ADVERTISEMENT
Saturday, August 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

1994ರ ಫ್ಯೂಡಲ್ ಅಪ್ಪಾಜಿ ಕರಗಿ ಆ ಜಾಗದಲ್ಲಿ ಅಂತಃಕರಣ ಹೊಂದಿದ ಜನಾನುರಾಗಿ ಅಪ್ಪಾಜಿ ಸೃಷ್ಟಿಯಾಗಿದ್ದರೇನೋ ಸರಿ; ಆದರೆ ಇಹದ ವ್ಯಾಪಾರ ಮುಗಿಸಿ ಹೊರಟೇಬಿಟ್ಟರು:

admin by admin
September 3, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಬಿ.ಮಾಧವಚಾರ್ ಅವರಿಂದ ಆರಂಭಗೊಂಡು ಇಸಾಮಿಯ ಅವರವರೆಗೂ ಸಜ್ಜನ ರಾಜಕಾರಣವೊಂದು ನೆಲಯೂರಿದ್ದ ಭದ್ರಾವತಿ ವಿಧಾನಸಭಾ ಕ್ಷೇತ್ರ, 1994 ರ ಹೊತ್ತಿಗೆ ಅವೆಲ್ಲವನ್ನೂ ಕಳೆದುಕೊಂಡಿತ್ತು. ವಿಐಎಸ್ಎಲ್ ಕಾರ್ಮಿಕ ನಾಯಕರಾಗಿ ತಮ್ಮದೇ ದೊಡ್ಡ ಪ್ರಭಾವ , ಶಕ್ತಿ ಬೆಳೆಸಿಕೊಂಡಿದ್ದ ಎಂ.ಜೆ ಅಪ್ಪಾಜಿ ಗೌಡ ಅವರು 1994 ರ ವಿಧಾನ ಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲುವುದರ ಮೂಲಕ ರಾಜಕೀಯ ಪರಿಭಾಷೆಯನ್ನೆ ಬದಲಿಸಿಬಿಟ್ಟಿದ್ದರು.

ಭದ್ರಾವತಿಯಂತ ಲೇಬರ್ ಲ್ಯಾಂಡ್ ಗೆ ಆಕ್ರಮಣಕಾರಿ ರಾಜಕಾರಣವೊಂದು ಮೈಗೂಡಿಸಿಕೊಳ್ಳುವುದು ಅಗತ್ಯವಿತ್ತೇನೋ. ಆ ಕಾಲ ಬಂದೇ ಬಿಟ್ಟಿತ್ತು. ಕಾರ್ಮಿಕ ನಾಯಕನೆಂಬ ಪ್ರಭಾವಳಿ, ತನ್ನ ಹಿಂದೆ ಇದ್ದ ಕಾರ್ಮಿಕರ, ಜಾತಿ ಸಮುದಾಯದ ತೋಳ್ಬಲದ ಫಲವೇನೊ ಎಂಬಂತೆ ಅಪ್ಪಾಜಿ 1994 ರಲ್ಲಿ ಜನತಾದಳದ ಬಿ.ಪಿ ಶಿವಕುಮಾರ್ ಎಂಬ ಸಜ್ಜನ ನಾಯಕನೆದುರು 21 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಇಡೀ ರಾಜ್ಯವೇ ತನ್ನತ್ತ ನೋಡುವಂತೆ ಮಾಡಿದರು. ಈ ಗೆಲುವಿನ ರಣೋತ್ಸಾಹ ಎಷ್ಟರ ಮಟ್ಟಿಗೆ ಮಿತಿ ಮೀರಿತ್ತು ಎಂದರೆ ಅವರ ಹಿಂಬಾಲಕ ಪಡೆ ಅಕ್ಷರಶಃ ತಮ್ಮ ರಾಜಕೀಯ ವಿರೋಧಿಗಳ ಮತ್ತು ತಮಗೆ ಮತ ನೀಡದ ಹಳ್ಳಿಗಳಲ್ಲಿ ಉಪಟಳ ವಿಟ್ಟಿತ್ತು.

Related posts

namma-ooru-namma-hemme-campaign-madarahalli-darshan-puttannaiah-mandya

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್

August 22, 2026
mla-darshan-puttannaiah-surprise-visit-pandavapura-public-places-mandya

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ

August 22, 2026

ಭದ್ರಾವತಿಯಿಂದ ಪ್ರಕಟಗೊಳ್ಳುತ್ತಿದ್ದ ‘ಭುವನವಾರ್ತೆ’ , ಶಿವಮೊಗ್ಗದಿಂದ ಪ್ರಕಟಗೊಳ್ಳುತ್ತಿದ್ದ ‘ಸಹ್ಯಾದ್ರಿ’ ಕನ್ನಡ ದಿನಪತ್ರಿಕೆಗಳಲ್ಲಿ ವರದಿಗಾರನಾಗಿದ್ದ ನಾನು ಅಪ್ಪಾಜಿ ಮತ್ತವರ ಹಿಂಬಾಲಕ ಗ್ಯಾಂಗ್ ನ ಹಾವಳಿಯನ್ನು ನಿರಂತರವಾಗಿ ಬೈಲೈನ್ ವರದಿ ಮಾಡಲಾರಂಭಿಸಿದೆ. ಇದು ಅಪ್ಪಾಜಿ ಮತ್ತವರ ಬೆಂಬಲಿಗರಿಗೆ ಅಪಥ್ಯವಾಯಿತು. ಪತ್ರಿಕೆಗಳ ಸಂಪಾದಕರಿಗೆ ಬೆದರಿಕೆಗಳು ಬಂದಿದ್ದೂ ಆಯಿತು. ನನ್ನ ಹುಡುಕಾಟವೂ ನಡೆದಿತ್ತು.

ಅಂತಿಮವಾಗಿ ಅಪ್ಪಾಜಿ ಪತ್ರಿಕೆಗಳಲ್ಲಿ ಬಂದ ವರದಿಗೆ ಸ್ಪಷ್ಟೀಕರಣ ನೀಡಬೇಕೆಂಬ ಉದ್ದೇಶದಿಂದ(?) ಭದ್ರಾವತಿಯ pwd guest house ನಲ್ಲಿ ಪ್ರೆಸ್ ಮೀಟ್ ಗೆ ಆಹ್ವಾನಿಸಿದರು. ಪತ್ರಿಕಾಗೋಷ್ಟಿ ನಾನೇ ಹೋಗಬೇಕೆಂಬ ಸೂಚನೆಯನ್ನು ನಮ್ಮ ಸಂಪಾದಕರು ನೀಡಿದ್ದರಿಂದ ಭದ್ರಾವತಿಯ ಪತ್ರಕರ್ತ ಗೆಳಯರ ಜೊತೆ ನಾನು ಪಿಡ್ಲಯ ಗೆಸ್ಟ್ ತಲುಪಿದೆ. ಅಪ್ಪಾಜಿ ಅವರ ಒಂದಿಬ್ಬರು ಹಿಂಬಾಲಕರು ಸ್ಥಳದಲ್ಲಿದ್ದರೂ ಪತ್ರಕರ್ತರನ್ನು ಕೆಕ್ಕರಿಸಿ ‘ಅಣ್ಣಾ ಬರ‍್ತಾರೆ ಇರಿ..’ ಎಂದು ಅಪ್ಪಣೆ ಕೊಟ್ಟರು. ಒಬ್ಬೊಬ್ಬರಾಗಿ, ಒಂದೊಂದು ಗುಂಪಾಗಿ ಬರಲಾರಂಭಿಸಿದ ಅಪ್ಪಾಜಿ ಹಿಂಬಾಲಕರು ಬಂದವರೆಲ್ಲಾ ನನ್ನನ್ನು ಮುಗಿಸಿಯೆ ಬಿಡುವಂತೆಯೂ ಮತ್ತು ಇತರೆ ಪತ್ರಕರ್ತರ ಮುಖ ನೋಡಿಕೊಂಡು ಅಡ್ಡಾಡುತ್ತಿದ್ದರು. ಸಮಯ ಮೀರುತ್ತಿದ್ದರೂ ಅಪ್ಪಾಜಿ ಬರುವ ಯಾವ ಲಕ್ಷಣವೂ ಕಾಣುತ್ತಿರಲಿಲ್ಲ. ನಾವುಗಳು ವಾಪಾಸ್ ಹೋಗಲು ಅವರ ಹಿಂಬಾಲಕರು ಬಿಡುತ್ತಿರಲಿಲ್ಲ.

ಅಂತೂ ರಾತ್ರಿ 8.30 ಕ್ಕೆ ಐದಾರು ಕಾರುಗಳೊಂದಿಗೆ ಭರ್ರನೆ ಧೂಳೆಬ್ಬಿಸಿಕೊಂಡು ಬಂದ ಅಪ್ಪಾಜಿ ಪ್ರೆಸ್‌ಮೀಟ್ ಗೆ ಕೂರುತ್ತಲೆ ವಿಶೇಷವಾಗಿ “ಯಾರೋ ರವಿಕುಮಾರ್ ಅದು ?” ಎಂದು ಕತ್ತಲಲ್ಲೂ ಕೆಂಪಾಗಿದ್ದ ಕಣ್ಣುಗಳನ್ನು ಟೇಬಲ್ ನ ಸುತ್ತಾ ಹೊರಳಾಡಿಸಿದರು. ಏಗ್ ಸೇಪ್ ಟೇಬಲ್ ನ ಇನ್ನೊಂದು ತುದಿಗೆ ಶಾಸಕ ಅಪ್ಪಾಜಿ ಅವರಿಗೆ ಪ್ರತಿನಾಯಕನೇನೋ ಎಂಬಂತೆ ಹಮ್ಮಿನಿಂದಲೇ ಕುಳಿತಿದ್ದ ನನ್ನನ್ನು ಪತ್ರಕರ್ತ ಗೆಳೆಯ ದಯಾನಂದ್ ಪರಿಚಯ ಮಾಡಿಕೊಟ್ಟರು. ಅಪ್ಪಾಜಿ ಪತ್ರಕರ್ತರಿಗೆ ಪಾಠ ಮಾಡಲು ಶುರು ಮಾಡಿಬಿಟ್ಟರು, ಏಕವಚನ, ಬಹುವಚನ, ಬೆದರಿಕೆ ಎಲ್ಲವೂ ಸುರಿಮಳೆಯಾದವು. ನನಗೂ ಅವರಿಗೂ ಮಾತಿನ ಚಕಮಕಿಯೇ ನಡೆಯಲಾರಂಭಿಸಿತು. ‘ಇಂಡಿಫೆಂಡೆಂಟ್ ಆಗಿ ಅರ್ಧಕ್ಕರ್ಧ ಲೀಡ್ ನಲ್ಲಿ ಗೆದ್ದಿದಿನಿ, ನನ್ನ ವಿರುದ್ದ ನೇ ಬರಿತೀಯಾ ಹುಷಾರ್!’ ಎಂದರು. ನಾನು ನಾನೋ ದೈಹಿಕವಾಗಿ ಹಿಡಿಯಷ್ಟಿದ್ದೆ. ಆದರೆ ಪತ್ರಕರ್ತ ಎಂಬ ಜೋಷ್ ಕಡಿಮೆ ಏನಿರಲಿಲ್ಲ.

ಅಪ್ಪಾಜಿ ನಾಲಿಗೆ ನಾಲಿಗೆ ಕೊಟ್ಟು ಜಿದ್ದಿಗೆ ಬಿದ್ದವನಂತೆ ವಾದಕ್ಕಿಳಿದು ಬಿಟ್ಟಿದ್ದೆ. ಪತ್ರಿಕಾಗೋಷ್ಟಿ ಜಗಳಗೋಷ್ಟಿಯಾಗಿ ಪರಿವರ್ತನೆ ಗೊಂಡಿತು. ಅಪ್ಪಾಜಿ ಮಾತುಗಳಿಗೆಲ್ಲಾ ಉಧೋ ಉಧೋ ಅನ್ನುತ್ತಿದ್ದ ನಮ್ಮ ಸುತ್ತಾ ಠಳಾಯಿಸಿದ್ದ ಅವರ ಹಿಂಬಾಲಕ ಪಡೆ ಒಮ್ಮೊಮ್ಮೆ ತೋಳೇರಿಸಿಕೊಂಡು ನನ್ನ ಮೇಲೆ ಬರಲು ನುಗ್ಗಾಡುತ್ತಿದ್ದರು. ಅಪ್ಪಾಜಿ ಅವರ ಆಪ್ತರೇ ಅಗಿದ್ದ ಕರುಣಾಮೂರ್ತಿ, ಕರಿಯಪ್ಪ ಎಂಬ ಸಣ್ಣ ನಾಯಕರುಗಳು ಸಮಾಧಾನದ ಪಾತ್ರ ವಹಿಸಿ ಹಿಂಬಾಲಕರಿಂದ ನನ್ನ ರಕ್ಷಣೆ ಮಾಡುತ್ತಿದ್ದರು. ! ರಾತ್ರಿ ಹನ್ನೊಂದು ಆದರೂ ಅಪ್ಪಾಜಿಗೂ ನನಗೂ ಜಗಳ ಕೊನೆಗೊಳ್ಳಲಿಲ್ಲ. ಜನರ ಮೇಲಿನ ದಬ್ಬಾಳಿಕೆ ಗೆ ನೀವು ಶಾಸಕರಾಗಿರುವುದಲ್ಲ, ಸೇಡು ಬಿಟ್ಟು ಜನರ ಕೆಲಸ ಮಾಡಿ ಎಂಬುದು ನನ್ನ ವಾದವಾಗಿತ್ತು. ಅವರ ವಾದ ಅವರದ್ದಾಯಿತು. ನನ್ನ ವಾದ ನನ್ನದಾಯಿತು, ಕೊನೆಗೆ ಹೇಗೋ ಸಭೆ ಯಿಂದ ಹೊರಬರುವುದು ತೀರ‍್ಮಾನಿಸಿ ಹೊರಟಾಗ “ಬಾಡೂಟ ಮಾಡ್ಕೋಂಗಿ ಬರೋದ್ ಬಂದಿದಿರಾ” ಎಂಬ ಆದೇಶವೂ ಅಪ್ಪಾಜಿ ಹಿಂಬಾಲಕರಿಂದ ಬೆದರಿಕೆ ರೂಪದಲ್ಲೇ ಹೊರಬಿದ್ದಿತು. ಹಂಗಿನ ಊಟ ಅರಗುವುದು ಕಷ್ಟ ಎಂದು ಬಿಟ್ಟು ಹೊರಟೆ ಬಿಟ್ಟೆವು. ಅಪ್ಪಾಜಿ ಪಡೆ ನನ್ನನ್ನು ತಿಂದು ಮುಗಿಸಿಬಿಡುವಂತೆ ನೋಡುತ್ತಿತ್ತು. ಪತ್ರಕರ್ತ ಗೆಳೆಯರಾದ ದಯಾನಂದ್, ಗಂಗಾನಾಯ್ಕ್ , ಶಿವಶಂಕರ್ ನನ್ನನ್ನು ಬಸ್ ನಿಲ್ದಾಣದವರೆಗೂ ಎಸ್ಕಾರ್ಟ್(?) ಮಾಡಿ ಬಸ್ಸಿಗೆ ಹತ್ತಿಸಿ ಸುರಕ್ಷಿತವಾಗಿ ಶಿವಮೊಗ್ಗ ಕ್ಕೆ ಬೀಳ್ಕೊಟ್ಟರು.

ಅಪ್ಪಾಜಿ ಮತ್ತವರ ಬೆಂಬಲಿಗರ ಬೆದರಿಕೆಗಳ ನಡುವೆಯೂ ನಾನು ಪತ್ರಕರ್ತನಾಗಿ ಅವರ ಜನವಿರೋಧಿ ಕೃತ್ಯಗಳನ್ನು ಖಂಡಿಸುತ್ತಲೇ , ಜನಪರ ಕೆಲಸಗಳನ್ನು ಜನರ ಮುಂದಿಡುವುದು ನಡೆದೆ ಇತ್ತು. ಕಾಲ ಉರುಳಿದಂತೆ ಪತ್ರಕರ್ತರ ಸಂಘದ ಮತ್ತು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ನಾನು ಮತ್ತು ಅಪ್ಪಾಜಿ ಅನೇಕ ಸಭೆ,ಸಮಾರಂಭಗಳಲ್ಲಿ ಒಂದೇ ವೇದಿಕೆಯಲ್ಲಿ ಭೇಟಿಯಾಗುವುದು ನಡೆದೇ ಇತ್ತು , ನಾನು ಅವರ ನೆನಪಿನಲ್ಲಿ ಅಚ್ಚಾಗಿ ಹೋಗಿದ್ದೆ. ಅಪ್ಪಾಜಿ ಕ್ರಮೇಣ ಮಾಗುತ್ತಾ ಬಂದರು. ಎದುರಿಗೆ ಸಿಕ್ಕಾಗಲೆಲ್ಲಾ “ನೀವು ಬಾರೀ ಘಾಟಿ ಇದಿರಪ್ಪ, ನಿಮ್ಮಂತಹ ಯಂಗ್ ಸ್ಟರ್ಸ್ ಪ್ರೆಸ್ ಪೀಲ್ಡ್ ನಲ್ಲಿರಬೇಕು ರವಿಕುಮಾರ್” ಎಂದು ಪ್ರೀತಿಯಿಂದ ಕೈ ಕುಲುಕುತ್ತಿದ್ದರು. ಭದ್ರಾವತಿಯ ಪತ್ರಿಕಾ ಭವನಕ್ಕೆ ಉದಾರವಾಗಿ ಅನುದಾನ ನೀಡಿದರು. ಅವರೊಳಗಿದ್ದ ಪ್ಯೂಢಲ್ ಪಾತ್ರವೊಂದು ಕರಗಿ ಹೋಗಿತ್ತು. ಎಂತಹ ಬಡವನೂ ಮನೆ ಬಾಗಿಲಿಗೆ ಬಂದು ಕಣ್ಣೀರಿಟ್ಟರೆ ಜೇಬಿಗೆ ಕೈ ಹಾಕಿ ಸಿಕ್ಕಿದಷ್ಟು ಕೊಟ್ಟು ಕಳುಹಿಸುವ ಕಾರುಣ್ಯವೊಂದು ಅಪ್ಪಾಜಿಯೊಳಗೆ ಸದಾ ಕಡಿದಾಡುತ್ತಿತ್ತು. ಈ ಅಪ್ಪಾಜಿಗೊಂದು ಸಿದ್ದಾಂತವಿತ್ತು ಅದು ಬಡವರ .ನೊಂದವರ ಪರವಾದದ್ದು ಮಾತ್ರವೇ ಆಗಿತ್ತು.

ತನಗೆ ಈ ಹಿಂದೆ ಹೃದಯ ಚಿಕಿತ್ಸೆ ಆಗಿರುವ ಮತ್ತು ವಯಸ್ಸಿನ ಸಾಮರ್ಥ್ಯದ ಸೂಕ್ಷ್ಮತೆಯನ್ನು ಲೆಕ್ಕಿಸದ ಅಪ್ಪಾಜಿ ಕೆಲವು ದಿನಗಳ ಹಿಂದೆಯಷ್ಟೆ ಕೋವಿಡ್ ಸೋಂಕಿತ ತನ್ನ ಕ್ಷೇತ್ರದ ಬಡವ ನೊಬ್ಬನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕರಿಸಿದರೆಂದು ಸಿಟ್ಟಿಗೆದ್ದು ಆಸ್ಪತ್ರೆಯ ಮುಂದೆ ಚಕ್ಕಲಮಕ್ಕಲ ಹಾಕಿಕೊಂಡು ಧರಣಿ ಕುಳಿತು ಗುಡುಗಿದ್ದ ಅಪ್ಪಾಜಿ ತಮ್ಮನ್ನು ತಾವೇ ಸಾವಿಗೆ ಒಡ್ಡಿಕೊಂಡು ಬಿಟ್ಟರು. ಅಪ್ಪಾಜಿ ಇಂದು ಇಲ್ಲ ಎಂದು ಗೊತ್ತಾದಾಗ ನಾನು ಘಾಸಿಗೊಂಡೆ. 1994 ರ ಅಪ್ಪಾಜಿ ಮತ್ತು 2020ರ ಅಪ್ಪಾಜಿ ಎಂಬ ಎರಡು ಪಾತ್ರಗಳನ್ನು ಕಳೆದುಕೊಂಡ ಸಂಕಟ ಮಾತ್ರ ಉಳಿದಿದೆ.

ಲೇಖನ:-
ಎನ್.ರವಿಕುಮಾರ್ ಟೆಲೆಕ್ಸ್
ಖ್ಯಾತ ಪತ್ರಕರ್ತರು
ಶಿವಮೊಗ್ಗ

 

 

 

 

 

 

ಓಂ ಶ್ರೀ, ದುರ್ಗಾ ಪರಮೇಶ್ವರಿ ದೇವಾಲಯದ, ಅಷ್ಟ ದಿಗ್ಬಂಧನ ಸಹಸ್ರ ದಿವ್ಯ ಮಂಡಲದ ಪ್ರಖ್ಯಾತ, ಗುರು ವಿನ ಗುರು ದೈವ, ಆಚಾರ್ಯರಾದ, ಡಾ! ಪ್ರಹ್ಲಾದ್ ಪಾಟೀಲ್, from gold medalist (ಗೋಲ್ಡ್ ಮೆಡಲಿಸ್ಟ್,) 38 ವರ್ಷ ಅನುಭವ ವುಳ್ಳ ಪ್ರಖ್ಯಾತ, ದೈವ, ದೀನರು ಅಶ್ವದಳ, ಶಕ್ತಿಪೀಠ, ಸಾಮರ್ಥ್ಯದ, ಸುಳಿವಿನ, ಅಂತರ, ಭಾವನೆಗಳ ತಂತ್ರ ವಿದ್ಯೆ ಯಿಂದ ಈ ಕ್ಷೇತ್ರದಲ್ಲಿ, ಪರಿಹಾರ, ಶತಸಿದ್ಧ (ಹಂಡ್ರೆಡ್ ಪರ್ಸೆಂಟ್) 100%, ನಂಬರ್ ವನ್ ವಶೀಕರಣ, ಸ್ಪೆಷಲಿಸ್ಟ್, ಸ್ತ್ರೀ-ಪುರುಷ ವಶೀಕರಣ, ಮಾಟ ಮಂತ್ರ, ಮೋಡಿ ವಿದ್ಯೆ, ಪ್ರೀತಿಯಲ್ಲಿ ನಂಬಿ ಮೋಸ, ಗಂಡ-ಹೆಂಡತಿಯರ ಗುಪ್ತ ಸಮಸ್ಯೆ, ಇನ್ನೊಬ್ಬರ ಹತ್ತಿರ, ಹೇಳಿಕೊಳ್ಳಲಾಗದೆ, ಮನನೊಂದು, ಕಷ್ಟ ಸಂಕಷ್ಟಗಳಿಗೆ, ಗುರಿಯಾಗಿ, ಜೀವನವೇ ಬೇಡವೆನಿಸಿದಾಗ, ಈ ಕ್ಷೇತ್ರದಿಂದ, ನೊಂದ, ಸ್ತ್ರೀಯರಿಗೆ, ಸಂಕಷ್ಟಗಳ, ದಾರಿದೀಪ,, ಈ ಕ್ಷೇತ್ರದಿಂದ, ಪರಿಹಾರ ಕಟ್ಟಿಟ್ಟ ಬುತ್ತಿ,,, ಮೊಬೈಲ್ ಸಂಖ್ಯೆ 9606712450

Tags: #saakshatv.comSpecialspecial story
ShareTweetSendShare
Join us on:

Related Posts

namma-ooru-namma-hemme-campaign-madarahalli-darshan-puttannaiah-mandya

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್

by admin
August 22, 2026
0

ನಮ್ಮ ಊರು ನಮ್ಮ ಹೆಮ್ಮೆ ಅಭಿಯಾನದ ಯಶಸ್ವಿ ಹೆಜ್ಜೆಗಳು ಮಾಡರಹಳ್ಳಿಯಲ್ಲಿ ಮೂಡಿಬಂದ ಜನಪರ ಕಾಳಜಿ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ದೂರದೃಷ್ಟಿಯ ಕಲ್ಪನೆಗೆ ಜನರ ಸಾಥ್...

mla-darshan-puttannaiah-surprise-visit-pandavapura-public-places-mandya

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ

by admin
August 22, 2026
0

ಪಾಂಡವಪುರ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ದಿಢೀರ್ ಭೇಟಿ ಮಿಂಚಿನ ಸಂಚಾರಕ್ಕೆ ಕಾರಣವಾದ ಮೇಲುಕೋಟೆ ಶಾಸಕ ಸ್ಥಳದಲ್ಲೇ ಸಮಸ್ಯೆಗಳ ಪರಿಶೀಲನೆ ಮತ್ತು ಅಧಿಕಾರಿಗಳೊಂದಿಗೆ...

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

ಕಣ್ಣಿಗೆ 3 ದೇಹಕ್ಕೆ 200 ಪೆಲೆಟ್ ಗುಂಡುಗಳು ಬಿದ್ದರೂ ಪೊಲೀಸರ ಮೌನವೇಕೆ? ಎಫ್ ಐಆರ್ ದಾಖಲಾಗುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ:ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ

by Shwetha
August 22, 2026
0

ನವದೆಹಲಿ: ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೆಹಲಿಯ ಸಂಸತ್ ಭವನ...

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

3 ವರ್ಷಗಳ ಬಳಿಕ ಇಮ್ರಾನ್ ಖಾನ್ ಆಸ್ಪತ್ರೆಗೆ ಶಿಫ್ಟ್; ಆರೋಗ್ಯ ಹದಗೆಟ್ಟ ಹಿನ್ನೆಲೆ ಚಿಕಿತ್ಸೆ

by Shwetha
August 22, 2026
0

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ, ಸುಮಾರು ಮೂರು ವರ್ಷಗಳ ಬಳಿಕ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಆರೋಗ್ಯ...

ನನ್ನ ಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆ: ಕೋಟಿ ಕೊಟ್ಟರೂ ಸಿಗದ ಪ್ರಚಾರ- ಸೋಷಿಯಲ್ ಮೀಡಿಯಾ ವ್ಯಂಗ್ಯಕ್ಕೆ ವಿನಯ್ ಗೌಡ ಬಿಂದಾಸ್ ಉತ್ತರ

ನನ್ನ ಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆ: ಕೋಟಿ ಕೊಟ್ಟರೂ ಸಿಗದ ಪ್ರಚಾರ- ಸೋಷಿಯಲ್ ಮೀಡಿಯಾ ವ್ಯಂಗ್ಯಕ್ಕೆ ವಿನಯ್ ಗೌಡ ಬಿಂದಾಸ್ ಉತ್ತರ

by Shwetha
August 22, 2026
0

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಜ್ಯೂರಿಯಾಗಿ ಕಾಣಿಸಿಕೊಂಡಿರುವ ನಟ ವಿನಯ್ ಗೌಡ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram