ನವದೆಹಲಿ : ಕೇಂದ್ರ ಸರ್ಕಾರವು GST ನಷ್ಟ ಪರಿಹಾರ ತಿರಸ್ಕರಿಸುವ ಮೂಲಕ ರಾಜ್ಯಗಳಿಗೆ ದೊಡ್ಡ ದ್ರೋಹ ಬಗೆದಿದೆ ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಕೇಂದ್ರ ಸರ್ಕಾರದ ನಡರಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇನ್ನೂ GST ಪರಿಹಾರವನ್ನು ಕೊಡುವುದರ ಬದಲಿಗೆ ಸಾಲ ತೆಗೆದುಕೊಳ್ಳಿ ಎನ್ನುವ ಮೂಲಕ ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಯ ಸಹಕಾರ ತತ್ತ್ವವನ್ನೇ ಗಾಳಿಗೆ ತೂರಿದೆ ಎಂದು ಸಿಸೋಡಿಯಾ ಅವವರು ಆಕ್ರೋಶ ಹೊರರಹಾಕಿದ್ದಾರೆ.
![]()
ಇನ್ನೂ ಮುಂದುವರೆದು ಮಾತನಾಡಿರುವ ಅವರು ಕೇಂದ್ರದಿಂದ ಅತಿ ಕಳಪೆ ರೀತಿಯಲ್ಲಿ ಜಿಎಸ್ಟಿ ಜಾರಿಯಾಗಿದೆ. ಕೇಂದ್ರವು ರಾಜ್ಯಗಳ ದಿಕ್ಕು ತಪ್ಪಿಸುತ್ತಿದೆ. ರಾಜ್ಯಗಳ ಆದಾಯವನ್ನು ಹದಗೆಡಿಸುತ್ತಿದೆ ಎಂದು ಟೀಕಿಸಿದ್ದಾರೆ.









