ADVERTISEMENT
Friday, August 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮರೆಯಲಾಗದ ಮುಖ್ಯಮಂತ್ರಿ ಹೆಗಡೆ ಜನುಮದಿನದ ನೆನಪಿನಲ್ಲಿ

admin by admin
August 29, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಮರೆಯಲಾಗದ ಮುಖ್ಯಮಂತ್ರಿ ಹೆಗಡೆ ಜನುಮದಿನದ ನೆನಪಿನಲ್ಲಿ:-

ಕರ್ನಾಟಕ ಕಂಡ ಮೊದಲ ಕಾಂಗ್ರೇಸ್ಸೇತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ (29 ಆಗಸ್ಟ್ 1929) ನಯ ನಾಜೂಕುತನದ ಚಾಣಾಕ್ಷ ನಡೆಯ
ಲೆಕ್ಕಾಚಾರದ ರಾಜಕಾರಣಿ. ಆರು ಸಲ ವಿಧಾನಸಭೆ ಎರಡು ಸಲ ರಾಜ್ಯಸಭೆಗೆ ಆಯ್ಕೆಯಾಗಿ 1983 ರಿಂದ 1988ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಮೌಲ್ಯಾಧಾರಿತ  ರಾಜಕಾರಣಕ್ಕೆ ಹೆಸರಾದವರು. ಹಾಗೆಯೇ ರಾಷ್ಟ್ರ ರಾಜಕಾರಣದ ಎಲ್ಲಾ ಪಟ್ಟುಗಳನ್ನು ಅರಿತ ಕಟ್ಟಾಳು ಆಗಿದ್ದರೂ ಸಹ ಪ್ರಧಾನಿ ಹುದ್ದೆ ಕೈ ಗೂಡಲಿಲ್ಲ.

Related posts

ಭಾಷಣದ ಜಾಗ ಶುದ್ಧೀಕರಣ ವಿವಾದ- ನನ್ನ ಪರ ಕಾಂಗ್ರೆಸ್ಸಿಗರೇ ನಿಲ್ಲಲಿಲ್ಲ: ದಲಿತ ನಾಯಕನಿಗೆ ಅವಮಾನವಾದರೂ ಸೈಲೆಂಟ್ ಆದ್ರಾ ಹಿರಿಯ ನಾಯಕರು?

ಭಾಷಣದ ಜಾಗ ಶುದ್ಧೀಕರಣ ವಿವಾದ- ನನ್ನ ಪರ ಕಾಂಗ್ರೆಸ್ಸಿಗರೇ ನಿಲ್ಲಲಿಲ್ಲ: ದಲಿತ ನಾಯಕನಿಗೆ ಅವಮಾನವಾದರೂ ಸೈಲೆಂಟ್ ಆದ್ರಾ ಹಿರಿಯ ನಾಯಕರು?

August 21, 2026
ಲಡಾಖ್ ಚೆಕ್‌ಪೋಸ್ಟ್‌ನಲ್ಲಿ ‘ವಿ ಆರ್ ಜೆನ್ ಜಿ’ ಎಂದ  ಯುವತಿ:  “ಜಾಂತೇ ನಹೀಂ ಹೋ ಮೇರಾ ಬಾಪ್ ಕೌನ್ ಹೈ”  ಗೊತ್ತಾ ಸಾಲಿಗೆ ಹೋಲಿಸಿ  ಟಾಂಗ್ ನೀಡಿದ ಓಮರ್ ಅಬ್ದುಲ್ಲಾ!

ಲಡಾಖ್ ಚೆಕ್‌ಪೋಸ್ಟ್‌ನಲ್ಲಿ ‘ವಿ ಆರ್ ಜೆನ್ ಜಿ’ ಎಂದ ಯುವತಿ: “ಜಾಂತೇ ನಹೀಂ ಹೋ ಮೇರಾ ಬಾಪ್ ಕೌನ್ ಹೈ” ಗೊತ್ತಾ ಸಾಲಿಗೆ ಹೋಲಿಸಿ ಟಾಂಗ್ ನೀಡಿದ ಓಮರ್ ಅಬ್ದುಲ್ಲಾ!

August 21, 2026

ದೇವರಾಜ ಅರಸರ ನಂತರ ಆಡಳಿತ ಮಾದರಿಯ ಹೊಸ ಮಜಲನ್ನು ಪರಿಚಯಿಸಿದ ಹೆಗಡೆ. 1983 ರಲ್ಲಿ ಅಪರಿಚಿತರಂತೆ ಕಂಡು ಬಂದವರು ಒಂದೇ ವರ್ಷದಲ್ಲಿ ಕರ್ನಾಟಕದ ಜನರಿಗೆ ಪರಿಚಯದ ಛಾಯಾಗ್ರಾಹಕರಾಗಿ ವಿಧಾನಸಭೆ ವಿಸರ್ಜಿಸಿ ಚುನಾವಣೆಯಲ್ಲಿ ಬಹುಮತದ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ರಾಷ್ಟ್ರ ರಾಜಕಾರಣವನ್ನು ಒಮ್ಮೆ ಲುಗಾಡಿಸಿದ ವಾಮನ ಮೂರ್ತಿ!

ಹದಿಮೂರು ಬಾರಿ ಬಜೆಟ್ ಮಂಡಿಸಿದ ಅನುಭವಿ ಹೆಗಡೆಯವರು ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ದೇವೇಗೌಡರು ಬಂಗಾರಪ್ಪ ಹಾಗೂ ಬೊಮ್ಮಾಯಿಯವರ ನಡುವೆ ಪೈಪೋಟಿ ಇದ್ದದ್ದನ್ನು ತುಂಡರಿಸಿದ ಚಂದ್ರಶೇಖರ್ ಮತ್ತು ಬಿಜು ಪಟ್ನಾಯಕ್ ಹೆಗಡೆಯವರನ್ನು ಆ ಸ್ಥಾನಕ್ಕೆ ಕೂರಿಸುವ ಜವಾಬ್ದಾರಿಯನ್ನು ದೇವೇಗೌಡರ ಭುಜಕ್ಕೆ ಕಟ್ಟಿದರು. ಅಷ್ಟೇ ಅಲ್ಲ ಕನಕಪುರದಿಂದ ಗೆಲ್ಲಿಸಿ ತಂದರು. ಮುಂದೆ ನಡೆದದ್ದು ಇತಿಹಾಸ. ಬರಗಾಲದ ಬೇಗೆಯಿಂದ ತತ್ತರಿಸುತ್ತಿದ್ದ ಕರ್ನಾಟಕಕ್ಕೆ ಏಕ ಕಾಲದಲ್ಲಿ ಐವತ್ತೈದು ಸಾವಿರ ಕೊಳವೆ ಬಾವಿಗಳನ್ನು ಕೊರೆಸುವ ಮೂಲಕ ಹೆಗಡೆ, ನಜೀರ್ ಸಾಬ್, ದೇವೇಗೌಡ, ರಾಚಯ್ಯ, ಎಂಪಿ ಪ್ರಕಾಶ್ ಮತ್ತು ವೈಜನಾಥ ಪಾಟೀಲರು ಗ್ರಾಮೀಣಾಭಿವೃದ್ದಿಯನ್ನು ಹಸನುಗೊಳಿಸಿದರು.

ಜನರ ಕೈಗೆ ನೇರ ಅಧಿಕಾರ ನೀಡುವ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಂವಿಧಾನ ಬದ್ದಗೊಳಿಸಿ ವಿಧಾನಸೌಧದಲ್ಲಿ ಹೆಪ್ಪುಗಟ್ಟಿದ್ದ ಆಡಳಿತವನ್ನು
ಅಧಿಕಾರ ವಿಕೇಂದ್ರಿಕರಣದ ಮುಖಾಂತರ ದೇಶದಲ್ಲೇ ಪ್ರಥಮವಾಗಿ ಭದ್ರಗೊಳಿಸಿದ ಕೀರ್ತಿ ಅವರಿಗೆ ಸಂದಿತು. ಗುಂಡೂರಾಯರ ಕಾಲದ ಗೂಂಡಾಗಿರಿಯನ್ನು ಹತ್ತಿಕ್ಕಿದರು. ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ರೂಪಿಸಿ ಜನರ ಕುಂದು ಕೊರತೆ ವಿಭಾಗವನ್ನು ತೆರೆದರು.

ಆರ್ಥಿಕ ಶಿಸ್ತನ್ನು ಸರ್ಕಾರ ರೂಢಿಸಿಕೊಂಡಿತ್ತಾದರೂ ತಮ್ಮ ಸ್ನೇಹಿತ ಧಣಿಗಳಿಗೆ ಮೇಯಲು ಬಿಟ್ಟಿದ್ದರು.
ಅರಸರಿಗೂ ಹೆಗಡೆಯವರಿಗೂ ಅದೇ ಒಂದು ವ್ಯೆತ್ಯಾಸ, “ಎಂಬತ್ತು ಜನಕ್ಕೆ ಫಲ ಕೊಟ್ಟು ಅದರಿಂದ ಇಪ್ಪತ್ತು ಮಂದಿಗೆ ಕೆಡುಕಾಗುವುದಾದರೆ ಅರಸರು ಮುಲಾಜಿಲ್ಲದೆ ಮುಂದಡಿಯಿಡುತ್ತಿದ್ದರು.
ಅದೇ ಹೆಗಡೆಯವರು ತಮ್ಮ ನೆಚ್ಚಿನ ಹತ್ತುಜನರಿಗೆ ತೊಂದರೆಯಾಗುತ್ತದೆಯೆಂದರೇ ಆ ಯೋಜನೆಯನ್ನೇ ಮುಂದೂಡಿ
ಬಿಡುತ್ತಿದ್ದರೆಂದು ಇಬ್ಬರ ಬಳಿಯೂ ಕೆಲಸ ಮಾಡಿದ ಮಾಜಿ ಸಂಸದೀಯ ಮಂತ್ರಿ ಎಂ ಸಿ ನಾಣಯ್ಯ ವಿಶ್ಲೇಷಣಾತ್ಮಕವಾಗಿ ಹೋಲಿಸುತ್ತಾರೆ.

ಜನತಾ ಪರಿವಾರವೆಂದರೇ ಅದು ಹೆಗಡೆ ಹಾಗೂ ದೇವೇಗೌಡರ ಹೊಂದಾಣಿಕೆ ಮತ್ತು ವಿರಸದ ರಾಮಾಯಣ ಮಹಾಭಾರತ. 1985 ರ ಚುನಾವಣೆಯ ಬಹುಮತದ ನಂತರ ಪ್ರಶ್ನಾತೀತ ನಾಯಕರೆಂದುಕೊಂಡಿದ್ದೇ ಅವರ ಮುಂದಿನ ರಾಜಕೀಯ ಅಧಃಪತನಕ್ಕೆ ಮೂಲವಾಯಿತೆನ್ನಬಹುದು. ಬಾಟ್ಲಿಂಗ್, ರೇವಜೀತು ಭೂಮಿ, ಟೆಲಿಫೋನ್ ಕದ್ದಾಲಿಕೆಯ ಹಗರಣಗಳಲ್ಲಿ ಸಿಲುಕಿ ತಮ್ಮ ಬಲೆಯನ್ನು ತಾವೇ ಹೆಣೆದುಕೊಂಡುಬಿಟ್ಟಿದ್ದರು.

ಸರ್ಕಾರಕ್ಕೆ ಉತ್ತಮ ಹೆಸರು ತಂದು ಕೊಡಲು  ಪೈಪೋಟಿಯ ಮೇಲೆ ಕೆಲಸ ಮಾಡುತ್ತಿದ್ದ ಮಂತ್ರಿ ಮಂಡಲದ ಸದಸ್ಯರಲಿ ಹಲವರನ್ನು ನಿಕೃಷ್ಟವಾಗಿ ಕಂಡದ್ದು , ನೀರಾವರಿಗೆ ಬಜೆಟ್ ನಲ್ಲಿ ತಾವು ಕೇಳಿದ 300 ಕೋಟಿ ಹಣವನ್ನು ಮೀಸಲಿಡಲಿಲ್ಲವೆಂಬ ಕಾರಣ ಮುಂದೊಡ್ಡಿ ರಾಜೀನಾಮೆಯಿತ್ತ ದೇವೇಗೌಡರ ಬಂಡಾಯವನ್ನು ಕಡೆಗಣಿಸಿದ್ದು ಹೆಗಡೆ ಅಧಿಕಾರ ತೊರೆಯುವಂತಾಯಿತು. ರಾಷ್ಟ್ರ ರಾಜಕಾರಣದ ಕನಸನ್ನು ಬಿಟ್ಟು ರಾಜ್ಯದ ಆಸಕ್ತಿ ತಳೆದಿದ್ದರೆ ಮುಂದೆ ಕಾಂಗ್ರೆಸ್ ಆಗಲೀ, ಈಗಿನ ಬಿಜೆಪಿಯಾಗಲೀ ಅಧಿಕಾರ ಹಿಡಿಯುವುದು ಅಷ್ಟು ಸುಲಭವಾಗಿರಲಿಲ್ಲ. ಒಂದು ಮಟ್ಟಿಗೆ ಬಿಜೆಪಿಗೆ ಎರವಲು ಸೇವೆ ಮಾಡಿದ ಮೊದಲಿಗರು ಹೆಗಡೆ. ನಂತರ ಬಂಗಾರಪ್ಪ ಆಮೇಲೆ ಕುಮಾರಸ್ವಾಮಿಗಳು.

1985 ರ ನಂತರದಲ್ಲಿ ದೇಶದ ಭಾವಿ ಪ್ರಧಾನಿ ಎಂದು ಸಂಕೇತಿಸುತ್ತಿದ್ದ ಹೆಗಡೆಯವರು 91 ರ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಪರಾಭವಗೊಂಡು ಅವಮಾನ ಅನುಭವಿಸಿದರು. 83ರಲ್ಲಿ ಮುಖ್ಯಮಂತ್ರಿ ಪಟ್ಟಕ್ಕೆ ಅನಾಯಾಸವಾಗಿ ಕೂತದ್ದನ್ನು ವಿರೋಧಿಸಿದ್ದ ಕ್ರಾಂತಿರಂಗದ ನಾಯಕ ಬಂಗಾರಪ್ಪ ತಮ್ಮ ರಾಜಕೀಯ ಸೇಡನ್ನು ತೀರಿಸಿಕೊಂಡಿದ್ದರು. ಸಿದ್ದರಾಮಯ್ಯ ಕೊಪ್ಪಳ ಕ್ಷೇತ್ರದಲ್ಲಿ ಲೋಕಲ್ ರಾಜಕೀಯದಿಂದ ಅನ್ವರಿ ವಿರುದ್ಧ ಸೋಲುಂಡಿದ್ದು , ದೇವೇಗೌಡರು ಹಾಸನದಿಂದ ಪುಟ್ಟಸ್ವಾಮಿಗೌಡರನ್ನು ಹೆಡೆಮುರಿಕಟ್ಟಿ ಗೆದ್ದಿದ್ದು ಮುಂದಿನ ಜನತಾ ಪರಿವಾರದ ಮಿಲನಕ್ಕೆ ನಾಂದಿಯಾಗಿ 1994 ಡಿಸೆಂಬರ್ 11ರಂದು ಮಣ್ಣಿನ ಮಗ ಬಿರುದಾಂಕಿತ ಗೌಡರು ಪ್ರಯಾಸ ಪಟ್ಟು ಮುಖ್ಯಮಂತ್ರಿಯಾದರು,

ಹೆಗಡೆ ತಮ್ಮ ಪಟ್ಟುಗಳನ್ನು ಸುಲಭಕ್ಕೆ ಸಡಿಲಿಸುವವರಲ್ಲ. ನಿಧಾನಗತಿಯಲ್ಲಿ ವೇಗದ ನಡಿಗೆ, ಅವರ ಚಾಣಾಕ್ಷತೆ ಆ ತನಕ ಎಲ್ಲೂ ಉದ್ವೇಗಕ್ಕೆ ಒಳಗಾಗದ ನಡೆ ಅವರದಾಗಿತ್ತಾದರೂ ದೇವೇಗೌಡರು ಪ್ರಧಾನಿ ಅಭ್ಯರ್ಥಿಯಾದಾಗ ಹೆಗಡೆ ಮಾತಿನಲ್ಲಿ ಜಾರಿಬಿದ್ದವರು ಆಮೇಲೆ ಚೇತರಿಸಿಕೊಳ್ಳಲೇ ಇಲ್ಲ. ದೇವೇಗೌಡರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿ ಚುನಾವಣೆಯಲ್ಲಿ ಗೆದ್ದು ಶಾಸಕಾಂಗ ಸಭೆಯಲ್ಲಿ ಹೆಗಡೆಯವರು ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಕೂಡಾ ಅಭ್ಯರ್ಥಿ ಎನ್ನುವ ಮೂಲಕ ಸಂಘರ್ಷ ಸೃಷ್ಟಿಸಿಕೊಂಡರು.
ಹಿಂದೆ ಸರಿದು ನಿಂತ ಪಟೇಲರನ್ನು ಉಪ ಮುಖ್ಯಮಂತ್ರಿ, ದೇವೇಗೌಡರನ್ನು ಮುಖ್ಯಮಂತ್ರಿ ಎಂದು ಅವರೇ ಘೋಷಿಸಿದ್ದರೇ ಜನರ ನಡುವೆ ಹೀರೋ ಆಗಿ ಸರ್ಕಾರದ ಚುಕ್ಕಾಣಿ ಹಿಡಿಯಬಹುದಿತ್ತು. ಅಂತಹ ಅವಕಾಶ ಕಳೆದುಕೊಂಡದ್ದಲ್ಲದೆ ಮುಂದೆ ಅವರ ಜೀವಮಾನದ ಕನಸಾಗಿದ್ದ ಪ್ರಧಾನಿ ಹುದ್ದೆಯ ಸಮೀಪ ನಿಂತು ಅದು ದೇವೇಗೌಡರ ಪಾಲಾದಾಗ ಕಣ್ಣು ತುಂಬಿಸಿಕೊಂಡು ತುಟಿಯಂಚಲ್ಲಿ ಸುಡುವ ಸಿಗರೇಟು ಹೊತ್ತಿಸಿಕೊಂಡು ಪ್ರೆಸ್ ಕ್ಲಬ್ ನಲ್ಲಿ ನಿಂತುಕೊಂಡೇ ಪತ್ರಿಕಾಗೋಷ್ಠಿ ನಡೆಸಿದ ಹೆಗಡೆ ಹೊಟ್ಟೆಯ ಕಿಚ್ಚನ್ನೆಲ್ಲಾ ಹೊರಹಾಕಿ, ಪಕ್ಷದಿಂದಲೂ ಹೊರ ಹಾಕಲ್ಪಟ್ಟರು.

ಹೊಸ ಚಿಂತನೆಯ ಪ್ರಬುದ್ಧ ಚಾಣಾಕ್ಷ ಹೆಗಡೆ ನೆಲ ಕಚ್ಚಿದ್ದರು. ಆದರೆ ಅವರ ಮೌಲ್ಯಾಧಾರಿತ ರಾಜಕಾರಣ, ಪಂಚಾಯತ್ ರಾಜ್ ವ್ಯವಸ್ಥೆ,
ಚುನಾವಣಪೂರ್ವ ಮೈತ್ರಿಯ ಘೋಷಣೆ,
ನಯ ನಾಜೂಕುತನದ ವಾಮನ ವ್ಯಕ್ತಿತ್ವ
ಇನ್ನೂ ರಾಜ್ಯದ ಜನತೆಯ ಮನಸಿನಲ್ಲಿ ಹಸಿರಾಗಿದೆ ಎನ್ನಬಹುದು.

– ವೈ ಜಿ ಅಶೋಕ್ ಕುಮಾರ್.

Tags: ##janatha party#Ramakrishna Hegadebengaluruchief minister of karnatakaH.D.devegowdajanatha parivarakarnataka
ShareTweetSendShare
Join us on:

Related Posts

ಭಾಷಣದ ಜಾಗ ಶುದ್ಧೀಕರಣ ವಿವಾದ- ನನ್ನ ಪರ ಕಾಂಗ್ರೆಸ್ಸಿಗರೇ ನಿಲ್ಲಲಿಲ್ಲ: ದಲಿತ ನಾಯಕನಿಗೆ ಅವಮಾನವಾದರೂ ಸೈಲೆಂಟ್ ಆದ್ರಾ ಹಿರಿಯ ನಾಯಕರು?

ಭಾಷಣದ ಜಾಗ ಶುದ್ಧೀಕರಣ ವಿವಾದ- ನನ್ನ ಪರ ಕಾಂಗ್ರೆಸ್ಸಿಗರೇ ನಿಲ್ಲಲಿಲ್ಲ: ದಲಿತ ನಾಯಕನಿಗೆ ಅವಮಾನವಾದರೂ ಸೈಲೆಂಟ್ ಆದ್ರಾ ಹಿರಿಯ ನಾಯಕರು?

by Shwetha
August 21, 2026
0

ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಮ್ಮ ಭಾಷಣದ ಬಳಿಕ ವೇದಿಕೆ ಮತ್ತು ಜಾಗವನ್ನು 'ಶುದ್ಧೀಕರಣ' ಗೊಳಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ...

ಲಡಾಖ್ ಚೆಕ್‌ಪೋಸ್ಟ್‌ನಲ್ಲಿ ‘ವಿ ಆರ್ ಜೆನ್ ಜಿ’ ಎಂದ  ಯುವತಿ:  “ಜಾಂತೇ ನಹೀಂ ಹೋ ಮೇರಾ ಬಾಪ್ ಕೌನ್ ಹೈ”  ಗೊತ್ತಾ ಸಾಲಿಗೆ ಹೋಲಿಸಿ  ಟಾಂಗ್ ನೀಡಿದ ಓಮರ್ ಅಬ್ದುಲ್ಲಾ!

ಲಡಾಖ್ ಚೆಕ್‌ಪೋಸ್ಟ್‌ನಲ್ಲಿ ‘ವಿ ಆರ್ ಜೆನ್ ಜಿ’ ಎಂದ ಯುವತಿ: “ಜಾಂತೇ ನಹೀಂ ಹೋ ಮೇರಾ ಬಾಪ್ ಕೌನ್ ಹೈ” ಗೊತ್ತಾ ಸಾಲಿಗೆ ಹೋಲಿಸಿ ಟಾಂಗ್ ನೀಡಿದ ಓಮರ್ ಅಬ್ದುಲ್ಲಾ!

by Shwetha
August 21, 2026
0

ಶ್ರೀನಗರ: ಲಡಾಖ್‌ನ ಅತ್ಯಂತ ಸೂಕ್ಷ್ಮ ಪ್ರದೇಶವಾದ ಮಿನಿಮಾರ್ಗ್ ಚೆಕ್‌ಪೋಸ್ಟ್‌ನಲ್ಲಿ ಪ್ರವಾಸಿ ಯುವತಿಯೊಬ್ಬಳು ಭದ್ರತಾ ಸಿಬ್ಬಂದಿಯೊಂದಿಗೆ ನಡೆಸಿದ ಹೈಡ್ರಾಮಾ ಮತ್ತು ದರ್ಪದ ವರ್ತನೆ ಇದೀಗ ದೇಶಾದ್ಯಂತ ಭಾರಿ ಚರ್ಚೆಗೆ...

‘ಕರ್ನಾಟಕ ಬಲಿಷ್ಠವಾದರೆ ದಕ್ಷಿಣ ಭಾರತ, ಭಾರತವೂ ಬಲಿಷ್ಠ’: ಡಿಕೆಶಿ

‘ಕರ್ನಾಟಕ ಬಲಿಷ್ಠವಾದರೆ ದಕ್ಷಿಣ ಭಾರತ, ಭಾರತವೂ ಬಲಿಷ್ಠ’: ಡಿಕೆಶಿ

by Shwetha
August 21, 2026
0

ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ಹಾಗೂ ದಕ್ಷಿಣ ಭಾರತದ ಆರ್ಥಿಕ ಹಿತಾಸಕ್ತಿಗಳ ಕುರಿತು ಮಹತ್ವದ...

ಮಗಳು ಟಾಕ್ಸಿಕ್ ವಿರುದ್ಧ ಸಿಡಿದೆದ್ದರೆ ತಂದೆ ಯಶ್‌ ಪರ ಬ್ಯಾಟಿಂಗ್- ರಾಕಿಂಗ್ ಸ್ಟಾರ್ ಯಶ್‌ ಕನ್ನಡ ಚಿತ್ರರಂಗದ ಕೊಹಿನೂರ್ ವಜ್ರ ಎಂದ ರಾಜೇಂದ್ರ ಸಿಂಗ್ ಬಾಬು

ಮಗಳು ಟಾಕ್ಸಿಕ್ ವಿರುದ್ಧ ಸಿಡಿದೆದ್ದರೆ ತಂದೆ ಯಶ್‌ ಪರ ಬ್ಯಾಟಿಂಗ್- ರಾಕಿಂಗ್ ಸ್ಟಾರ್ ಯಶ್‌ ಕನ್ನಡ ಚಿತ್ರರಂಗದ ಕೊಹಿನೂರ್ ವಜ್ರ ಎಂದ ರಾಜೇಂದ್ರ ಸಿಂಗ್ ಬಾಬು

by Shwetha
August 21, 2026
0

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಸೃಷ್ಟಿಸಿರುವ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಡುವೆಯೇ, ನಟಿ ರಿಷಿಕಾ ಸಿಂಗ್ 'ಟಾಕ್ಸಿಕ್' ಸಿನಿಮಾದ...

‘ಕಾಂಗ್ರೆಸ್ ದೇಶ ವಿಭಜನೆಗೆ ಅಡಿಪಾಯ ಹಾಕಿತು’: ಅಮಿತ್ ಶಾ

‘ಕಾಂಗ್ರೆಸ್ ದೇಶ ವಿಭಜನೆಗೆ ಅಡಿಪಾಯ ಹಾಕಿತು’: ಅಮಿತ್ ಶಾ

by Shwetha
August 21, 2026
0

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram