ಭಾರತದ ಹಣೆಬರಹ ಯಾವ ಷಡ್ಯಂತ್ರದಿಂದಲೂ ನಿರ್ಧಾರವಾಗಲ್ಲ – ಅಮಿತ್ ಶಾ
ನವದೆಹಲಿ: ದೆಹಲಿ ಸುತ್ತಮುತ್ತ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿರುವ ರೈತರ ಹೋರಾಟಕ್ಕೆ ಇದೀಗ ಖ್ಯಾತ ಪಾಪ್ ಸಿಂಗರ್ ಮತ್ತು ಹಾಲಿವುಡ್ ನ ನಟಿ ರಿಹಾನಾ ಸೇರಿದಂತೆ ಅನೇಕರು ಬೆಂಬಲ ಸೂಚಿಸುತ್ತಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಲವ್ – ಸೆಕ್ಸ್- ದೋಖಾ : 2 ಬಾರಿ ಅಬಾರ್ಷನ್ ಬಳಿಕ ಯುವತಿಗೆ ಕೈಕೊಟ್ಟ ಲೆಕ್ಚರರ್ ಮಗ..!
ಯಾವ ಷಡ್ಯಂತ್ರವೂ ಭಾರತದ ಏಕತೆಯನ್ನು ಅಲುಗಾಡಿಸಲಾಗದು, ಭಾರತ ಉನ್ನತ ಸ್ಥಾನಕ್ಕೆ ಏರುವುದನ್ನು ಯಾವ ಷಡ್ಯಂತ್ರದಿಂದಲೂ ತಡೆಯಲಾಗದು. ಯಾವ ಷಡ್ಯಂತ್ರವೂ ಭಾರತದ ಹಣೆಬರಹವನ್ನು ನಿರ್ಧರಿಸಲು ಸಾಧ್ಯವಿಲ್ಲ. ಅಭಿವೃದ್ಧಿಯೊಂದೇ ಭಾರತದ ಹಣೆಬರಹವನ್ನು ನಿರ್ಧರಿಸಲಿದೆ. ಭಾರತ ಒಂದಾಗಿದೆ, ಹಾಗೂ ಒಂದಾಗಿಯೇ ಅಭಿವೃದ್ಧಿಯನ್ನು ಸಾಧಿಸಲಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಕಿಡ್ನಾಪ್ ಆಗಿದ್ದ ವ್ಯಕ್ತಿಗೆ ಕ್ವಾರಂಟೈನ್ ನಿಯಮ ಉಲ್ಲಂಘನೆಯಡಿ ದಂಡ..!
ರೈತರ ಹೋರಾಟ ಬೆಂಬಲಿಸಿ ವಿದೇಶಿ ಸೆಲೆಬ್ರಿಟಿಗಳಾದ ರಿಹಾನಾ, ಮಿಯಾ ಖಲೀಫಾ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥಂಬರ್ಗ್ ಕೂಡಾ ಟ್ವೀಟ್ ಮಾಡಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಕೂಡ ಪ್ರತಿಕ್ರಿಯೆಯನ್ನು ಕೂಡಾ ನೀಡಿತ್ತು. ಈ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ ಇದರ ಬೆನ್ನಲ್ಲೇ ಈಗ ಅಮಿತ್ ಶಾ ಕೂಡ ಟ್ವೀಟ್ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel