ಈಶಾನ್ಯ ರಾಜ್ಯಗಳೊಂದಿಗೆ ಇಸ್ರೇಲ್ ನಿಕಟ ಒಡನಾಟವನ್ನು ಬಯಸುತ್ತಿದೆ – ರಾನ್ ಮಲ್ಕಾ Israel northeastern states
ತ್ರಿಪುರ, ನವೆಂಬರ್08: ಭಾರತದ ಇಸ್ರೇಲ್ ರಾಯಭಾರಿ ರಾನ್ ಮಲ್ಕಾ ಭಾರತದ ಈಶಾನ್ಯ ರಾಜ್ಯಗಳಿಗೆ ಎರಡು ದಿನಗಳ ಪ್ರವಾಸದಲ್ಲಿದ್ದಾರೆ. ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಅವರೊಂದಿಗಿನ ಸಭೆಯಲ್ಲಿ ತಮ್ಮ ದೇಶವು ಈಶಾನ್ಯ ರಾಜ್ಯಗಳೊಂದಿಗೆ ನಿಕಟ ಒಡನಾಟವನ್ನು ಬಯಸುತ್ತಿದೆ ಮತ್ತು ಈ ಪ್ರದೇಶದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ತಮ್ಮ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಬಯಸಿದೆ ಎಂದು ಹೇಳಿದ್ದಾರೆ. Israel northeastern states

ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಲು ಜ್ಞಾನವನ್ನು ಹಂಚಿಕೊಳ್ಳಲು ತಮ್ಮ ದೇಶವು ಆಸಕ್ತಿ ಹೊಂದಿದೆ ಎಂದ ಅವರು ಇಸ್ರೇಲ್ ಭಾರತದ ಪ್ರಬಲ ಕಾರ್ಯತಂತ್ರದ ಪಾಲುದಾರ ಮತ್ತು ಸಂಪನ್ಮೂಲಗಳನ್ನು ಬಳಸುವುದಕ್ಕಾಗಿ ಈಶಾನ್ಯ ಪ್ರದೇಶದೊಂದಿಗೆ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಬಯಸಿದೆ ಎಂದರು.
ಮಾಜಿ ಪ್ರಧಾನಿ ನವಾಜ್ ಷರೀಫ್ ಸೇನೆಯಲ್ಲಿ ದಂಗೆ ಸೃಷ್ಟಿಸುತ್ತಿರುವ ನರಿ – ಇಮ್ರಾನ್ ಖಾನ್ ಕಿಡಿ
ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಬಯಸುತ್ತೇವೆ ಎಂದು ಮಾಲ್ಕಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಭಾರತ ನಮ್ಮ ಆಪ್ತ ಸ್ನೇಹಿತ. ಬೆಳವಣಿಗೆಗಳ ಕ್ಷೇತ್ರಗಳಲ್ಲಿ ಪರಸ್ಪರ ಸಹಾಯ ಮಾಡುವುದಾಗಿ ಉಭಯ ದೇಶಗಳು ಪ್ರತಿಜ್ಞೆ ಮಾಡಿದ್ದು, ಈಶಾನ್ಯವು ಭಾರತದ ಅವಿಭಾಜ್ಯ ಅಂಗವಾಗಿರುವುದರಿಂದ, ವಿಶೇಷವಾಗಿ ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ಹಡಗು ಕ್ಷೇತ್ರಗಳಲ್ಲಿ ಉನ್ನತ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.

ಇಸ್ರೇಲ್ ಮತ್ತು ಅಸ್ಸಾಂನ ಗುವಾಹಟಿ ನಡುವಿನ ವಾಯು ಸಂಪರ್ಕದ ಬಗ್ಗೆ ಇಸ್ರೇಲ್ ಹೆಚ್ಚು ಆಸಕ್ತಿ ಹೊಂದಿದೆ ಎಂದು ಮಲ್ಕಾ ಹೇಳಿದರು. ಉಭಯ ದೇಶಗಳ ನಡುವೆ ಸಂಸ್ಕೃತಿ ವಿನಿಮಯ ಮಾಡಿಕೊಳ್ಳಲು ಇಸ್ರೇಲ್ ಕೂಡ ಆಸಕ್ತಿ ಹೊಂದಿದೆ ಎಂದು ಅವರು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶೌಚಾಲಯದ ನೀರನ್ನು ಬಳಸಿ ಪಾನಿಪೂರಿ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನhttps://t.co/8bDxbszRcE
— Saaksha TV (@SaakshaTv) November 8, 2020
https://twitter.com/SaakshaTv/status/1325123272652910606?s=19
https://twitter.com/SaakshaTv/status/1325123129379676164?s=19








