೆಯ ಕೊರತೆ, ಕಿರಿ ಕಿರಿ ದುಃಖ, ಖಿನ್ನತೆ ಇವು ಮಾನಸಿಕ ಒತ್ತಡದ ಪ್ರಮುಖ ಲಕ್ಷಣಗಳು.

ಸದ್ಯದ ಕೊರೊನ ಸಾಂಕ್ರಾಮಿಕ ರೋಗದ ವಾತಾವರಣದಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲರಲ್ಲಿ ಏನೋ ಚಿಂತೆ, ಭಯ, ಆತಂಕ ಮನೆಮಾಡಿದೆ. ಎಲ್ಲೆಡೆ ಕೊರೋನಾ ಸೋಂಕು, ಸಾವು ನೋವುಗಳ ವರದಿಯನ್ನು ನಿರಂತರವಾಗಿ ಕೆಲ ಸುದ್ದಿ ಮಾಧ್ಯಮಗಳಿಂದ ಕೇಳಿ ಕೇಳಿ ಮನದ ದೃಢತೆಯನ್ನು ಅಲುಗಾಡಿಸಿದೆ.

ಸ್ವಲ್ಪ ಸಮಯದ ಹಿಂದಷ್ಟೇ ನಿರಂತಕವಾಗಿ ಸುತ್ತಾಡಿ ಬರುತ್ತಿದ್ದ ನಾವು ವಾಯುವಿಹಾರಕ್ಕೆ ಹೋಗಲು, ದಿನ ನಿತ್ಯದ ಬಳಕೆಗೆ ಬೇಕಾದ ಸಾಮಾನುಗಳನ್ನು ತರಲು ಕೂಡ ಅಂಗಡಿ, ಮಾಲ್ ಗಳಿಗೆ ತೆರಳಲು ಮನಸ್ಸು ಹಿಂದೇಟು ಹಾಕುತ್ತಿದೆ. ಒಮ್ಮೆ ಶಿಸ್ತು ಹಾಗು ಲವಲವಿಕೆಯಿಂದ ಇದ್ದ ಜೀವನ ಶೈಲಿ ಏರುಪೇರಾಗಿದೆ. ಮನೆಯಲ್ಲಿ ಹಿರಿಯರ ಬಗ್ಗೆ ಸಾಕಷ್ಟು ಕಾಳಜಿಯ ಅವಶ್ಯಕತೆ ಇದೆ. ನಮ್ಮ ಕುಟುಂಬದವರ ಅರೋಗ್ಯ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವುದು ಮೂಲಭೂತ ಜವಾಬ್ಧಾರಿಯಾಗುತ್ತದೆ.

ಆಕ್ಯುಪ್ರೆಷರ್ ಪ್ರಕೃತಿ ಚಿಕಿತ್ಸೆಯ ಒಂದು ಭಾಗವಾಗಿದೆ. ಖರ್ಚಿಲ್ಲದೆ, ಹೊರಗೆ ಎಲ್ಲೂ ಹೋಗದೆ, ತತ್ಕ್ಷಣದಲ್ಲಿ ಒಳ್ಳೆ ಫಲಿತಾಂಶವನ್ನು ಕೊಡೊ ಮರ್ಮ ಚಿಕಿತ್ಸೆಯ ಬಗ್ಗೆ ತಿಳಿದಿದ್ದರೆ ಇನ್ನೇನು ಯೋಚನೆ. ದೇಹದ ಮೇಲೆ ಹಲವು ಮರ್ಮ ಬಿಂದುಗಳು ಇದ್ದು, ಅವುಗಳ ಮೇಲೆ ನಿರ್ದಿಷ್ಟ ಒತ್ತಡವನ್ನು ನೀಡುವುದರ ಮುಖಾಂತರ ಪ್ರಾಣಶಕ್ತಿಯ ಏರಿಳಿತವನ್ನು ನಿಯಂತ್ರಿಸಬಹುದು ಮತ್ತು ಸಮಸ್ಥಿತಿಗೆ ತರಬಹುದು.

ರೋಗಗಳಲ್ಲಿ ಕೆಲವು ದೀರ್ಘಾವಧಿಯ ಚಿಕಿತ್ಸೆಯನ್ನು ಪಡೆಯಬೇಕಾಗಿಬರುತ್ತದೆ ಮತ್ತು ಕೆಲವುದಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ನಿರಂತರವಾಗಿ ಮೆದುಳಿನ ಮೇಲೆ ಒತ್ತಡ, ದುಗುಡ, ಆತಂಕ, ಚಿಂತೆ ನಮ್ಮನ್ನು ದುರ್ಬಲವನ್ನಾಗಿಸುತ್ತದೆ. ಅನಿರೀಕ್ಷಿತವಾಗಿ ಒದಗುವ ಘಟನೆಗಳಿಂದ ಕೆಲವೊಮ್ಮೆ ಕೋಪ, ಭಯ, ದುಃಖ,ಮಾನಸಿಕ ಖಿನ್ನತೆ ಕಾಡಬಹುದು. ನಮ್ಮ ದೇಹದ ಅವಯವಗಳ ಮೇಲೆ ಅನಗತ್ಯ ಒತ್ತಡ ಉಂಟಾಗಿ ಅವುಗಳ ಕಾರ್ಯಕಮತೆ ಕ್ಷೀಣಿಸುತ್ತದೆ. ಅವುಗಳನ್ನು ಆದಷ್ಟು ಜಾಗೃತೆಯಿಂದ ಹೋಗಲಾಡಿಸಿ ಮುಂಬರುವ ದೀರ್ಘಕಾಲೀನ ಕಾಯಿಲೆಗಳನ್ನು ತಡೆಗಟ್ಟಬಹುದು. ಇಂತಹ ಪರಿಸ್ಥಿತಿ ಈಗ ಎದುರಾಗಿದ್ದು, ಇವುಗಳ ಸವಾಲನ್ನು ಹೀಗೆ ಸ್ವೀಕರಿಸಬಹುದು-

* ಜೀವನವನ್ನು ಅದು ಒದಗಿದಂತೆ ಎದರಿಸುವುದು.

* ಒದಗುವ ಸಣ್ಣ ಪುಟ್ಟ ಅರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಆಕ್ಯುಪ್ರೆಷರ್ ಸ್ವಯಂ ಚಿಕಿತ್ಸೆಯಿಂದ ಪರಿಹರಿಸಿಕೊಳ್ಳುವುದು.

ತುರ್ತು ಪರಿಸ್ಥಿತಿಯಲ್ಲಿ ಮುಂದಿನ ವ್ಯದ್ಯಕೀಯ ಸಹಾಯ ದೊರೆಯುವ ಮುನ್ನ ನಿರ್ದಿಷ್ಟ ಬಿಂದುಗಳ ಮೇಲೆ ಒತ್ತಡ ನೀಡುವುದರಿಂದ ನಮಗೆ ಸಾಕಷ್ಟು ಅರೋಗ್ಯ ಸುಧಾರಣೆ ದೊರೆಯುತ್ತದೆ.ಸರ್ವೇ ಸಾದಾರಣವಾಗಿ ಕಾಡುವ ತಲೆ ನೋವು, ಆತಂಕ, ಭಯ, ಅಧಿಕ ರಕ್ತದೊತ್ತಡ, ಕೋಪ, ಜೋಂಪುಗಳಿಗೆ ಕೆಳಗೆ ಕಂಡ ಬಿಂದುಗಳ ಮೇಲೆ ನಿರ್ದಿಷ್ಟ ಒತ್ತಡ ಕೊಡುವುದರಿಂದ ಸಮಾಧಾನ ದೊರೆಯುತ್ತದೆ.

ಸೂಚನೆ: ಮೇಲೆ ಕಂಡ ಲಕ್ಷಣಗಳು ದೀರ್ಘ ಕಾಲದಿಂದ ಇದ್ದಲ್ಲಿ ತಜ್ಞರನ್ನು ಕಾಣುವುದು

 

ಸೂಚನೆ-

ಇಲ್ಲಿ ಕೊಟ್ಟಿರುವ ಬಿಂದುಗಳ ಮೇಲೆ ಹೆಬ್ಬೆಟ್ಟಿನಿಂದ ಒಂದು ನಿಮಿಷದವರೆಗೆ ಒತ್ತಡ ಕೊಡುವುದರಿಂದ ದಿನಕ್ಕೆ ಮೂರು ಬಾರಿಯಂತೆ ಒಳ್ಳೆಯ ಫಲಿತಂಶವನ್ನು ಪಡೆಯಬಹುದು.

ಜೊತೆಯಲ್ಲಿ,
*ದೇವರಲ್ಲಿ ನಂಬಿಕೆ ಇರಲಿ,ಜೀವನದ ಬಗ್ಗೆ ಸಕಾರಾತ್ಮ ದೃಷ್ಟಿಕೋನ ವಿರಲಿ
*ಯೋಗ, ದ್ಯಾನ, ಪ್ರಾಣಯಾಮದಲ್ಲಿ ತೊಡಗಿಸಿಕೊಳ್ಳಿ
*ಆಟದಲ್ಲಿ ತೊಡಗಿ, ಹವ್ಯಾಸ ರೂಡಿಸಿ ಕೊಳ್ಳುವುದರಿಂದ ಹೊಸ ಉತ್ಸಾಹ ನೀಡುತ್ತದೆ.
*ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ.ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಮರೆಯದಿರಿ.

ವಿಶ್ವಾಸವಿರಲಿ

ಅಕ್ಯು ಪ್ರೆಷರ್ ತಜ್ಞೆ ಡಾ. ಶ್ರೀಮತಿ ಸುಮ ರಾಘವೇಂದ್ರ

Tags: Acupressurementalmental stress reliefmysterynaturopathy. Istress relieftreatment
ShareTweetSendShare
Join us on:

Related Posts

ಬಂಗಾಳದ ಮಣ್ಣಲ್ಲಿ ಅರಳಿದ ಕೇಸರಿ ಕಮಲ: ಪ್ರಧಾನಿ ಮೋದಿ ವಿಶ್ವನಾಯಕ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಬಂಗಾಳದ ಮಣ್ಣಲ್ಲಿ ಅರಳಿದ ಕೇಸರಿ ಕಮಲ: ಪ್ರಧಾನಿ ಮೋದಿ ವಿಶ್ವನಾಯಕ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

by Shwetha
May 7, 2026
0

ಭಾರತದ ರಾಜಕೀಯ ನಕಾಶೆಯಲ್ಲಿ ಪಶ್ಚಿಮ ಬಂಗಾಳದ ಗೆಲುವು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಭಾರತೀಯ ಜನತಾ ಪಕ್ಷವು ಬಂಗಾಳದ ನೆಲದಲ್ಲಿ ಸಾಧಿಸಿದ ಈ ಅಸಾಧಾರಣ ವಿಜಯವು ಕೇವಲ ಭಾರತಕ್ಕೆ...

ಡಿಕೆಶಿಗೆ ಸಿಗುತ್ತಾ ಮುಖ್ಯಮಂತ್ರಿ ಪಟ್ಟದ ಗಿಫ್ಟ್? ಡಿಕೆ ಸುರೇಶ್ ಹೇಳಿಕೆಯ ಹಿಂದಿನ ನಿಗೂಢತೆ ಏನು?

ಡಿಕೆಶಿಗೆ ಸಿಗುತ್ತಾ ಮುಖ್ಯಮಂತ್ರಿ ಪಟ್ಟದ ಗಿಫ್ಟ್? ಡಿಕೆ ಸುರೇಶ್ ಹೇಳಿಕೆಯ ಹಿಂದಿನ ನಿಗೂಢತೆ ಏನು?

by Shwetha
May 7, 2026
0

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 64ನೇ ಜನ್ಮದಿನದ ಸಂಭ್ರಮಕ್ಕೆ ಈ ಬಾರಿ ದೆಹಲಿ ಹೈಕಮಾಂಡ್‌ನಿಂದ ವಿಶೇಷ ಕೊಡುಗೆ ಸಿಗುವ ಸಾಧ್ಯತೆ ಇದೆ ಎಂಬ...

ಬಂಗಾಳದಲ್ಲಿ ಪಟ್ಟಕ್ಕಾಗಿ ದೀದಿ ಹಠ : ಕುರ್ಚಿಗೆ ಅಂಟಿಕೊಂಡರೆ ಮುಲಾಜಿಲ್ಲದೆ ಕಿತ್ತೊಗೆಯಿರಿ; ದೀದಿ ವಿರುದ್ಧ ಹಿರಿಯ ವಕೀಲ ಜೇಠ್ಮಲಾನಿ ವಾಗ್ದಾಳಿ

ಬಂಗಾಳದಲ್ಲಿ ಪಟ್ಟಕ್ಕಾಗಿ ದೀದಿ ಹಠ : ಕುರ್ಚಿಗೆ ಅಂಟಿಕೊಂಡರೆ ಮುಲಾಜಿಲ್ಲದೆ ಕಿತ್ತೊಗೆಯಿರಿ; ದೀದಿ ವಿರುದ್ಧ ಹಿರಿಯ ವಕೀಲ ಜೇಠ್ಮಲಾನಿ ವಾಗ್ದಾಳಿ

by Shwetha
May 7, 2026
0

ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಈಗ ಹಿಂದೆಂದೂ ಕಾಣದಂತಹ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಚುನಾವಣಾ ಸೋಲಿನ ಹೊರತಾಗಿಯೂ ಮುಖ್ಯಮಂತ್ರಿ ಕುರ್ಚಿಯನ್ನು ಬಿಟ್ಟುಕೊಡಲು ನಿರಾಕರಿಸುತ್ತಿರುವ ಮಮತಾ ಬ್ಯಾನರ್ಜಿ ಅವರ...

ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

ಸಿಎಂ ಸ್ಥಾನಕ್ಕೆ ಕುತ್ತು ಬಂತಾ, ಇರು ಅಂದ್ರೆ ಇರ್ತೀನಿ ಬಿಡು ಅಂದ್ರೆ ಬಿಡ್ತೀನಿ: ಹೈಕಮಾಂಡ್ ಅಂಗಳಕ್ಕೆ ಚೆಂಡು ಎಸೆದ ಸಿದ್ದರಾಮಯ್ಯ

by Shwetha
May 7, 2026
0

ರಾಜ್ಯ ರಾಜಕೀಯದ ಇತ್ತೀಚಿನ ಬೆಳವಣಿಗೆಗಳು ಸಾಕಷ್ಟು ಕುತೂಹಲ ಮೂಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಒಂದು ಹೇಳಿಕೆ ಈಗ ಕಾಂಗ್ರೆಸ್ ಪಾಳಯದಲ್ಲಿ ಮಾತ್ರವಲ್ಲದೆ ಇಡೀ ರಾಜ್ಯಾದ್ಯಂತ ಭಾರೀ...

ಸಿನಿಮಾ ವ್ಯಾಮೋಹಕ್ಕೆ ಬಲಿಯಾಯಿತೇ ರಾಜಕೀಯ ಪ್ರಜ್ಞೆ? ತಮಿಳುನಾಡು ಜನಾದೇಶದ ಬಗ್ಗೆ ನಟ ಪ್ರಕಾಶ್ ರಾಜ್ ತೀವ್ರ ಅಸಮಾಧಾನ

ಸಿನಿಮಾ ವ್ಯಾಮೋಹಕ್ಕೆ ಬಲಿಯಾಯಿತೇ ರಾಜಕೀಯ ಪ್ರಜ್ಞೆ? ತಮಿಳುನಾಡು ಜನಾದೇಶದ ಬಗ್ಗೆ ನಟ ಪ್ರಕಾಶ್ ರಾಜ್ ತೀವ್ರ ಅಸಮಾಧಾನ

by Shwetha
May 7, 2026
0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಅಂದರೆ ಟಿವಿಕೆ ಪಕ್ಷವು ಅಭೂತಪೂರ್ವ ಯಶಸ್ಸು ಗಳಿಸಿರುವುದು ಇಡೀ ದೇಶದ ಗಮನ ಸೆಳೆದಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram