`ರಾಜರಾಜೇಶ್ವರಿ ನಮ್ಮದೇ’ ಎನ್ನುತ್ತಿರುವುದೇಕೆ ಕಾಂಗ್ರೆಸ್..?
ಬೆಂಗಳೂರು : ನವೆಂಬರ್ ಮೂರರಂದು ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭೆ ಚುನಾವಣೆಗೆ ಮತದಾನವಾಗಿದ್ದು, ಇದೇ ತಿಂಗಳ 10 ರಂದು ಫಲಿತಾಂಶ ಹೊರ ಬೀಳಲಿದೆ.
ಈ ಮಧ್ಯೆ ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಾಚಾರವಾಗುತ್ತಿದ್ದು, ಕಾಂಗ್ರೆಸ್ ಮಾತ್ರ ರಾಜರಾಜೇಶ್ವರಿ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದೆ.
ಯಾಕೆ ಈ ವಿಶ್ವಾಸ..?
ಗೆಲುವು ನಮ್ಮದೇ ಎಂದು ಕಾಂಗ್ರೆಸ್ ನಾಯಕರ ವಿಶ್ವಾಸ ವ್ಯಕ್ತಪಡಿಸಲು ಮುಖ್ಯವಾಗಿ ಕೆಲ ಕಾರಣಗಳಿವೆ.
ಅವುಗಳೆಂದರೇ
ಮಹಿಳೆಗೆ ಟಿಕೆಟ್ ನೀಡಿದ್ದು : ರಾಜರಾಜೇಶ್ವರಿ ಉಪಚುನಾವಣೆ ಘೋಷಣೆಯಾದಾಗ ಕಾಂಗ್ರೆಸ್ ಮಹಿಳೆಗೆ ಟಿಕೆಟ್ ನೀಡುತ್ತೆ ಅಂತಾ ಯಾರು ಊಹೆ ಮಾಡಿರಲಿಲ್ಲ.
ಆದ್ರೆ ಕಾಂಗ್ರೆಸ್ ನಾಯಕರು ಡಿ.ಕೆ. ರವಿ ಅವರ ಪತ್ನ ಹೆಚ್ ಕುಸುಮಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡ್ತು. ಆ ಮೂಲಕ ಕ್ಷೇತ್ರದಲ್ಲಿರುವ ಮಹಿಳಾ ಮತದಾರರ ಗಮನ ಸೆಳೆಯಿತು.
ಯೋಗೇಶ್ಗೌಡ ಹತ್ಯೆ ಕೇಸ್: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ..!
ಜೊತೆಗೆ ಈ ಹಿಂದೆ ಮುನಿರತ್ನ ಶಾಸಕರಾಗಿದ್ದಾಗ ಅವರ ವಿರುದ್ಧ ಸ್ಥಳೀಯ ಮಹಿಳಾ ಕಾರ್ಪೊರೇಟರ್ ಗಳು ತಿರುಗಿ ಬಿದ್ದಿದ್ದರು.
ಜೊತೆಗೆ ಕೆಲ ದೌರ್ಜನ್ಯದ ಅರೋಪಗಳು ಅವರ ಮೇಲಿದ್ದವು. ಇದನ್ನು ತಡೆಯಲು ನಾವು ವಿದ್ಯಾವಂತ ಮಹಿಳೆಯನ್ನು ಕಣಕ್ಕಿಳಿಸಿದ್ದೇವೆ ಎಂದು ಕಾಂಗ್ರೆಸ್ ಪ್ರಚಾರ ಮಾಡಿದೆ. ಇದು ಧನಾತ್ಮಕ ಫಲಿತಾಂಶ ನೀಡಲಿದೆ ಎನ್ನೋ ನಂಬಿಕೆ ಕಾಂಗ್ರೆಸ್ ನವರದ್ದು.
ಜೆಡಿಎಸ್ ನಾಯಕರನ್ನು ಸೆಳೆದದ್ದು : ಕುಸುಮಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ಬಳಿಕ ಕಾಂಗ್ರೆಸ್ ನಾಯಕರು, ಕ್ಷೇತ್ರದಲ್ಲಿದ್ದ ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಕರೆತಂದರು.
ಪಕ್ಷ ತ್ಯಜಿಸಿ ಬಂದ ಜೆಡಿಎಸ್ ನಾಯಕರು ಕಾಂಗ್ರೆಸ್ ಪರ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದಾರೆ ಎಂಬ ನಂಬಿಕೆ ಕಾಂಗ್ರೆಸ್ ಗೆ ಇದೆ.
ಒಕ್ಕಲಿಗ ಮತದಾರರ ಕೃಪೆ : ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸುಮಾರು 75 ಸಾವಿರ ಒಕ್ಕಲಿಗ ಮತದಾರಿದ್ದಾರೆ.
ಈ ಮತಗಳನ್ನು ಕಾಂಗ್ರೆಸ್ ನತ್ತ ಸೆಳೆಯಲು ಡಿ.ಕೆ.ಶಿವಕುಮಾರ್ ಭಾರಿ ಕಸರತ್ತು ನಡೆಸಿದ್ದಾರೆ.
ನ.10 ರ ಬಳಿಕ ಸಿಎಂ ಬದಲಾವಣೆ ಖಚಿತ : ಸಿದ್ದರಾಮಯ್ಯ ವಿಶ್ವಾಸ
ಸಮುದಾಯದ ಮುಖಂಡರೊಂದಿಗೆ ಡಿಕೆ ಬ್ರದರ್ಸ್ ಸಾಕಷ್ಟು ಭಾರಿ ಸಮಾಲೋಚನೆ ನಡೆಸಿದ್ದು, ಕುಸುಮಾ ಅವರ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಗೆ ಮತ ನೀಡಿರುವ ಸಾಧ್ಯತೆಗಳಿವೆ.
ಡಿಕೆ ಸೋದರರ ಪರಿಶ್ರಮ : ಕಾಂಗ್ರೆಸ್ ನಾಯಕರು ರಾರಾ ಕ್ಷೇತ್ರ ನಮ್ಮದೇ ಎನ್ನಲು ಪ್ರಮುಖ ಕಾರಣ ಡಿಕೆಬ್ರದರ್ಸ್.. ಹೌದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರು ಈ ಕ್ಷೇತ್ರವನ್ನು ಪ್ರತಿಷ್ಟೆಯ ಪ್ರಶ್ನಿಯನ್ನಾಗಿ ಸ್ವೀಕರಿಸಿದ್ದರು.
ಹೆಚ್ಚು ಗಮನ ಹಾಗೂ ಆಸಕ್ತಿಯನ್ನು ಈ ಉಪಚುನಾವಣೆಗೆ ತೊಡಗಿಸಲಾಗಿದೆ. ಡಿಕೆ ಬ್ರದರ್ಸ್ ಹಗಲು ರಾತ್ರಿ ಅನ್ನದೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ಪ್ರಚಾರ, ತಂತ್ರಗಾರಿಕೆ ನಡೆಸಿದ್ದಾರೆ.
ಇದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕೈ ಹಿಡಿಯಲಿದೆ ಎಂಬ ವಿಸ್ವಾಸ ಕಾಂಗ್ರೆಸ್ ನವರದ್ದು.
ಸಾಂಪ್ರದಾಯಿಕ ಮತಗಳು : ಕುಸುಮಾ ಪರ ಕಾಂಗ್ರೆಸ್ ನ ಮಾಸ್ ಲೀಡರ್ ಗಳಾದ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಒಟ್ಟಾಗಿ ಪ್ರಚಾರ ನಡೆಸಿದ್ದಾರೆ.
ಕಾಂಗ್ರೆಸ್ ಇಲ್ಲಿ ಒಗ್ಗಟ್ಟು ಪ್ರದರ್ಶಿಸಿ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿದೆ. 59 ಮಂದಿ ಕಾಂಗ್ರೆಸ್ ಮುಖಂಡರನ್ನು ಉಪಚುನಾವಣೆಗೆ ವೀಕ್ಷಕರನ್ನಾಗಿ ನಿಯೋಜಿಸಿ ಕಾರ್ಯ ನಿರ್ವಹಿಸಲಾಗಿದೆ.
ಸಾಂಪ್ರದಾಯಿಕ ಮತಗಳಾಗಿ ತಮ್ಮ ಜತೆ ಉಳಿದುಕೊಳ್ಳಲಿವೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕರು ರಾಜರಾಜೇಶ್ವರಿ ನಗರದಲ್ಲಿ ಗೆಲುವು ನಮ್ಮದೇ ಎನ್ನುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel











