ಚಿಕ್ಕಮಗಳೂರು: ಆತ ಅನ್ಯಾಯ ಆದವರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದ್ದ ಲಾಯರ್. ಆದ್ರೆ ಆತನೇ ಕ್ರೂರವಾಗಿ ತನ್ನ ಎಳೆಯ ಕಂದಮ್ಮನನ್ನು ಕೊಲೆ ಮಾಡಿದ್ದಾನೆ. ಗಂಡ ಹೆಂಡತಿಯ ಮಧ್ಯೆ ಮನಸ್ತಾಪಕ್ಕೆ ಇನ್ನು ಬದುಕಿ ಬಾಳಬೇಕಾಗಿದ್ದ ಹೆಣ್ಣು ಮಗುವನ್ನು ಅಮಾನುಷವಾಗಿ ನೀರಿನಲ್ಲಿ ಮುಳುಗಿಸಿ ಕೊಲೆಮಾಡಿದ್ದಾನೆ ಉಮಾ ಶಂಕರ್.
ಈತ ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದ ದೊಡ್ಡಪೇಟೆಯ ನಿವಾಸಿ. ಕಳೆದ ಹಲವಾರು ವರ್ಷಗಳಿಂದ ವಕೀಲನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಕಳೆದ ಕೆಲ ವರ್ಷಗಳಿಂದ ಉಮಾ ಶಂಕರ್ ನ್ಯಾಯಾಲಯದಲ್ಲಿಯೇ ಡಿ ದರ್ಜೆ ನೌಕರಳಾಗಿದ್ದ ಮಂಜುಳಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ. ಕೆಲ ದಿನಗಳಿಂದಲೂ ಇಬ್ಬರಿಗೂ ಮನಸ್ಥಾಪ ಉಂಟಾಗಿತ್ತು. ಆದರೆ ಗುರುವಾರ ಮಂಜುಳಾ ಕೆಲಸಕ್ಕೆ ಹೋದ ವೇಳೆ ಮನೆ ಕೆಲಸದವರನ್ನು ಕಳುಹಿಸಿ ತನ್ನ ಎಂಟು ತಿಂಗಳ ಹೆಣ್ಣು ಮಗುವನ್ನೆ ಬಕೆಟ್ನಲ್ಲಿ ನೀರು ತುಂಬಿಸಿ ಮಗುವಿನ ಬಾಯಿಗೆ ಬಟ್ಟೆ ಕಟ್ಟಿ ಬಕೇಟ್ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ಈ ವೇಳೆ ಮಗುವನ್ನು ಶಿವಮೊಗ್ಗದ ಮೆಗ್ಘಾನ್ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಸಮಯ ಕೈಮೀರಿ ಹೋಗಿದ್ದರಿಂದ ಮಗು ಸಾವನ್ನಪ್ಪಿದೆ.
ಆರೋಪಿ ಉಮಾಶಂಕರ್ಗೆ ಈ ಮೊದಲೇ ಮದುವೆಯಾಗಿದ್ದರು ಮಂಜುಳಾರನ್ನು ನಂಬಿಸಿ ಮದುವೆಯಾಗಿದ್ದನಂತೆ. ಎಂಟು ತಿಂಗಳ ಹಿಂದೆ ಈಕೆಗೆ ಹೆಣ್ಣು ಮಗು ಜನಿಸಿದಾಗ ಹೆಣ್ಣು ಎಂಬ ಕಾರಣಕ್ಕೆ ಹಿಂಸೆ ನೀಡುತ್ತಿದ್ದ. ಅಲ್ಲದೇ ಮೊದಲ ಹೆಂಡತಿ ಮಾತು ಕೇಳಿಕೊಂಡು ನನ್ನನ್ನು ಸಹ ಬಿಟ್ಟು ಹೋಗುವಂತೆ ಪೀಡಿಸುತ್ತಿದ್ದ. ಹೆಣ್ಣು ಮಗುವಿಗೆ ಮುಂದೆ ಆಸ್ತಿ ನೀಡಬೇಕು ಎಂದು ಪದೇ ಪದೇ ಜಗಳ ತೆಗೆಯುತ್ತಿದ್ದ.
ಅಲ್ಲದೇ ನನ್ನ ಬಳಿಯೂ ಹಣಕ್ಕಾಗಿ ಪೀಡುಸುತ್ತಿದ್ದು, ನಾನು ಕೆಲಸಕ್ಕೆ ಹೋದ ಸಂದರ್ಭದಲ್ಲಿ ೮ ತಿಂಗಳ ಕಂದಮ್ಮನನ್ನು ಕೊಲೆ ಮಾಡಿದ್ದಾನೆ. ಇಂತಹ ಕ್ರೂರ ಮನಸ್ಸಿನ ವ್ಯಕ್ತಿಗೆ ಶಿಕ್ಷೆ ಆಗಬೇಕು ಎಂದು ಮಗುವಿನ ತಾಯಿ ಮಂಜುಳಾ ಕಣ್ಣೀರಿಡುತ್ತಿದ್ದಾಳೆ.
ಗಂಡ ಹೆಂಡಿರ ಜಗಳದ ಮಧ್ಯೆ ಕೂಸು ಬಡವಾಯ್ತು ಎಂಬAತೆ ಇಲ್ಲಿ ಕೂಸೇ ಕೊಲೆಯಾಗಿದೆ. ಜಗತ್ತನ್ನು ಕಣ್ಬಿಟ್ಟು ನೋಡುವ ಮೊದಲೇ ಹೆತ್ತಪ್ಪನೇ ಮಗಳನ್ನು ಈ ರೀತಿ ಅಮಾನುಷವಾಗಿ ಕೊಲೆ ಮಾಡಿರುವುದು ದುರದೃಷ್ಟಕರ. ಆರೋಪಿಯನ್ನು ಕಡೂರು ಪೊಲೀಸರು ಬಂಧಿಸಿ ದೂರು ದಾಖಲಿಸಿದ್ದಾರೆ.








