ಕೋಲಾರ : ಕೃಷಿ ಮಸೂದೆ ತಿದ್ದುಪಡಿ ಮೂಲಕ ರೈತರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಸಂಸದ ಮುನಿಸ್ವಾಮಿ ಮೋದಿ ಅವರನ್ನು ಹಾಡಿಹೊಗಳಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್.ವಡ್ಡಹಳ್ಳಿಯಲ್ಲಿ ಆಯೋಜಿಸಿದ್ದ “ರೈತರೊಂದಿಗೊಂದು ದಿನ” ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರೈತರೊಂದಿಗೊಂದು ದಿನ ಈ ಕಾರ್ಯಕ್ರಮ ಕೋಲಾರದ ಇತಿಹಾಸದಲ್ಲಿ ಉಳಿಯುವಂತಹ ಕಾರ್ಯಕ್ರಮವಾಗಿದೆ.
ಜನಪ್ರತಿನಿಧಿಗಳಿಗೆ ಬಲವಾದ ಇಚ್ಛೆ ಬೇಕು. ಇದನ್ನು ರೈತರಿಗಾಗಿ ಹಲವು ಉಪಯೋಗಿ ಕಾರ್ಯಕ್ರಮ-ಯೋಜನೆಗಳನ್ನು ರೂಪಿಸುವ ಮೂಲಕ ಬಿ.ಸಿ.ಪಾಟೀಲರು ಯಶಸ್ವಿಗೊಳಿಸಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಒಬ್ಬ ಯಶಸ್ವಿ ಮಾದರಿ ಸಚಿವರಾಗಿದ್ದಾರೆ.
ರಾಜ್ಯ ಪ್ರವಾಸ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಪಣತೊಟ್ಟು ಕೃಷಿ ಸಚಿವ ರೈತ ಸಚಿವನಾಗಿ ಶ್ರಮವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕೋಲಾರ ಜಿಲ್ಲೆಯಲ್ಲಿ ರೈತರೊಂದಿಗೊಂದು ದಿನ ರೈತರಲ್ಲಿ ಹಬ್ಬದ ಉತ್ಸಾಹ ಮೂಡಿಸಿದೆ. ರೈತರಲ್ಲಿಯ ಈ ಹರ್ಷಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲರು ಕಾರಣರಾಗಿದ್ದಾರೆ. ಬಿ.ಸಿ.ಪಾಟೀಲರು ರಾಜ್ಯದಲ್ಲೆಡೆ ಕೋಲಾರ ಜಿಲ್ಲೆಯ ಮಾದರಿಯನ್ನು ಶ್ಲಾಘಿಸುತ್ತಿದ್ದಾರೆ.
ಇಸ್ರೇಲ್ಗೆ ಕೃಷಿಯ ಬದಲಿಗೆ ನಮ್ಮದೇ ಕೋಲಾರದ ಮಾದರಿ ಸಮಗ್ರ ಕೃಷಿಯನ್ನೇ ಉದಾಹರಣೆ ನೀಡುತ್ತಾರೆ. ಕೋಲಾರದ ರೈತರು ಬಹಳ ಧೈರ್ಯಶಾಲಿಗಳು ಆತ್ಮಸ್ಥೈರಿಗಳು.
ಸಮಗ್ರ ಕೃಷಿಯಲ್ಲಿ ಸಾಧನೆ ಮಾಡುತ್ತಿರುವ ಈ ಕೋಲಾರದ ಕೃಷಿ ಮಾರುಕಟ್ಟೆ ಏಷ್ಯಾ ಖಂಡದಲ್ಲಿಯೇ ಎರಡನೇ ದೊಡ್ಡ ಮಾರುಕಟ್ಟೆ ಎಂಬ ಹೆಸರು ಪಡೆದಿದೆ ಎಂದರು.
ವೀಕೆಂಡ್ ಪಬ್ ಬಾರ್ ಸಂಸ್ಕೃತಿ ಬಿಟ್ಟು ವೀಕೆಂಡ್ ಅಗ್ರಿಕಲ್ಚರ್ ಸಂಸ್ಕೃತಿ ಬೆಳೆಯಲಿ : ಬಿ.ಸಿ.ಪಾಟೀಲ್ ಕರೆ
ಹಿಂದೆ ರೈತರಿಗೆ ಸೌಲಭ್ಯಗಳು ಸಿಗಬೇಕಾದರೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು. ಅದನ್ನು ತೊಡೆದುಹಾಕುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯಬಿಜೆಪಿ ಸರ್ಕಾರಗಳು ಮಾಡಿಕೊಡುತ್ತಿವೆ.
ಪ್ರಧಾನಿ ಮೋದಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ರಾಜ್ಯದ ರೈತರಿಗೆ ಪಿಎಂ ಸಿಎಂ ಕಿಸಾನ್ ಹಣ ಕಂತು ಯಶಸ್ವಿಪೂರ್ಣವಾಗಿ ಬಿಡುಗಡೆಯಾಗುವಂತೆ ಮಾಡಿದ್ದಾರೆ.
ಕೃಷಿ ಮಸೂದೆ ತಿದ್ದುಪಡಿ ಮೂಲಕ ರೈತರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.
ರೈತ ಉತ್ಪಾದಕ ಸಂಘಗಳು ರೈತರಿಗೆ ನೆರವು ಮೂಡಿಸಿದ್ದು,ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಪುಟದ ಸದಸ್ಯರೆಲ್ಲ ರೈತರ ಬೆನ್ನಿಗೆ ನಿಂತಿದ್ದಾರೆ ಎಂದು ಶ್ಲಾಘಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









