ಕುಶಾಲನಗರದಲ್ಲಿದ್ದಾನೆ ತೆರೆಮರೆಯ ಬಾಡಿಬಿಲ್ಡರ್ : ಆತ್ಮಸ್ಥೈರ್ಯವೇ ಈ ಸಾಧಕ ಆಸ್ತಿ
ಕೊಡಗು : ದುಡಿಯೋದು ತಿಂಗಳಿಗೆ ಪುಡಿಗಾಸು, ದಿನದ ಖರ್ಚು ಅಗತ್ಯ ಮೀರಿದ್ದು, ನಿರಂತರ ಶ್ರಮ, ಛಲ. ಯಾರಿಂದಲೂ ಸಹಾಯ ಕೇಳದ ಒಬ್ಬ ಬಾಡಿಬಿಲ್ಡರ್ ಇದೀಗ ಕೊಡಗು ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ.
ಹೌದು..! ಸದ್ಯ ಇಡೀ ಜಿಲ್ಲೆಯೇ ಹೆಮ್ಮೆ ಪಡುವಂತೆ ಮಾಡಿರುವ ಇವರ ಹೆಸರು ಅಪ್ಪಣ್ಣ, ವಯಸ್ಸು 25. ಕಲಿತ ವಿದ್ಯೆಗೆ ತಕ್ಕಂತೆ ಕೆಲಸ ಸಿಗದಿದ್ದರೂ ಎನಾದರೂ ಸಾಧಿಸಲೇಬೇಕೆಂಬ ಹಠದೊಂದಿಗೆ ಇದೀಗ ಬಾಡಿ ಬಿಲ್ಡಿಂಗ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಹೆಚ್.ಡಿ ಕೋಟೆಯಲ್ಲಿ ಸುಮಾರೂ 50 ಬಾಡಿಬಿಲ್ಡರ್ ಗಳ ಪೈಕಿ ಅಪ್ಪಣ್ಣ ಎತ್ತರ ವಿಭಾಗದ ದೇಹಧಾಡ್ರ್ಯ ಸ್ಪರ್ಧೆಯಲ್ಲಿ 5.4 ಎತ್ತರ ಮತ್ತು ಉತ್ತಮ ಫಿಟ್ನೆಸ್ ಇರುವ ಇವರು ಮೊದಲ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅಪ್ಪಣ್ಣ ಅವರ ಈ ಸಾಧನೆಯ ಹಾದಿ, ಎಲ್ಲರಿಗೂ ಸ್ಫೋರ್ತಿದಾಯಕ. ಛಲ, ಪರಿಶ್ರಮ, ಗೆದ್ದೆ ಗೆಲ್ಲಬೇಕು ಎಂಬ ಹಠ, ಅಪ್ಪಣ್ಣ ಅವ್ರ ಸಾಧನೆಯ ಗುಟ್ಟು.
ಅಂದಹಾಗೆ ಕುಶಾಲನಗರ ಪಟ್ಟಣ ನಿವಾಸಿಯಾಗಿರುವ ವಿಶ್ವನಾಥ್ ಮತ್ತು ಲಕ್ಷಿ ದಂಪತಿಗಳ ಎರಡು ಸಹೋದರಿ, ಒಬ್ಬ ಸಯಹೋದರನಿರುವ ತುಂಬು ಕುಟುಂಬ. ಎರಡು ಪುಟಾಣಿ ಮಕ್ಕಳ ತಂದೆಯಾದರೂ ತನ್ನ ಹಠ,ಗುರಿ ಮುಟ್ಟಲೇ ಬೇಕೆಂದು ಕೆಲಸದ ನಡುವೆಯೂ ದಿನಕ್ಕೆ 4-5 ಗಂಟೆ ವರ್ಕೌಟ್ ಮಾಡುತ್ತಾರೆ. ನ್ಯೂ ಬಾಡಿ ಫಿಟ್ನೆಸ್ ಜಿಮ್ ನ ತರಬೇತುದಾರರಾದ ಪವನ್ ಎಂಬುವವರ ಗರಡಿಯಲ್ಲಿ ಅರಳಿದ ಅಪ್ಪಣ್ಣ ತನ್ನ 25 ವರ್ಷದಲ್ಲೇ ಸಾಧನೆ ಮಾಡಿದ್ದಾರೆ.
ದೇಹದಾಢ್ರ್ಯತೆ ಇತರೆ ಕ್ರೀಡೆಗಳಲಂತಲ್ಲ, ಸಾಕಷ್ಟು ತಾಳ್ಮೆಯ ಅಗತ್ಯಬೇಕು. ಹಾಗೆಯೇ ಅಗತ್ಯ ಮೀರಿ ಖರ್ಚು ಇರುತ್ತದೆ. ನಾಲ್ಕೈದು ವರ್ಷದ ಹಿಂದೆ ಸಹಜ ಫಿಟ್ ನೆಸ್ ಮಾಡಲು ಜಿಮ್ ಸೇರಿದ ಅಪ್ಪಣ್ಣರಿಗೆ ಬಾಡಿ ಬಿಲ್ಡಿಂಗ್ ಬಗ್ಗೆ ಆಸಕ್ತಿ ಹೆಚ್ಚಾಗುತ್ತಲೇ ಹೋಗಿದೆ. ಮೊದಲು ಕೇವಲ 52 ಕೆ.ಜಿ ತೂಕವಿದ್ದ ಇವರು ಸದ್ಯಕ್ಕೆ 70 ಕೆಜಿವರೆಗೆ ತೂಕದ ಜೊತೆ ಸಧೃಡ ಮೈಕಟ್ಟು ಹೊಂದಿದ್ದಾರೆ. ಇವರಿಗೆ ತಿಂಗಳಿಗೆ 15,000ದಷ್ಟು ಸಂಬಳ ಬಂದರೂ ಕೋಳಿ ಮಾಂಸ, ಮೊಟ್ಟೆ, ಹಣ್ಣು, ತರಕಾರಿ ಅಂತಾ ದಿನಕ್ಕೆ 600-700 ರುಪಾಯಿನಷ್ಟು ಖರ್ಚು ಇರುತ್ತೆ. ಆದ್ರೂ ಯಾರಿಂದಲೂ ಪ್ರಾಯೋಜಕತ್ವ ಪಡೆಯದೆ, ಕುಟುಂಬ ಮತ್ತು ದೇಹ ರಚನೆ ಬಗ್ಗೆ ಕಾಳಜಿ ವಹಿಸಿಕೊಂಡಿದ್ದಾರೆ.
5.4 ನಿಂದ ಕ್ಯಾಟಗರಿ ಆರಂಭವಾಗಲಿರುವ ಎತ್ತರದ ಸ್ಪರ್ಧೆಯಲ್ಲಿ ಕಳೆದ ಬಾರಿ ನಾಲ್ಕನೇ ಸ್ಥಾನದಲ್ಲಿದ್ದ ಅಪ್ಪಣ್ಣ ಈ ಭಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದೇ ಜಿಮ್ ನಿಂದ ಪಾಲ್ಗೊಂಡಿದ್ದ ಮತ್ತೊಂದು ಬಾಡಿ ಬಿಲ್ಡರ್ ಇನ್ನೊಂದು ವಿಭಾಗದಲ್ಲಿ ಸಹಾ ಪ್ರಶಸ್ತಿ ಗಳಿಸಿದ್ದಾರೆ.
ಇನ್ನು ಬಾಡಿ ಬಿಲ್ಡಿಂಗ್ ವಯಸ್ಸಾದಂತೆಲ್ಲಾ ತರಬೇತಿಗೆ(ವರ್ಕೌಟ್) ಗೆ ಸ್ಪಂಧಿಸುವುದಿಲ್ಲ, ಅಪ್ಪಣ್ಣರ ವಯಸ್ಸು ಚಿಕ್ಕದಾಗಿದ್ದು ಸಾಧನೆಯ ಹಾದಿಯಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ಕುಶಾಲನಗರದಲ್ಲಿ ಇಂತಹದೇ ಸ್ಪರ್ಧೆಗಳು ನಡೆಯುತ್ತಿದ್ದು, ರಾಜ್ಯ ರಾಷ್ಟ್ರದ ಮಟ್ಟದವರೆಗೂ ಆಯ್ಕೆ, ಉತ್ತಮ ತೀರ್ಪುದಾರು ಇರುತ್ತಿದ್ದರು. ಕೊರೊನಾ ನಂತರ ಕ್ರೀಡೆಗೆ ಬೆಲೆ ಇಲ್ಲದಂತಾಗಿದೆ. ಯಾವುದೇ ಪ್ರಯೋಜಕತ್ವ ಇಲ್ಲದಿದ್ದರೂ ಸಾಧಿಸಬೇಕೆಂಬ ಛಲವಿರುವ ಇಂತಹ ಪ್ರತಿಭೆಗಳಿಗೆ ಖಂಡಿತವಾಗಿವೂ ಪ್ರೋತ್ಸಾಹದ ಅವಶ್ಯಕತೆ ಇದೆ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel