ವಿಜಯಪುರ: ನಾಳೆ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್ಗೆ ಸೇರಿಸಿಕೊಳ್ಳುವ ಶಾಸಕರನ್ನು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಫೋನ್ ಮಾಡಿ ಕರೆಸಿಕೊಳ್ತಿದ್ದಾರೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಈ ಬಗ್ಗೆ ತಮ್ಮದೇ ಆದ ವ್ಯಂಗ್ಯಭರಿತ ಧಾಟಿಯಲ್ಲಿ ಅಸಮಾಧಾನ ಹೊರಹಾಕಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, `ಬೆಂಗ್ಳೂರಾಗ ನಮ್ದೇನೈತ್ರಿ ಕೆಲಸ, ನನ್ ಮೊಬೈಲ್ ಕರೆನ್ಸಿ ಖಾಲಿಯಾಗೈತಿ, ಇನ್ ಕಮಿಂಗೂ ಇಲ್ಲ, ಔಟ್ ಗೋಯಿಂಗ್ ಇಲ್ಲ’ ಎನ್ನುವ ಮೂಲಕ ಮುಖ್ಯಮಂತ್ರಿಗಳಿಂದ ಕರೆ ಬಂದಿಲ್ಲ ಅನ್ನೋದನ್ನ ತಮ್ಮದೇ ಧಾಟಿಯಲ್ಲಿ ವ್ಯಂಗ್ಯ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದ ಹಿನ್ನೆಲೆ ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಡಳಿತ ವೈಖರಿ ಹಾಗೂ ನಾಯಕತ್ವ ಬದಲಾವಣೆಯ ಬಾಂಬ್ ಸಿಡಿಸುತ್ತಾ ಬಂದಿರುವ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದಿಲ್ಲ ಎಂಬುದನ್ನು ಮೊಬೈಲ್ ಕರೆನ್ಸಿ ಖಾಲಿಯಾಗಿದೆ ಎನ್ನುವ ಮೂಲಕ ವ್ಯಂಗ್ಯಭರಿತ ಮಾತುಗಳಲ್ಲೇ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಸಂಕ್ರಮಣದ ಸಿದ್ದೇಶ್ವರ ಜಾತ್ರೆ ಇದೆ. ನಾನು ಆ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ನನಗೆ ಬೆಂಗಳೂರಿಗೆ ಬರುವಂತೆ ಕರೆಯೂ ಬಂದಿಲ್ಲ. ಹೋಗುವುದೂ ಇಲ್ಲ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ನನಗೆ ಆಸಕ್ತಿಯೂ ಇಲ್ಲ. ಶಾಸಕನಾಗಿ ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತೇನೆ ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಯತ್ನಾಳ್ ಸಂಧಾನ ಯತ್ನ..
ವಿಜಯಪುರದಲ್ಲಿ ಬಿಜೆಪಿ ಜನಸೇವಕ ಸಮಾವೇಶ ಆಯೋಜಿಸಲಾಗಿತ್ತು. ಸಭೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ, ವಸತಿ ಸಚಿವ ವಿ.ಸೋಮಣ್ಣ ಜತೆ ಯತ್ನಾಳ್ ಕೂಡ ಭಾಗಿಯಾಗಿದ್ದರು. ಸೋಮಣ್ಣ, ಡಿಸಿಎಂ ಕಾರಜೋಳ ಪಕ್ಕದಲ್ಲಿ ಕುಳಿತಿದ್ದ ಯತ್ನಾಳ್ ಜತೆ ಸಚಿವ ಸೋಮಣ್ಣ ಸಂಧಾನಕ್ಕೆ ಯತ್ನಿಸಿದ್ದಾರೆ.
ಡಿಸಿಎಂ ಕಾರಜೋಳ ಭಾಷಣ ಮಾಡಲು ಮೈಕ್ ಬಳಿ ತೆರಳುತ್ತಿದ್ದಂತೆ ಯತ್ನಾಳ್ ಪಕ್ಕ ಬಂದು ಕುಳಿತ ಸೋಮಣ್ಣ, ಕೆಲಕಾಲ ಚರ್ಚೆ ನಡೆಸಿದರು. ತಮ್ಮ ಭಾಷಣದಲ್ಲೂ ಸೋಮಣ್ಣ ಯತ್ನಾಳ್ರನ್ನು ಫೈರ್ ಬ್ರ್ಯಾಂಡ್ ಎಂದು ಹಾಡಿಹೊಗಳಿದರು.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಆದರೆ, ಅಕ್ಕ-ಪಕ್ಕದಲ್ಲಿದ್ದರೂ ಯತ್ನಾಳ್ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಒಬ್ಬರಿಗೊಬ್ಬರೂ ಮುಖವನ್ನೂ ನೋಡಿಕೊಳ್ಳಲಿಲ್ಲ. ಯತ್ನಾಳ್ ಮಾತನಾಡುವುದರೊಳಗೆ ಡಿಸಿಎಂ ಕಾರಜೋಳ, ಸೋಮಣ್ಣ ಸಭೆಯಿಂದ ನಿರ್ಗಮಿಸಿದರು. ಹೀಗಾಗಿ ಯತ್ನಾಳ್ ಕೂಡ ಭಾಷಣ ಮಾಡದ ಹಿನ್ನೆಲೆಯಲ್ಲಿ ಜನಸೇವಕ ಸಮಾವೇಶವನ್ನು ತರಾತುರಿಯಲ್ಲಿ ಮೊಟಕುಗೊಳಿಸಲಾಯಿತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel