ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯಂತೆ ದೇಶದ ಜನರೆಲ್ಲರೂ 9 ಗಂಟೆಯಿಂದ ಸುಮಾರು ಒಂಬತ್ತು ನಿಮಿಷಗಳ ಕಾಲ ದೀಪ, ಹಣತೆ, ಕ್ಯಾಂಡಲ್ ಗಳನ್ನು ಹಚ್ಚಿದ್ದಾರೆ. ಮೋದಿ ಕರೆಯಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ ದೇವೇಗೌಡರು ಕೂಡ ಹಣತೆ ಬೆಳಗಿದ್ದಾರೆ. ಸರಿಯಾಗಿ 9 ಗಂಟೆಗೆ ತಮ್ಮ ನಿವಾಸದಲ್ಲಿ ಎಲ್ಲಾ ಲೈಟ್ಸ್ ಗಳನ್ನು ಆಫ್ ಮಾಡಿದ ದೊಡ್ಡಗೌಡರು, ಸುಮಾರು ಒಂಬತ್ತು ನಿಮಿಷಗಳ ಏಕತೆಯ ದೀಪ ಬೆಳಗಿದ್ದಾರೆ.
ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಇರಾನ್–ಅಮೆರಿಕ ಹಾಗೂ ಇಸ್ರೇಲ್ ನಡುವಿನ ಯುದ್ಧದ...







