ADVERTISEMENT
Saturday, July 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನನ್ನ ಜೀವನದಲ್ಲಿ ಪ್ರಭಾವ ಬೀರಿದ ಕುವೆಂಪುರವರ ಕವನಗಳು

Shwetha by Shwetha
November 28, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Kuvempu poems
Share on FacebookShare on TwitterShare on WhatsappShare on Telegram

ನನ್ನ ಜೀವನದಲ್ಲಿ ಪ್ರಭಾವ ಬೀರಿದ ಕುವೆಂಪುರವರ ಕವನಗಳು Kuvempu poems

ಶಾಲಾ ದಿನಗಳಲ್ಲಿ ಕುವೆಂಪು ಎಂಬ ಹೆಸರು ಕೇಳಿದಾಗ ಏನೋ ಒಂದು ಪುಳಕ.ಕುವೆಂಪು ಆ ಹೆಸರಲ್ಲೇ ಇದೆ ಏನೋ ಕಂಪು. ಇದು ಕನ್ನಡದ ಕಂಪು.ಕನ್ನಡ ಸಾಹಿತ್ಯದ ಕಂಪು. Kuvempu poems

Related posts

Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

July 4, 2026
kylian mbappe

fifaworldcup-2026- ಮೈದಾನದಲ್ಲಿ ರಕ್ಕಸ.. ಬಡವರ ಪಾಲಿಗೆ ದೇವದೂತ.. ಫುಟ್‌ಬಾಲ್ ಜಗತ್ತಿನ ಭವಿಷ್ಯದ ಮಹಾರಾಜ..!

July 4, 2026

“ಮನೆಮನೆ ಮುದ್ದು ಮನೆ
ಮನೆಮನೆ ನನ್ನ ಮನೆ
ತಾಯಿ ಮುತ್ತು ಕೊಟ್ಟ ಮನೆ
ತಂದೆ ಪೆಟ್ಟು ಕೊಟ್ಟ ಮನೆ
” ಎಂಬ ಒಂದು ಆಪ್ತವಾದ ಕಲ್ಪನೆಯನ್ನು ಮನದಲ್ಲಿ ಹುಟ್ಟು ಹಾಕಿದ ಸುಂದರವಾದ ಕವನದ ಕರ್ತೃರಾದ ಕುವೆಂಪುರವರ ಕವನದ ಬಗ್ಗೆ ಬಾಲ್ಯದಿಂದಲೂ ಏನೋ ಸೆಳೆತ.

Kuvempu poems

“ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ” ಕನ್ನಡದ ಹೃದಯ ಕನ್ನಡಕ್ಕಾಗಿ ಮಿಡಿಯಬೇಕು ಎಂಬ ಸಂದೇಶದಿಂದ ಕನ್ನಡದತ್ತ ಸೆಳೆದು “ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಎಂಬಲ್ಲಿ ಕರ್ನಾಟಕದ ಸುಂದರ ಪ್ರಕೃತಿಯ ದರುಶನ ಮಾಡಿಸಿ ಮನದಲ್ಲಿ ನಮ್ಮ ನಾಡಿನ ಬಗ್ಗೆ ಅಭಿಮಾನ,ಭಕ್ತಿಯನ್ನು ಹುಟ್ಟು ಹಾಕಿದ ಕವನಗಳು ಎಂದೆಂದಿಗೂ ತಮ್ಮ ಅಳಿಸಲಾಗದ ಛಾಪನ್ನು ಮನದಾಳದಲ್ಲಿ ಒತ್ತಿವೆ.
ವಿಶ್ವ ಮಾನವ ಸಂದೇಶವನ್ನು ಸಾರಿದ ಕವನ ಇಡೀ ಮಾನವ ಕುಲವೇ ಒಂದು. ಜಾತಿ ಮತ ಭೇದಗಳನ್ನು ತೊರೆದು ವಿಶ್ವ ಮಾನವರಾಗೋಣಾ ಅನ್ನುತ್ತಾ ಸಮರಸ ಭಾವದಿಂದ ಬಾಳುವ ಪಥವನ್ನು ಸೂಚಿಸಿದ ಕವನ.

ನಾ ನಿನಗೆ ನೀ ನನಗೆ ಜೇನಾಗುವ
ರಸದೇವ ಗಂಗೆಯಲಿ ಮೀನಾಗುವ ಹೂವಾಗುವ ಹಣ್ಣಾಗುವ ಪ್ರತಿರೂಪಿ ಭಗವತಿಗೆ ಮುಡಿಪಾಗುವ

ರಸ ಋಷಿಯ ಈ ಕವನ ಓದುತ್ತಾ ,ಕೇಳುತ್ತಾ,ಗುನುಗುತ್ತಾ ಕಳೆದ ದಿನಗಳು ಅದೆಷ್ಟು ಚೆಂದ. ಪದಗಳಿಂದಲೇ ಮನದಲ್ಲಿ ನೂರೊಂದು ಭಾವನೆಗಳನ್ನು ಎಬ್ಬಿಸಿದ ಸುಂದರ ಸಾಹಿತ್ಯವಿದು.

ವಯಸ್ಸಿನ ನಾಗಾಲೋಟದ ಪಯಣದಲ್ಲಿ ಬದಲಾಗುವ ಮನಸ್ಥಿತಿಯಲ್ಲಿ ಮಾಗಿದ ಮನಕ್ಕೆ ಇಷ್ಟವಾದ ಕವನ,ಆಧ್ಯಾತ್ಮಿಕ ಚಿಂತನೆಯನ್ನು ಮನದಲ್ಲಿ ಹುಟ್ಟುಹಾಕುವ
ಅಗಣಿತ ತಾರಾಗಣಗಳ ನಡುವೆ.

ಅಗಣಿತ ತಾರಾಗಣಗಳ ನಡುವೆ
ನಿನ್ನನ್ನೇ ನೆಚ್ಚಿಹೆ ನಾನು
ನನ್ನ ಜೀವನ ಸಮುದ್ರಯಾನಕ್ಕೆ
ಚಿರ ಧೃವತಾರೆಯೂ ನೀನು

ಇಲ್ಲದ ಸಲ್ಲದ ತೀರಗಳೆಡೆಗೆ ನಾ
ತೊಳಲುತ ಬಳಲಿಹೆನು
ದಿಟ್ಟಿಯ ನಿನ್ನೆಡೆ ನೆಟ್ಟಿರೆ
ಕಡೆಗೆ ಗುರಿಯನು ಸೇರೆನೆ ನಾನು

ಚಂಚಲವಾದ ತಾರೆಗಳಲ್ಲಿ
ನಿಶ್ಚಲನೆಂದರೆ ನೀನೇ
ಮಿಂಚಿ ಮುಳುಗುತಿಹ ನಶ್ವರದೆದೆಯಲ್ಲಿ
ಶಾಶ್ವತನೆಂದರೆ ನೀನೇ

_ ಕುವೆಂಪು
(ಅಗ್ನಿ ಹಂಸ ಕವನಸಂಕಲನದಿಂದ)

ಹುಟ್ಟು ಸಾವಿನ ನಡುವಿನ ಜೀವನ ಪಯಣವು ಒಂದು ಸಮುದ್ರ ಯಾನದಂತೆ.ತಿಳಿಯಾದ ನೀರಿನ ಮೇಲೆ ಸರಾಗವಾಗಿ ಸಾಗುತ್ತಿರುವಾಗ ಹಿಮಬಂಡೆಗಳು,ಅಪಾಯಕಾರಿ ಅಲೆಗಳು ಅಥವಾ ಯಾವುದೇ ಜಲಚರಗಳಿಂದಲೂ ಅಪಾಯ ಕಟ್ಟಿಟ್ಟ ಬುತ್ತಿ.ಅಗಾಧವಾಗಿ ವ್ಯಾಪಿಸಿರುವ ವಾರಿಧಿಯಲ್ಲಿ ಕವಿದ ಅಂಧಕಾರದಲ್ಲಿ ದಾರಿ ತೋರುವುದು ಕೇವಲ ಧ್ರುವತಾರೆ.ಲೆಕ್ಕಕ್ಕೆ ಸಿಗದಷ್ಟು ನಕ್ಷತ್ರಗಳು ಆಗಸದಲ್ಲಿದ್ದರೂ ,ಭರವಸೆಯ ಬೆಳಕನ್ನು ಧ್ರುವತಾರೆಯಷ್ಟೇ ನೀಡಲು ಸಾಧ್ಯ. ಅದೇ ರೀತಿ ನಮ್ಮ ಸುತ್ತಲೂ ಇರುವ ಬಂಧು ಬಳಗದ ನೆಂಟರು ಎಂಬ ಸ್ವಾರ್ಥದ ಜೀವನದಲ್ಲಿ ಬೆಳಕು ತುಂಬಿ ಮುನ್ನಡೆಸುವವನು ಸರ್ವಶಕ್ತನಾದ ಭಗವಂತನೊಬ್ಬನೆ.ಹಾಗಾಗಿ ನಿನ್ನನ್ನೆ ನಂಬಿರುವೆ ಅನ್ನುತ್ತಾರೆ ಕವಿ.”ತೇನವಿನಾ ತೃಣಮಪಿ ನ ಚಲತಿ“ಅನ್ನುವಾಗ ಆತನೇ ತಾನೇ ನಮಗಾಧಾರ.

Kuvempu poems

ಮನಸ್ಸೆಂಬ ಮರ್ಕಟವು ಜೀವನದ ಅನೇಕ ಆಕರ್ಷಣೆ ಗಳತ್ತ ಹರಿದು ಅಲ್ಲೋಲಕಲ್ಲೋಲ ವಾಗುವ ಸಂಭವವೇ ಹೆಚ್ಚು.ಇದರಿಂದ ಗಮ್ಯವನ್ನು ತಲುಪದೇ ಅಲೆಯುವಂತಹ ಪಯಣವಾಗುತ್ತದೆ.ಹಾಗಾಗಿ ನಮ್ಮ ದೃಷ್ಟಿಯನ್ನು ಆ ಭಗವಂತನಲ್ಲಿ ಸ್ಥಿರವಾಗಿಸಿ ನೇರವಾಗಿ ನಡೆದರೆ ಸಫಲತೆ ಸಾಧ್ಯ.ಧೃಡಸಂಕಲ್ಪ ಹೊಂದಿದ ಗುರಿಯು ನಮ್ಮದಾಗಿದ್ದರೆ ಬದುಕು ಅರ್ಥಪೂರ್ಣ ವಾಗಿರುವುದು ಎಂಬುದನ್ನು ಕವಿ ತಿಳಿಸಿದ್ದಾರೆ.

ಆಗಸದಲ್ಲಿ ಮಿಂಚಿ ಮಿನುಗುವ ನಕ್ಷತ್ರ ಪುಂಜಗಳು ಅಧಿಕವಾಗಿವೆ.ಆದರೂ ಅವುಗಳ ಹೊಳಪು ಧ್ರುವತಾರೆ ಯ ಮುಂದೆ ಮಸುಕಾಗಿದೆ.ಚಂಚಲತೆಯಿಲ್ಲದ ಸ್ಥಿರಬೆಳಕು ನೀಡುವ ಧ್ರುವತಾರೆಯೆಂದರೆ ಅದು ಆ ಭಗವಂತ.ಈ ನಶ್ವರ ಜಗತ್ತಿನಲ್ಲಿ ಶಾಶ್ವತವೆಂಬುದು ಕೇವಲ ಭಗವಂತನ ಅಸ್ತಿತ್ವವೊಂದೇ.

ಎಲ್ಲವೂ ಅವನಿಚ್ಛೆ ಎಂಬುದು ಧೃಡವಾದ ನಂಬಿಕೆಯಾಗಿರುವಾಗ ಅದನ್ನು ಇನ್ನಷ್ಟು ಬಲಗೊಳಿಸುವ ಶಕ್ತಿಯನ್ನು ಈ ಕವನ ನೀಡಿದೆ.

ವಸುಧಾ ಶೆಣೈ

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv/status/1331264801553543168?s=19

https://twitter.com/SaakshaTv/status/1331264980511932416?s=19

 

Tags: Kuvempu poems
ShareTweetSendShare
Join us on:

Related Posts

Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

by admin
July 4, 2026
0

​• ಸುರಕ್ಷಿತ ಸಂಚಾರಕ್ಕಾಗಿ ನೂತನ ಗ್ಯಾಲರಿ ಉದ್ಘಾಟನೆ * ವಾಸ್ತವ ಟ್ರಾಫಿಕ್ ಪರಿಸ್ಥಿತಿಯ ಪ್ರಾಯೋಗಿಕ ಕಲಿಕೆ * 'ಟ್ರಾಫಿಕ್ ಡಿಸೈನ್ ಚಾಲೆಂಜ್'ನ ಸಬ್ಮಿಷನ್ ಮುಕ್ತಾಯ * ಮುಂದಿನ...

kylian mbappe

fifaworldcup-2026- ಮೈದಾನದಲ್ಲಿ ರಕ್ಕಸ.. ಬಡವರ ಪಾಲಿಗೆ ದೇವದೂತ.. ಫುಟ್‌ಬಾಲ್ ಜಗತ್ತಿನ ಭವಿಷ್ಯದ ಮಹಾರಾಜ..!

by admin
July 4, 2026
0

ಕಾಲಿಗೆ ಸ್ಟಡ್ಸ್ ಕಟ್ಕೊಂಡು.. ಗಂಟೆಗೆ 38 ಕಿಲೋಮೀಟರ್ ವೇಗದಲ್ಲಿ ಓಡಾಡಿಕೊಂಡು.. ಚೆಂಡನ್ನು ಡ್ರಿಬ್ಲಿಂಗ್ ಮಾಡುತ್ತಾ.. ಎದುರಾಳಿ ಆಟಗಾರರನ್ನು ವಂಚಿಸುವ ಮಾಯಾಕಾರ..! ಫುಟ್‍ಬಾಲ್ ಅಂಗಣದ ಹಸಿರು ಹುಲ್ಲಿನ ಅಂಗಣದ...

ಬಿಡದಿ ಟೌನ್‌ಶಿಪ್ ದಂಗಲ್:ನಿಮ್ಮಿಂದ ರಿಪ್ಲೈ ಬಂದಿಲ್ಲ- ಬಿಡದಿ ರೈತರ ಕಣ್ಣೀರು ಒರೆಸಲು ಬನ್ನಿ: ಡಿಕೆಶಿಗೆ ಎಚ್‌ಡಿಕೆ ಖಡಕ್ ಪತ್ರ, ಜೂನ್ 27ಕ್ಕೆ ಮಹಾ ಮುಖಾಮುಖಿ?

ಮತದಾರರ ಹುಂಡಿ ಲೂಟಿಗೆ ಕಾಂಗ್ರೆಸ್ ಸ್ಕೆಚ್ -ಅಧಿಕಾರಿಗಳು ಸರ್ಕಾರದ ಗುಲಾಮರಾಗಿದ್ದಾರೆ:ವಿಡಿಯೋ ಸಾಕ್ಷಿ ಸಮೇತ ಹೆಚ್ ಡಿ ಕುಮಾರಸ್ವಾಮಿ ಗುಡುಗು!

by Shwetha
July 4, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಈಗ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣಾ ಅಕ್ರಮ ಎಸಗುತ್ತಿದೆ ಎಂದು...

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

by Shwetha
July 4, 2026
0

ನವದೆಹಲಿ: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ವ್ಯವಸ್ಥಿತವಾಗಿ ಅಕ್ರಮಗಳು ನಡೆಯುತ್ತಿವೆ ಎಂದು ಗಂಭೀರವಾಗಿ ಆರೋಪಿಸಿರುವ ಇಂಡಿಯಾ ವಿರೋಧ ಪಕ್ಷಗಳ ಒಕ್ಕೂಟವು, ಈ ಆತಂಕಗಳಿಗೆ ನ್ಯಾಯಾಂಗವು ತಕ್ಷಣವೇ ಸ್ಪಂದಿಸದಿದ್ದರೆ ಭಾರತೀಯ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

₹2,000 ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಾಧ್ಯತೆ; ಶೀಘ್ರದಲ್ಲೇ ಮಾರ್ಗಸೂಚಿ

by Shwetha
July 4, 2026
0

ರಾಜ್ಯದ ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತಪಟ್ಟವರು ಹಾಗೂ ಆದಾಯ ತೆರಿಗೆ (IT) ಮತ್ತು GST ಪಾವತಿದಾರರ ಖಾತೆಗಳಿಗೆ ಸಹ ಹಣ ಜಮೆಯಾಗಿರುವ ಪ್ರಕರಣಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram