ಮೈಸೂರಲ್ಲಿ ಕುಮಾರಸ್ವಾಮಿ ವಿರುದ್ಧ ಟಗರು ಗುಟುರು
ಮೈಸೂರು : ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಕುಮಾರಸ್ವಾಮಿ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ನಾನು ಸರ್ಕಾರ ಬಿಳಿಸಿದೆ ಅಂತಾನೆ. ನಾನು ಸರ್ಕಾರ ಬಿಳಿಸೋದಾಗಿದ್ರೆ ಕುಮಾರಸ್ವಾಮಿಯನ್ನ ಸಿಎಂ ಆಗೋದಕ್ಕೆ ಬಿಡ್ತಾ ಇರಲಿಲ್ಲ.
80 ಸೀಟು ಗೆದ್ದಿದೆ ನಾವು ಜೆಡಿಎಸ್ಗೆ ಸಪೋರ್ಟ್ ಮಾಡೋಲ್ಲ ಅಂದ್ರಿದ್ರೆ ಕುಮಾರಸ್ವಾಮಿ ಸಿಎಂ ಆಗ್ತಿದ್ರಾ ಎಂದು ಪ್ರಶ್ನಿಸಿದರು..
ಇದನ್ನೂ ಓದಿ : ಚಾಮುಂಡೇಶ್ವರಿಯಲ್ಲಿ ಜನರ ಎದುರು ನೋವು ತೋಡಿಕೊಂಡ ಸಿದ್ದರಾಮಯ್ಯ
ಇನ್ನು ನಾನು ಮೈತ್ರಿಗೆ ಒಪ್ಪದೆ ಕುಳಿತಿದ್ರೆ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಆಗ್ತಿತ್ತಾ.? ಇವರು ಅಧಿಕಾರ ಕಳೆದುಕೊಂಡಿದ್ದು ನನ್ನಿಂದಲ್ಲ.
ಬದಲಿಗೆ ವೆಸ್ಟ್ ಎಂಡ್ನಲ್ಲಿ ಕುಳಿತು ಅಧಿಕಾರ ಮಾಡ್ತಿದ್ದಕ್ಕೆ ಅಧಿಕಾರ ಕಳೆದುಕೊಂಡ್ರು ಎಂದು ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್ ನೀಡಿದರು.
ಶಾಸಕರ ಕೈಗೆ ಸಿಕ್ತಾರ ಇರಲಿಲ್ಲ. ಸಚಿವರ ಕೈಗೆ ಸಿಗಲಿಲ್ಲ. ಯಾವ ಪತ್ರ ಕೊಟ್ಟರು ಒಂದಕ್ಷರ ಬರೆಯುತ್ತಿರಲಿಲ್ಲ. ಇದರಿಂದ ಬೇಸರಗೊಂಡು ಎಂಎಲ್ಎಗಳು ಹೊರಗೆ ಹೋದ್ರು. .
ಇವರು ಎಂಎಲ್ಎಗಳ ಕೈಗೆ ಸಿಕ್ಕಿದ್ದಿದ್ರೆ 14 ಎಂಎಲ್ಎಗಳು ನಮ್ಮಲ್ಲೆ ಇರ್ತಿದ್ರು. ಸರ್ಕಾರವು ಬಿಳ್ತಾ ಇರಲಿಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel