ಪ್ರಧಾನಿ ಮೋದಿಯವರು ಮಿಲಿಟರಿ ಸಮವಸ್ತ್ರ ಧರಿಸಿರುವುದನ್ನು ಪ್ರಶ್ನಿಸಿದ ಯೂತ್ ಕಾಂಗ್ರೆಸ್ Congress questioned pm modi
ಜೈಸಲ್ಮೇರ್, ನವೆಂಬರ್17: ದೀಪಾವಳಿಯ ರಾಜಸ್ಥಾನದ ಜೈಸಲ್ಮೇರ್ನಲ್ಲಿ ನಡೆದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಶಿಬಿರಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಿಲಿಟರಿ ಸಮವಸ್ತ್ರ ಧರಿಸಿರುವುದನ್ನು ಯೂತ್ ಕಾಂಗ್ರೆಸ್ ಪ್ರಶ್ನಿಸಿದೆ. Congress questioned pm modi

ಕಾಂಗ್ರೆಸ್ಸಿನ ಯುವ ವಿಭಾಗವು ಸೇನೆಯ ಸಮವಸ್ತ್ರದಲ್ಲಿರುವ ಮೋದಿಯ ಚಿತ್ರವನ್ನು ಟ್ವೀಟ್ ಮಾಡಿ, ರಾಜಕಾರಣಿ ಸೇನಾ ಸಿಬ್ಬಂದಿಗಳ ಪ್ರತಿಷ್ಠಿತ ಸಮವಸ್ತ್ರವನ್ನು ಧರಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದೆ.
ಅವರು ಸೈನ್ಯದ ಮುಖ್ಯಸ್ಥರೂ ಅಲ್ಲ, ಅಧಿಕಾರಿಯೂ ಅಲ್ಲ. ರಾಜಕೀಯ ಮುಖಂಡರು ಸೇನಾ ಸಮವಸ್ತ್ರವನ್ನು ಧರಿಸುವುದು ಎಷ್ಟು ಸೂಕ್ತ? ಎಂದು ಮೋದಿಯವರ ಚಿತ್ರಕ್ಕೆ ಯೂತ್ ಕಾಂಗ್ರೆಸ್, ಹಿಂದಿಯಲ್ಲಿ ಶೀರ್ಷಿಕೆ ನೀಡಿದೆ.
ಪ್ರಧಾನಿ ಮೋದಿ ಸತತ ಏಳನೇ ವರ್ಷ ತಮ್ಮ ದೀಪಾವಳಿಯನ್ನು ಸೇನಾ ಸಿಬ್ಬಂದಿಯೊಂದಿಗೆ ಆಚರಿಸಿದ್ದಾರೆ.
ना तो ये सेना के प्रमुख हैं, ना हीं अधिकारी. फिर एक असैन्य नेता का सेना की वर्दी पहनना कहां तक उचित है? pic.twitter.com/I7FRB5ZkAw
— Indian Youth Congress (@IYC) November 16, 2020
ಅವರು ಈ ಬಾರಿ ರಾಜಸ್ಥಾನದ ಜೈಸಲ್ಮೇರ್ಗೆ ತೆರಳಿ ಅಲ್ಲಿನ ಸೈನಿಕರನ್ನು ಮಿಲಿಟರಿ ಸಮವಸ್ತ್ರದಲ್ಲಿ ಉದ್ದೇಶಿಸಿ ಮಾತನಾಡಿದ್ದು, ಇದು ಕಾಂಗ್ರೆಸ್ ಅನ್ನು ಕೆರಳಿಸಿದೆ.
ಕೋವಿಡ್-19 ಪತ್ತೆ ಹಿನ್ನೆಲೆಯಲ್ಲಿ ಭಾರತೀಯ ಸಂಸ್ಥೆಯಿಂದ ಮೀನು ಆಮದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಚೀನಾ
ನಿನ್ನೆ, ಕಾಂಗ್ರೆಸ್ ಮುಖಂಡ ತಾರಿಕ್ ಅನ್ವರ್ ಅವರು ಪ್ರಧಾನ ಮಂತ್ರಿಯಂತೆ ಸಂದರ್ಭಕ್ಕೆ ಅನುಗುಣವಾಗಿ ಉಡುಪುಗಳನ್ನು ಬದಲಿಸುವಲ್ಲಿ ಪ್ರವೀಣರಾಗಿದ್ದಾರೆ ಎಂದು ಟೀಕಿಸಿದ್ದರು ಮತ್ತು ಪ್ರಧಾನಿ ಮೋದಿಯನ್ನು ‘ಸೋಗು ಹಾಕುವ ಪ್ರಧಾನಿ’ ಎಂದು ಕರೆದಿದ್ದರು.

ತಮ್ಮ ಟ್ವಿಟ್ಟರ್ ನಲ್ಲಿ, ಕಾಂಗ್ರೆಸ್ ಮುಖಂಡ ತಾರಿಕ್ ಅನ್ವರ್, ದೇಶವು ಬಹಳಷ್ಟು ಪ್ರಧಾನ ಮಂತ್ರಿಗಳನ್ನು ಕಂಡಿದೆ, ಆದರೆ ಮೊದಲ ಬಾರಿಗೆ ಭಾರತಕ್ಕೆ ಸೋಗು ಹಾಕುವ ಪ್ರಧಾನ ಮಂತ್ರಿಯೊಬ್ಬರು ಸಿಕ್ಕಿದ್ದಾರೆ. ಸಂದರ್ಭಕ್ಕೆ ಅನುಗುಣವಾಗಿ ಪ್ರಧಾನ ಮಂತ್ರಿಗಳು ತಮ್ಮ ಗೆಟ್ಅಪ್ ಬದಲಿಸುವಲ್ಲಿ ಪ್ರವೀಣರಾಗಿದ್ದಾರೆ ಎಂದು ಟೀಕಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶುಂಠಿಯ ಅಸಂಖ್ಯಾತ ಆರೋಗ್ಯ ಪ್ರಯೋಜನಗಳು#health#healthtips#healthcare#GINGERhttps://t.co/80SBmAXYZS
— Saaksha TV (@SaakshaTv) October 25, 2020
ನಾನು ಪತ್ರಕರ್ತನಾಗಲು ಪ್ರೇರೇಪಿಸಿದ ಮಹಾಗುರು ಇನ್ನಿಲ್ಲ. ಈ ದುಃಖ ಶಾಶ್ವತ: ರವಿ ಬೆಳಗೆರೆ ಎನ್ನುವ ಸಮೃದ್ಧ ಬಿದಿರು ಕಟ್ಟೆ ಬಂದು ಉರುಳಿಹೋಯಿತೆನ್ನುವ ದುಃಖ:https://t.co/PEi8zvtiXb
— Saaksha TV (@SaakshaTv) November 17, 2020








