ಕೊರೊನಾ ಹಾವಳಿಯಿಂದಾಗಿ ಲಾಕ್ ಡೌನ್ ಸಡಿಲಿಕೆ ನಂತರವೂ ಬಬಹುತೇಕ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿತ್ತು. ಆದರೀಗ ಕ್ರಮೇಣವಾಗಿ ಒಂದೊಂದಾಗಿಯೇ ಪ್ರವಾಸಿತಾಣಗಳನ್ನು ಪ್ರವಾಸಿಗರಿಗಾಗಿ ಓಪನ್ ಮಾಡಲಾಗುತ್ತಿದೆ. ಅದರಂತೆ ರಾಜ್ಯದ ಪ್ರಸಿದ್ಧ ಮರ್ದಾನೆ ಗೈಬ್ ದರ್ಗಾಗೆ ಪ್ರವಾಸಿಗರಿಗೆ ಪ್ರವೇಶಕ್ಕೆ ಮುಕ್ತವಾಗಿಸಲಾಗಿದೆ. ಗಡಿ ಜಿಲ್ಲೆಯ ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರ ದರ್ಗಾವನ್ನು ತೆರೆಯಲಾಗಿದ್ದು, ಪ್ರವಾಸಿ ತಾಣವನ್ನೂ ಸಹ ಪ್ರವೇಶ ನಿರ್ಬಂಧನದಿಂದ ಮುಕ್ತವಾಗಿಸಲಾಗಿದೆ. ಮಾರ್ಚ್ ನಲ್ಲಿ ಕೊರೊನಾ ಸೋಂಕಿನ ಹಾವಳಿಯಿಂದಾಗಿ ದರ್ಗಾ ಸೇರಿದಂತೆ, ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರ ಪ್ರವೇಶಕ್ಕೆ ಬ್ರೇಕ್ ಹಾಕಲಾಗಿತ್ತು. ಇದೀಗ ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಲಾಕ್ ಡೌನ್ ತೆರವುಗೊಳಿಸಲಾಗಿದೆ.
ಪ್ರವಾಸಿಗರು ಈ ಕ್ರಮಗಳನ್ನೂ ಪಾಲಿಸಲೇಬೇಕು
ಮರ್ದಾನೆ ಗೈಬ್ ಅವರ ದರ್ಗಾ ಒಳಗೆ ಪ್ರವೇಶಿಸಲು ಒಂದು ಬಾರಿಗೆ ನಾಲ್ಕು ಜನರಿಗೆ ಮಾತ್ರ ಅವಕಾಶವಿರುತ್ತದೆ.
ದರ್ಗಾ ಒಳಗೆ ಹೋಗುವ ಭಕ್ತರಿಗೆ ಸ್ಯಾನಿಟೈಜ್ ಕೊಡುವುದು ಕಡ್ಡಾಯವಾಗಿರುತ್ತದೆ.
ಇನ್ನೂ ಪ್ರವಾಸಿಗರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಥರ್ಮಲ್ ತಪಾಸಣೆ ಮಾಡಿಸಿದ ನಂತರವೇ ದರ್ಗಾದ ಒಳಗೆ ಪ್ರವೇಶ.
ಪ್ರವಾಸಿಗರ ಮಾಹಿತಿಗಳನ್ನು ಸಂಗ್ರಹಿಸಿದ ನಂತರವೇ ಪ್ರವೇಶಕ್ಕೆ ಅವಕಾಶ.







