Vijay yesudas
ಖ್ಯಾತ ಗಾಯಕ ಹಾಗೂ ನಟ ವಿಜಯ್ ಏಸುದಾಸ್ ಅವರ ಕಾರಿಗೆ ಅಪಘಾತವಾಗಿದೆ. ಏಸುದಾಸ್ ಪುತ್ರ ವಿಜಯ್ ಏಸುದಾಸ್ ಅವರ ಕಾರು ಅಪಘಾತಕ್ಕೆ ಈಡಾಗಿದೆ. ಅಂದ್ಹಾಗೆ ಘಟನೆಯಲ್ಲಿ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ವಿಜಯ್ ಯೇಸುದಾಸ್ ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎನ್ನಲಾಗಿದೆ. ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ತಡರಾತ್ರಿ ತಿರುವನಂತಪುರಂ ನಿಂದ ಕೊಚ್ಚಿ ಕಡೆಗೆ ಕಾರಿನಲ್ಲಿ ಬರುತ್ತಿದ್ದಾಗ ಅಲಪ್ಪು ಬಳಿ ವಿಜಯ್ ಏಸುದಾಸ್ ಕಾರು ಅಪಘಾತಕ್ಕೆ ಈಡಾಗಿದೆ. ಹೆದ್ದಾರಿಯಲ್ಲಿ ಎದುರಿಗೆ ಬರುತ್ತಿದ್ದ ಕಾರಿಗೆ ವಿಜಯ್ ಕಾರು ಢಿಕ್ಕಿ ಹೊಡೆದಿದ್ದು, ಎರಡೂ ಕಾರಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಷ್ಟೆ ಆಗಿವೆ ಎನ್ನಲಾಗಿದೆ. ಆದರೆ ವಿಜಯ್ ಕಾರು ಜಖಂ ಆಗಿದೆ.

20 ವರ್ಷಗಳಿಂದಲೂ ಗಾಯಕರಾಗಿ ಕೆಲಸ ಮಾಡುತ್ತಾ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಏಸುದಾಸ್ ಅವರು ನಟನೆಯಲ್ಲೂ ನಿರತಾರಿದ್ದಾರೆ. ಸದ್ಯ ಅವರ ಕಾರಿಗೆ ಅಪಘಾತವಾಗಿದ್ದ ಸುದ್ದಿ ತಿಳಿದ ತಕ್ಷಣ ಅಭಿಮಾನಿಗಳು ಕೊಂಚ ಆತಂಕ್ಕೇ ಈಡಾಗಿದ್ರು. ಬಳಿಕ ಪೂರ್ಣ ವಿಚಾರ ತಿಳಿದು ಸಮಾಧಾನಗೊಂಡಿದ್ದಾರೆ. ಆದ್ರೆ ವರ್ಷಗಳ ಕಾಲ ಮಳಯಾಳಂ ಕ್ಷೇತ್ರದಲ್ಲಿ ಅನೇಕ ಹಾಡುಗಳ ಹಾಡಿ ಪ್ರಖ್ಯಾತಿ ಗಳಿಸಿರುವ ಯೇಸುದಾಸ್ ಅವರು ಇತ್ತೀಚೆಗೆ ಮಳಯಾಳಂ ಚಿತ್ರದಲ್ಲಿ ಇನ್ಮುಂದೆ ಹಾಡುವುದಿಲ್ಲ ಎಂದು ಘೋಷಣೆ ಮಾಡುವ ಮೂಲಕ ಮಳಯಾಳಂ ಅಭಿಮಾನಿಗಳಿಗೆ ಶಾಕ್ ನೀಡಿದ್ರು. ಅಂದ್ಹಾಗೆ ಈ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಕಾರಣ ಕೊಟ್ಟಿದ್ದ ಏಸುದಾಸ್ ಅವರು ಮಳಯಾಳಂ ಸಿನಿಮಾ ಉದ್ಯಮದಲ್ಲಿ ಗಾಯಕರು ಹಾಗೂ ಸಂಗೀತ ನಿರ್ದೇಶಕರಿಗೆ ಸೂಕ್ತ ಗೌರವ ನೀಡುವುದಿಲ್ಲ, ಹಾಗಾಗಿ ಇನ್ನು ಮುಂದೆ ಮಲಯಾಳಂ ಸಿನಿಮಾಗಳಿಗೆ ಹಾಡುವುದಿಲ್ಲ ಎಂದಿದ್ದರು. ಈ ಮೂಲಕ ಇನ್ನೂ ಮುಂದಿನ ದಿನಗಳಲ್ಲಿ ಅವರ ಗಾಯನ ಕೇಳುವ ಇಚ್ಛೆ ಹೊಂದಿದ್ದ ಅಭಿಮಾನಿಗಳ ಮನಸ್ಸಿಗೆ ಬೇಸರ ಉಂಟಾಗಿತ್ತು.
Vijay yesudas
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channe








