shriramulu
ಬಳ್ಳಾರಿ: ಇಲ್ಲಿನ ಐತಿಹಾಸಿಕ ಬೆಟ್ಟಗಳು ಈ ಗ್ರಾಮಕ್ಕೆ ಕಳೆ.
ಆದರೇ ಈಗ ಆ ಬೆಟ್ಟಗಳನ್ನೇ ಸರ್ವ ನಾಶ ಮಾಡೋ ಹುನ್ನಾರ ನಡಿತಾ ಇದೆ. ಆ
ದರೆ ಸಚಿವರ ಮೌನ ಜನರ ಬೇಸರಕ್ಕೆ ಎಡೆಮಾಡಿಕೊಟ್ಟಿದೆ.
ಹೌದು ಗಣಿನಾಡು ಬಳ್ಳಾರಿ ಜಿಲ್ಲೆ ತನ್ನೊಡಲಲ್ಲಿ ಬೆಟ್ಟ ಗುಡ್ಡ, ಅರಣ್ಯ ಪ್ರದೇಶ, ಕೆರೆ ಕಟ್ಟೆ, ಹಳ್ಳ ಕೊಳ್ಳಗಳನ್ನ ಇಟ್ಟು ಪೋಷಿಸುತ್ತಿದೆ.
ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತನ್ನ ಇರಿಸಿಕೊಂಡಿರುವ ಬಳ್ಳಾರಿಯಲ್ಲಿ ಇದೀಗ ಬೆಟ್ಟಗುಡ್ಡಗಳು , ಕಾಡುಗಿಡಮರಗಳಿಗೆ ಜನರಿಂದ ಕಂಟಕ ಎದುರಾಗಿದೆ.
ಬಳ್ಳಾರಿ ಸಮೀಪದ ಜೋಳದ ರಾಶಿ ಗ್ರಾಮದಲ್ಲಿ , ಆ ಗ್ರಾಮದ ಹೆಸರಿಗೆ ಮುಖ್ಯ ಕಾರಣವಾಗಿದ್ದ ನಾಲ್ಕು ಗುಡ್ಡಗಳ ಒಡಲಾಳವನ್ನ ಬಗೆದು ಸಾವಿರಾರು ಲೋಡ್ ಗ್ರಾವಲ್ ಸಾಗಾಟ ಮಾಡಲಾಗ್ತಿದೆ. 
ಈ ನಾಲ್ಕು ಗುಡ್ಡಗಳು ನೋಡಲು ಜೋಳದ ರಾಶಿಯ ಆಕೃತಿಯನ್ನ ಹೋಲುವ ಪರಿಣಾಮ ಈ ಗ್ರಾಮಕ್ಕೆ ಹೆಸರಿಡಲಾಗಿದೆ.
ಆದರೇ ಈಗ ಈ ಗುಡ್ಡಗಳನ್ನ ಮಾಟಾಷ್ ಮಾಡೋ ಹುನ್ನಾರ ನಡಿತಿರೋದು ಗ್ರಾಮಸ್ಥರಲ್ಲಿ ಬೇಸರ ತಂದಿದೆ.
ಗ್ರಾಮಸ್ಥರಿಗೂ ಗೊತ್ತಿಲ್ಲದ ಹಾಗೆ ಗುಡ್ಡಗಳಲ್ಲಿ ಗ್ರಾವಲ್ ತೆಗೆದು ಮಾರಲು ಲೀಸ್ ಕೊಟ್ಟುಬಿಟ್ಟಿದ್ದಾರೆ ಅಧಿಕಾರಿಗಳು.
ಆದ್ರೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. 
ಅಷ್ಟೇ ಅಲ್ಲದೇ ಈ ಬಗ್ಗೆ ಪ್ರಶ್ನಿಸಿದರೆ ಗ್ರಾಮಸ್ಥರ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ನಡೆಸುತ್ತಾರೆ ಎಂಬುದು ಗ್ರಾಮಸ್ಥರು ಆರೋಪ.
ಇನ್ನೂ ಈ ಜೋಳದ ರಾಶಿ ಶ್ರೀರಾಮುಲು ಅವರ ಸ್ವಾಗ್ರಾಮ. ಆದರೇ (shriramulu) ರಾಮುಲುಗೆ ತಮ್ಮ ಊರಿಗೆ ಕಳಶಪ್ರಾಯವಾಗಿರೋ ಗುಡ್ಡಳನ್ನ ಬಗೆದು ದಂಧೆ ಮಾಡ್ತಾ ಇರೋದು ಗೊತ್ತಿದ್ದರೂ ಗೊತ್ತಿಲ್ಲದಂತೆ ಇದ್ದಾರೆ ಎಂದು ಆರೋಪಿಸಿ ಆಕ್ರೋಶ ಹೊರಹಾಕ್ತಿದ್ದಾರೆ ಗ್ರಾಮಸ್ಥರು.
ಅಲ್ಲದೇ ಜಿಲ್ಲಾಡಳಿತದ ವಿರುದ್ಧವೂ ಜನಾಕ್ರೋಶ ಭುಗಿಲೆದ್ದಿದೆ.
ಒಟ್ಟಾರೆ ಹಣದಾಸೆಯಿಂದ ಮನುಷ್ಯನ ಸ್ವಾರ್ಥಕ್ಕೆ ಮರಗಿಡಗಳು, ಬೆಟ್ಟ ಗುಡ್ಡಗಳು ಸರ್ವನಾಶವಾಗ್ತಿರೋದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಇತ್ತ ಗಮನ ಹರಿಸಿ ಅಳಿದುಳಿದ ವನ್ಯ ಸಂಪತ್ತನ್ನ ಉಳಿಸಬೇಕಾಗಿದೆ.








