ADVERTISEMENT
Wednesday, February 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೂರ್ಖ ಮಾನವನ ಅಭಿವೃದ್ದಿಯೆಂಬೋ ಮುಖವಾಡ; ಕಾಡು ಕೊಳ್ಳೆ ಹೊಡೆದು ಯುದ್ಧ ಸಾರಿದರೇ ಅಂತಿಮ ಜಯ ಪ್ರಕೃತಿಯದ್ದೇ:

admin by admin
August 15, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಪ್ರವಾಹ ಉಕ್ಕೇರಿ ಬಂತು ಸಂಕ ತೇಲಿ ಹೋಯ್ತು. ಹೊರಜಗತ್ತಿನೊಂದಿಗೆ ಸಂಪರ್ಕ ಕಡಿತಗೊಂಡು ಮನೆ-ಮಠ ಭೂಮಿ ಒಂದು ವ್ಯವಸ್ಥಿತವಾದ ಬದುಕು ಮೂರಾ ಬಟ್ಟೆಯಾಯಿತು. ಗುಡ್ಡ ಜಾರಿತು, ನಾವು ಅನಾಥರಾದೇವು ನೋಡಿ ಎಂದು ಚಾರ್ಮಾಡಿಯ ನಿವಾಸಿಯೊಬ್ಬರು ನನ್ನ ಹತ್ತಿರ ಅಳಲು ತೋಡಿಕೊಳ್ಳುತ್ತಿದ್ದರು. ಇದಕ್ಕೆಲ್ಲಾ ಕಾರಣ ಈ ಪಾಪಿ ಮಳೆಯೆಂಬ ಸಹಜ ಆಕ್ರೋಶ ಅವರಲ್ಲಿ ಮಡುಗಟ್ಟಿರುತ್ತದೆ. ಇಷ್ಟೆಲ್ಲಾ ಅತಿರೇಕದ ಹಾನಿಯುಂಟಾಗಲು ಮಳೆಯೊಂದೇ ಕಾರಣವಲ್ಲ ಎಂಬ ಸೂಕ್ಷ್ಮ ಅರಿವು ನಮಗಿನ್ನು ತಿಳಿಯುತ್ತಲಿಲ್ಲಾ ಯಾಕೆ.?

ಕರ್ನಾಟಕದಲ್ಲಿ “16 ನೇಯ 1355 ಮೀ” ಎತ್ತರದ ಕೊಡಗಿನ “ಬ್ರಹ್ಮಗಿರಿ” ಬೆಟ್ಟ ಸ್ಥಳೀಯ ಅರ್ಚಕರ ಮನೆಯ ಮೇಲೆ ಕುಸಿದದ್ದು ಅಂತಹ ಆಶ್ಚರ್ಯವೇನಲ್ಲ ಬಿಡಿ. ನಮ್ಮ ಇಡೀ ರಾಜಕೀಯ ವ್ಯವಸ್ಥೆಯೇ ಸಹ್ಯಾದ್ರಿ ಶ್ರೇಣಿಯನ್ನು ಕೊಳ್ಳೆ ಹೊಡೆದ್ದದರ ಪರಿಣಾಮಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ. ರಾಜ್ಯದಲ್ಲಿ ಪಶ್ಚಿಮಾಭಿಮಖವಾಗಿ ಹರಿಯುವ ನದಿಗಳಾದ ಕಾಳಿ, ನೇತ್ರಾವತಿ, ಅಘನಾಶಿನಿ, ಗಂಗಾವಳಿ, ಶರಾವತಿ, ಮಹದಾಯಿ, ಕಾವೇರಿ, ಕಪಿಲಾ ಮಳೆಗಾಲದಲ್ಲಿ ಮಿತಿಮೀರಿ ಸೊಕ್ಕುವುದೇಕೆ..? ಹಿಂದೆಲ್ಲಾ ಘಟ್ಟದ ಕಣಿವೆ ಕಿಬ್ಬಿಗಳಲ್ಲಿ ಇದಕ್ಕಿಂತ ಹೆಚ್ಚು ಮಳೆ ಸುರಿದರೂ ಯಾವ ಅನಾಹುತವು ಆಗುತ್ತಿರಲಿಲ್ಲ ಆದರೆ ಈಗ..?

Related posts

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

February 4, 2026
ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

February 4, 2026

   
ಘಟ್ಟದ ಮೇಲೆ ಮರಗಳನ್ನುವ ಸವರಿ ಜಂಬಿಟ್ಟಿಗೆ ಮಣ್ಣಿನ ರೋಡಿಗೆ ಡಾಂಬರಿನ ಅಲಂಕಾರ ಮಾಡುವಾಗ ರಸ್ತೆ ನಿರ್ಮಿಸಲು ವೈಬ್ರೇಟರ್ ಬಳಕೆ ಮಾಡುವುದರಿಂದ ಗುಡ್ಡ ಕಣಿವೆಗಳು ಸಡಿಲಗೊಳ್ಳುತ್ತಿವೆ. ಹೀಗೆ ದುರ್ಬಲಗೊಂಡ ಗುಡ್ಡಗಳು ಮಳೆಗಾಲದಲ್ಲಿ ಏಕಾಏಕಿ ಕುಸಿದು ಬೀಳುತ್ತೀವೆ ಆದರೂ ನಾವು ಸರ್ಕಾರಗಳನ್ನು ಪ್ರಶ್ನಿಸದೇ, ಹೋರಾಡದೇ ಅನವಶ್ಯಕ ಅವೈಜ್ಞಾನಿಕ ಯೋಜನೆಗಳನ್ನು ಅಭಿವೃದ್ಧಿಯನ್ನು ಯಾವ ಪುರಷಾರ್ಥಕ್ಕೆ ಒಪ್ಪಿಕೊಳ್ಳುತ್ತಿದ್ದೇವೋ ನಾ ಕಾಣೆ.!

ಪ್ರತಿ ವರ್ಷದಂತೆ ಚಾರ್ಮಾಡಿ ಘಾಟಿ ಸಂಪೂರ್ಣ ಬಂದಾಗಿದೆ ಮೊನ್ನೆ ಶಿವಮೊಗ್ಗ ಮಾರ್ಗವಾಗಿ ಕೊಟ್ಟಿಗೆಹಾರಕ್ಕೆ ಪಯಣಿಸುತ್ತಿರುವಾಗ ಘಾಟಿಯ ಆರಂಭ & ಮಧ್ಯದ ತಿರುವಿನಲ್ಲಿ ಗುಡ್ಡ ಸಂಪೂರ್ಣವಾಗಿ ಕುಸಿದು ಹೋಗಿದೆ. ಇಲ್ಲಿ ಅಲೆದಾಡುವಾಗಲೆಲ್ಲಾ ಕರಳು ಕಿತ್ತು ಬರುವಂಥ ಪರಿಸರ ಹಾಳಾದ ದೃಶ್ಯಗಳು ಕಾಣಿಸುತ್ತವೆ, ಇಲ್ಲಿ ಬಿದ್ದ ದೈತ್ಯ ಮರಗಳಿಗೆ ಲೆಕ್ಕವಿಲ್ಲಾ ಅಲ್ಲಲ್ಲಿ ಹಸಿದು ಹಿಸಿದುಕೊಂಡು ಬಿದ್ದಿರುವ ಮಣ್ಣಿನ ಹಸಿ ಗುಡ್ಡೆಗಳು ಅದರಡಿಯಲ್ಲಿ ಸಿಲುಕಿದ ಶವಗಳು ಬಾಯ್ಬಿಟ್ಟ ರಸ್ತೆಗಳು ಮತ್ತು ಸಿಮೆಂಟ್ ಚೀಲದಲ್ಲಿ ಮರಳು ತುಂಬಿ ತಡೆಗೋಡೆ ಕಟ್ಟುವ ಜಿಲ್ಲಾಡಳಿತದ ಬೃಹತ್ ಡ್ರಾಮಾ ಮುಂದಿನ ಮಳೆಗಾಲದವರೆಗೂ ಎಂದಿನಂತೆ ಜಾರಿಯಲ್ಲಿರುತ್ತದೆ.

ಶತಮಾನಗಳಿಂದ ಮುಸಲಧಾರೆಗೆ ವಿಜೃಂಭಿಸುವ ಪಶ್ಚಿಮ ಘಟ್ಟದ ಪ್ರಕೃತಿ ಸರ್ಕಾರದ ಅವೈಜ್ಞಾನಿಕ ಯೋಜನೆಗಳಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದೆ. ಮಂದಿರ, ಮಸೀದಿ ಕಟ್ಟುವಲ್ಲಿ, ಕೆಡುವಲ್ಲಿ ವೀರಾವೇಶ, ರಣೋತ್ಸಾಹ ತೋರಿಸುವ ನಾವುಗಳು ಇಡೀ ಮನುಷ್ಯ ಸಂಕುಲವನ್ನೇ ಕಾಪಾಡುವ ಪ್ರಕೃತಿಯ ಬಗ್ಗೆ ಯಾಕಿಷ್ಟು ಅಸಡ್ಡೆ ಧೋರಣೆ.? ನಮ್ಮನ್ನೆಲ್ಲಾ ಪೊರೆಯುವ ಪ್ರಕೃತಿಗೆ ಇಷ್ಟೆಲ್ಲಾ ಅನ್ಯಾಯವಾದರೂ ನಮ್ಮ ಬದುಕು ಬೀದಿಗೆ ಬಂದರೂ ಅವೈಜ್ಞಾನಿಕ ಯೋಜನೆಗಳ ವಿರುದ್ದ ನಾವು ಧ್ವನಿಯತ್ತದೆ ನರ ಸತ್ತವರಂತೆ ಯಾಕೆ ಬದುಕುತ್ತಿದ್ದಾರೋ ಇಂದಿಗೂ ಅರ್ಥವಾಗುತ್ತಿಲ್ಲ.

“EIA – Environment impact Assessment” (ಪರಿಸರ ಪರಿಣಾಮಗಳ ಮೌಲ್ಯಮಾಪನ)ಗಳಂಥ ನಿಯಮಗಳು ಪ್ರಕೃತಿಯ ಪರವಾಗಿರದೇ ಪ್ರಕೃತಿ ಸಂಪತ್ತನ್ನು ಹಗಲು ದರೋಡೆ ನಡೆಸುವ ಉದ್ಯಮಗಳ ಪರವಾಗಿವೆ, ದೇಶದಲ್ಲಿ ಪರಿಸರ ಕಾನೂನುಗಳನ್ನು ಬಿಗಿಗೊಳಿಸಿ ಅನುಷ್ಠಾನಕ್ಕೆ ತಂದರೆ ಪ್ರಕೃತಿ ಮೊದಲಿನಂತಾಗುತ್ತದೆ, ಕೇಂದ್ರದ ಪರಿಸರ ಅರಣ್ಯ & ಹವಾಮಾನ ಸಚಿವಾಲಯವು ಜನತೆಯ ಕಣ್ಣಿಗೆ ಮಣ್ಣೆರಚುವ ಹಾಗೂ ಆತ್ಮವಂಚನೆಯ ವರದಿಗಳನ್ನು ದೇಶದ ಜನತೆಯ ಮುಂದಿಟ್ಟು ಅದರ ಅನುಷ್ಠಾನಕ್ಕೆ ಸರ್ಕಾರ ಶಂಕುಸ್ಥಾಪನೆ ಮಾಡುವುದನ್ನು ಮೊದಲು ನಿಲ್ಲಿಸಬೇಕು.ಆಗ ಈ ಎಲ್ಲಾ ಪ್ರಕೃತಿ ವಿಕೋಪಗಳು ತಂತಾನೆ ಸರಿ ಹೋಗುತ್ತವೆ. ಅಂತಿಮವಾಗಿ ಗೆಲ್ಲುವುದು ಪ್ರಕೃತಿಯೇ..

ಲೇಖನ:-
ಗಿರಿವಾಲ್ಮೀಕಿ
ವನ್ಯಜೀವಿ ಮತ್ತು ಪರಿಸರ ಹೋರಾಟಗಾರರು

Tags: saaksha tv. comSpecialspecial article
ShareTweetSendShare
Join us on:

Related Posts

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

by Shwetha
February 4, 2026
0

ಬೆಂಗಳೂರು: ಕರ್ನಾಟಕದಲ್ಲಿ ಪಡಿತರ ಚೀಟಿಗಾಗಿ ಕಾಯುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್...

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

by Shwetha
February 4, 2026
0

ಬೆಂಗಳೂರು: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಉರ್ದು ಶಾಲೆಗಳ ಕಾರ್ಯನಿರ್ವಹಣಾ ಅವಧಿಯನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಇದೀಗ ರಾಜಕೀಯ ವಲಯದಲ್ಲಿ ಭಾರೀ...

ಅನೈತಿಕ ಸಂಬಂಧ ಕೊಲೆಗೆ ಕಾರಣ: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಅರೆಸ್ಟ್

ಅನೈತಿಕ ಸಂಬಂಧ ಕೊಲೆಗೆ ಕಾರಣ: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಅರೆಸ್ಟ್

by Shwetha
February 4, 2026
0

ಅನೈತಿಕ ಸಂಬಂಧದ ವಿಚಾರವಾಗಿ ನಡೆದ ಗಲಾಟೆಯೊಂದು ಭೀಕರ ಕೊಲೆಯಾಗಿ ಮಾರ್ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಅವರಗುಪ್ಪ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಖ್ಯಾತ ಜ್ಯೋತಿಷಿ...

ಧರ್ಮರಾಯಸ್ವಾಮಿ ದೇಗುಲದಲ್ಲಿ ಭಾರೀ ಚಿನ್ನಾಭರಣ ಕಳ್ಳತನ: ಮುಜರಾಯಿ ಅಧಿಕಾರಿಗಳ ಮೇಲೆ ಅನುಮಾನ

ಧರ್ಮರಾಯಸ್ವಾಮಿ ದೇಗುಲದಲ್ಲಿ ಭಾರೀ ಚಿನ್ನಾಭರಣ ಕಳ್ಳತನ: ಮುಜರಾಯಿ ಅಧಿಕಾರಿಗಳ ಮೇಲೆ ಅನುಮಾನ

by Shwetha
February 4, 2026
0

ಬೆಂಗಳೂರಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಭಾರೀ ಚಿನ್ನಾಭರಣ ಕಳ್ಳತನ ನಡೆದಿರುವ ಆರೋಪ ಹೊರಬಿದ್ದಿದ್ದು, ಇದು ಭಕ್ತ ಸಮುದಾಯದಲ್ಲಿ ಆಘಾತ ಮೂಡಿಸಿದೆ. ಪ್ರಾಥಮಿಕ...

ಪ್ರಧಾನಿ ನಿಂದನೆಗೆ ಸಿಟಿ ರವಿ ‘ಪಾಕಿಸ್ತಾನದ ನಾಲಿಗೆ’ ತಿರುಗೇಟು: ಪರಿಷತ್ ರಣರಂಗ, ನಜೀರ್ ಕ್ಷಮೆಗೆ ಪಟ್ಟು ಹಿಡಿದ ಬಿಜೆಪಿ!

ಪ್ರಧಾನಿ ನಿಂದನೆಗೆ ಸಿಟಿ ರವಿ ‘ಪಾಕಿಸ್ತಾನದ ನಾಲಿಗೆ’ ತಿರುಗೇಟು: ಪರಿಷತ್ ರಣರಂಗ, ನಜೀರ್ ಕ್ಷಮೆಗೆ ಪಟ್ಟು ಹಿಡಿದ ಬಿಜೆಪಿ!

by Shwetha
February 4, 2026
0

ವಿಧಾನಪರಿಷತ್ತಿನಲ್ಲಿ ಸೃಷ್ಟಿಯಾಗಿರುವ ನಜೀರ್ ಅಹ್ಮದ್ ಅವರ ಹೇಳಿಕೆ ಮತ್ತು ಸಿಟಿ ರವಿ ಅವರ ತಿರುಗೇಟಿನ ವಿವಾದ ಇದೀಗ ಮುಖ್ಯಮಂತ್ರಿಗಳ ಅಂಗಳ ತಲುಪಿದೆ. ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram