ನವದೆಹಲಿ: ಕೊರೊನಾ ಭೀತಿ ಹಿನ್ನೆಲೆ ದೇಶವನ್ನೇ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಮನೆಗಳಿಂದ ಯಾರೂ ಹೊರಬರದಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕೈ ಮುಗಿದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಜನರೆಲ್ಲಾ ಮನೆಗಳಿಂದ ಹೊರ ಬರದ ಪರಿಸ್ಥಿತಿಯಲ್ಲಿದ್ದು, ಮನೆಯಲ್ಲೇ ಕುಳಿತು ಸಮಯಕಳೆಯಲಾಗದೆ ಒದ್ದಾಡುತ್ತಿದ್ದಾರೆ. ಹೀಗಾಗಿ ಸರ್ಕಾರವೇ ಡಿಡಿಯಲ್ಲಿ ರಾಮಾಯಣ ಸೀರಿಯಲ್ ಅನ್ನ ರೀ ಟೆಲಿಕಾಸ್ಟ್ ಮಾಡಲು ನಿರ್ಧರಿಸಿದೆ. ಒಂದು ಕಾಲದಲ್ಲಿ ರಾಮಾಯಣ ಸೀರಿಯಲ್ ನೋಡೋಕೆ ಜನರು ಕಾದು ಕುಳಿತಿರುತ್ತಿದ್ದರು. ಯಾವ ಮನೆಯಲ್ಲಿ ಟಿವಿ ಇರ್ತಿತ್ತೋ ಅಲ್ಲಿ ಜಮಾಯಿಸುತ್ತಿದ್ರು.ಸೀರಿಯಲ್ ಪ್ರಸಾರವಾಗುತ್ತಿದ್ದಂತೆ ದೇಶವೇ ಸ್ತಬ್ಧವಾಗುತ್ತಿತ್ತು. ಜನರು ಮನೆಯಲ್ಲೇ ಕುಳಿತು ರಾಮಾಯಣವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಈ ಕಾರಣಕ್ಕಾಗಿ ಮತ್ತೆ
ಇದೀಗ ಆ ಸೀರಿಯಲ್ ಅನ್ನ ರೀ ಟೆಲಿಕಾಸ್ಟ್ ಮಾಡುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಾರ್ವಜನಿಕರ ಬೇಡಿಕೆಯ ಮೇರೆಗೆ, ನಾಳೆ, ಅಂದ್ರೆ ಮಾರ್ಚ್ 28ರ ಶನಿವಾರದಿಂದ ಡಿಡಿ ನ್ಯಾಷನಲ್ನಲ್ಲಿ, ಬೆಳಿಗ್ಗೆ 9 ರಿಂದ-10 ರವರೆಗೆ ಒಂದು ಎಪಿಸೋಡ್ ಮತ್ತು ರಾತ್ರಿ 9 ರಿಂದ 10 ರವರೆಗೆ ಮತ್ತೊಂದು ಎಪಿಸೋಡ್ ಪ್ರಸಾರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ರೈತರಿಗೆ ಬಂಪರ್ ಸುದ್ದಿ ಪಹಣಿಯಲ್ಲಿನ ಹೆಸರು ತಿದ್ದುಪಡಿ ಈಗ ಮತ್ತಷ್ಟು ಸುಲಭ ಕಚೇರಿಗಳಿಗೆ ಅಲೆಯುವ ಹಾಗಿಲ್ಲ!ಇಲ್ಲಿದೆ ಸರಳ ಮಾರ್ಗ
ಬೆಂಗಳೂರು: ರಾಜ್ಯದ ಸಮಸ್ತ ರೈತ ಬಾಂಧವರಿಗೆ ಕಂದಾಯ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ರೈತರು ತಮ್ಮ ಜಮೀನಿನ ಪಹಣಿ ಅಥವಾ ಆರ್ಟಿಸಿಯಲ್ಲಿ (RTC) ಹೆಸರು ತಪ್ಪಾಗಿದ್ದರೆ,...








