ADVERTISEMENT
Monday, August 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಕೊಟ್ಟಿದ್ದೀರಾ… ಹ್ಯಾಪಿ ಬರ್ತ್ ಡೇ ಸಚಿನ್

admin by admin
April 24, 2021
in Newsbeat, Sports, ಕ್ರೀಡೆ
sachin tendulkar saakshatv team india
Share on FacebookShare on TwitterShare on WhatsappShare on Telegram

ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಕೊಟ್ಟಿದ್ದೀರಾ… ಹ್ಯಾಪಿ ಬರ್ತ್ ಡೇ ಸಚಿನ್

sachin tendulkar saakshatv team indiaಸಚಿನ್ ತೆಂಡುಲ್ಕರ್ ಅವರ 48ನೇ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಶುಭ ಹಾರೈಸಿಸಿದ್ದಾರೆ.
1973, ಏಪ್ರಿಲ್ 24ರಂದು ಮುಂಬೈನ ಮಧ್ಯಮ ಕುಟುಂಬದಲ್ಲಿ ಜನಿಸಿರುವ ಸಚಿನ್ ತೆಂಡುಲ್ಕರ್ ಸಾಹಿತಿ ರಮೇಶ್ ತೆಂಡುಲ್ಕರ್ ಅವರ ಮಗ. ಸಾಹಿತಿಯ ಮಗ ಕ್ರಿಕೆಟ್ ಆಟಗಾರನಾಗಿ ರೂಪುಗೊಳ್ಳಲು ಕಾರಣ ಅಣ್ಣ ಅಜಿತ್ ತೆಂಡುಲ್ಕರ್.
ತನ್ನ ತಮ್ಮನನ್ನು ಕ್ರಿಕೆಟಿಗನಾಗಿ ರೂಪಿಸಲು ಅಣ್ಣ ಅಜಿತ್ ತೆಂಡುಲ್ಕರ್ ಪಟ್ಟ ಶ್ರಮ ಅಷ್ಟಿಷ್ಟಲ್ಲ. ತರಬೇತುದಾರ ರಮಕಾಂತ್ ಅರ್ಚೆಕರ್ ಗರಡಿಯಲ್ಲಿ ಪಳಗಿದ್ದ ಸಚಿನ್ ತೆಂಡುಲ್ಕರ್ 1989ರಲ್ಲಿ ಭಾರತ ತಂಡವನ್ನು ಪ್ರವೇಶ ಮಾಡುತ್ತಾರೆ. ಅಲ್ಲಿಂದ ಸುಮಾರು ಅಂದ್ರೆ 2013ರವರೆಗೆ ನಡೆದಿದ್ದು ಸಚಿನ್ ಪರ್ವ.
ಭಾರತ ಕ್ರಿಕೆಟ್ ತಂಡಕ್ಕೆ ಕಿರಿಯ ಆಟಗಾರನಾಗಿ ಪ್ರವೇಶ ಪಡೆದು 2013ರಲ್ಲಿ ನಿವೃತ್ತಿಯಾದಾಗ ಸಚಿನ್ ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಹಿರಿಯಣ್ಣ. ಅಭಿಮಾನಿಗಳ ಪಾಲಿಗೆ ಕ್ರಿಕೆಟ್ ದೇವ್ರು. ವಿಶ್ವ ಕ್ರಿಕೆಟ್ ನ ಮಾಸ್ಟರ್ ಬ್ಲ್ಯಾಸ್ಟರ್. ಕ್ರಿಕೆಟ್ ಆಟಕ್ಕೆ ಗುರು. ಅಷ್ಟೇ ಅಲ್ಲ, ದಾಖಲೆಗಳ ಒಡೆಯ. ನೂರು ಶತಕ ಹಾಗೂ 34 ಸಾವಿರಕ್ಕೂ ಅಧಿಕ ರನ್ ದಾಖಲಿಸಿರುವ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ನ ಎವರ್ ಗ್ರೀನ್ ಹೀರೋ.
sachin tendulkar saakshatv team indiaಇದೀಗ 48ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಚಿನ್ ತೆಂಡುಲ್ಕರ್ ಗೆ ಅಭಿಮಾನಿಗಳು ಮತ್ತು ಸ್ನೇಹಿತರು ಶುಭಾಶಯ ಹೇಳಿದ್ದಾರೆ.
90ರ ದಶಕದಲ್ಲಿ ಮನೆ ಮನೆಯಲ್ಲೂ ಸಚಿನ್ ಹೆಸರು ರಾರಾಜಿಸುತ್ತಿತ್ತು. ಕ್ರಿಕೆಟ್ ಮೈದಾನದಲ್ಲಿ ಸಚಿನ್ ಸಚಿನ್ ಸಚಿನ್ ಅನ್ನೋ ಮೂರಕ್ಷರ ಧ್ವನಿ ಮೊಳಗುತ್ತಿತ್ತು. ಜಾಹಿರಾತು ಕಂಪೆನಿಗಳ ರಾಯಭಾರಿಯಾಗಿರುವ ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್ ಗೆ ದುಡ್ಡಿನ ಮುಖವನ್ನು ತೋರಿಸಿದ್ದ ಕ್ರಿಕೆಟಿಗ.
ತನ್ನ ಅದ್ಭುತ ಪ್ರತಿಭೆ, ಕ್ಲಾಸ್ ಮತ್ತು ಮಾಸ್ ಆಟದ ಮೂಲಕವೇ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದ ಸಚಿನ್ ಅವರನ್ನು ಕೆಲವರು ಸ್ವಾರ್ಥಿ ಅಂತ ಕರೆದ್ರು. ಆದ್ರೂ ತಲೆಕೆಡಿಸಿಕೊಳ್ಳದ ಸಚಿನ್ ತನಗೆ ಇಷ್ಟ ಬಂದಷ್ಟು ದಿನ ಕ್ರಿಕೆಟ್ ಆಡುತ್ತ 2013ರಲ್ಲಿ ತನ್ನ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು.
ಕ್ರಿಕೆಟ್ ನಿವೃತ್ತಿಯ ನಂತರವೂ ಸಚಿನ್ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಮಾತ್ರ ಬಿಟ್ಟುಕೊಡಲಿಲ್ಲ. ಈಗಲೂ ಕ್ರಿಕೆಟ್ ಆಟದ ಜೊತೆಗೆ ನಂಟು ಹೊಂದಿದ್ದಾರೆ. ಇತ್ತಿಚೆಗೆ ಕೋವಿಡ್ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ವಿಶ್ರಾಂತಿಯಲ್ಲಿದ್ದಾರೆ.

Related posts

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ

August 31, 2026
ಕುಮಾರಣ್ಣನಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು: ಕೇಸರಿ ಮಿತ್ರರ ಅಕ್ರಮಗಳ ಬಗ್ಗೆ ಕುಮಾರಣ್ಣನ ಮೌನವೇಕೆ? ಬಿಜೆಪಿ ಕಚೇರಿಯಲ್ಲೇ ಇದೆ ಎಲ್ಲಾ ಉತ್ತರ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಕುಮಾರಣ್ಣನಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು: ಕೇಸರಿ ಮಿತ್ರರ ಅಕ್ರಮಗಳ ಬಗ್ಗೆ ಕುಮಾರಣ್ಣನ ಮೌನವೇಕೆ? ಬಿಜೆಪಿ ಕಚೇರಿಯಲ್ಲೇ ಇದೆ ಎಲ್ಲಾ ಉತ್ತರ ಎಂದ ಸಚಿವ ಪ್ರಿಯಾಂಕ್ ಖರ್ಗೆ

August 31, 2026

Happy birthday sachin – You gave us a lifetime of memories

sachin tendulkar saakshatv team indiaಒಂದು ಕಾಲದಲ್ಲಿ ಭಾರತ ತಂಡ ಆಡುತ್ತಿದ್ರೆ ಕ್ರಿಕೆಟ್ ಪ್ರೇಮಿಗಳು ಕೇಳುತ್ತಿದ್ದದ್ದು ಎರಡು ಪ್ರಶ್ನೆಗಳನ್ನು ಮಾತ್ರ. ಸಚಿನ್ ಸ್ಕೋರು ಎಷ್ಟು.. ಭಾರತ ತಂಡದ ರನ್ ಎಷ್ಟು.. ಅಷ್ಟೇ. ಯಾಕಂದ್ರೆ 90ರ ದಶಕದಲ್ಲಿ ಭಾರತ ಕ್ರಿಕೆಟ್ ತಂಡ ಸಚಿನ್ ತೆಂಡುಲ್ಕರ್ ಅವರನ್ನು ಅಷ್ಟೊಂದು ಅವಲಂಬಿತವಾಗಿತ್ತು.
2000ನಂತರ ಟೀಮ್ ಇಂಡಿಯಾದಲ್ಲಿ ಯುವ ಕ್ರಿಕೆಟಿಗರ ಎಂಟ್ರಿಯಾದ್ರೂ ಕೂಡ ಸಚಿನ್ ತನ್ನ ಬ್ಯಾಟಿಂಗ್ ಮೊನಚು ಸ್ವಲ್ಪನೂ ಕಮ್ಮಿಯಾಗಲಿಲ್ಲ. ಸಚಿನ್ ಬ್ಯಾಟಿಂಗ್ ಮುಂದೆ ಯುವ ಕ್ರಿಕೆಟಿಗರು ಕೂಡ ಸೈಲೆಂಟ್ ಆಗಬೇಕಾಯ್ತು. ಐದು ಬಾರಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗದೇ ಇದ್ದಾಗ ಆರನೇ ಬಾರಿ ಧೋನಿ ಹುಡುಗರು ತನ್ನ ನೆಚ್ಚಿನ ಆಟಗಾರನ ಆಸೆಯನ್ನು ಈಡೇರಿಸಿದ್ದಲ್ಲದೇ ತನ್ನ ಕ್ರಿಕೆಟ್ ಬದುಕನ್ನು ಅರ್ಥಪೂರ್ಣಗೊಳಿಸಿದ್ರು.
ತನ್ನ 40ನೇ ವಯಸ್ಸಿನಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದಾಗ 24 ವರ್ಷಗಳ ಸುದೀರ್ಫವಾದ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಗೆ ಕಣ್ಣೀರಿನ ವಿದಾಯ ಹೇಳಿದ್ರು.
ನಿವೃತ್ತಿಯಾಗಿ ಎಂಟು ವರ್ಷ ಕಳೆದ್ರೂ ಸಚಿನ್ ಮೈದಾನಕ್ಕೆ ಎಂಟ್ರಿಯಾದ ಅಭಿಮಾನಿಗಳು ಸಚಿನ್ ಹೆಸರನ್ನು ಮಂತ್ರದಂತೆ ಪಠಿಸುತ್ತಾರೆ. ಕಾರಣ ಸಚಿನ್ ತೆಂಡುಲ್ಕರ್ ಮೈದಾನದಲ್ಲಿ ಮಾಡಿದ್ದ ಮೋಡಿಯೇ ಅಂತಹುದ್ದು.
ಅದು ಏನೇ ಇರಲಿ, ಸಚಿನ್ ಕ್ರಿಕೆಟ್ ಆಡಿದ್ದು, ಮಾಡಿರುವ ಸಾಧನೆ ಎಲ್ಲವೂ ಇತಿಹಾಸ. ಈಗೀನ ಜನರೇಷನ್ ಗೆ ಅದೊಂದು ಕ್ರಿಕೆಟ್ ಇತಿಹಾಸದ ಪುಸ್ತಕ.
ಒಟ್ಟಿನಲ್ಲಿ ಸಚಿನ್ ತೆಂಡುಲ್ಕರ್ ಹೆಸರು ಕೇಳುವಾಗ ನೆನಾಪಗೋದು ಎಂದೆಂದೂ ಮರೆಯದ ಅವಿಸ್ಮರಣೀಯ ಪಂದ್ಯಗಳು. ಹ್ಯಾಪಿ ಬರ್ತ್ ಡೇ ಸಚಿನ್..

Tags: bcciICCIndian cricketmumbaisachinSachin Tendulkarteam indiaworld cricket
ShareTweetSendShare
Join us on:

Related Posts

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ

by Shwetha
August 31, 2026
0

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷ ಮಾತ್ರ...

ಕುಮಾರಣ್ಣನಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು: ಕೇಸರಿ ಮಿತ್ರರ ಅಕ್ರಮಗಳ ಬಗ್ಗೆ ಕುಮಾರಣ್ಣನ ಮೌನವೇಕೆ? ಬಿಜೆಪಿ ಕಚೇರಿಯಲ್ಲೇ ಇದೆ ಎಲ್ಲಾ ಉತ್ತರ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಕುಮಾರಣ್ಣನಿಗೆ ಅಮಿತ್ ಶಾ ಟಾಸ್ಕ್ ಕೊಟ್ಟಿರಬಹುದು: ಕೇಸರಿ ಮಿತ್ರರ ಅಕ್ರಮಗಳ ಬಗ್ಗೆ ಕುಮಾರಣ್ಣನ ಮೌನವೇಕೆ? ಬಿಜೆಪಿ ಕಚೇರಿಯಲ್ಲೇ ಇದೆ ಎಲ್ಲಾ ಉತ್ತರ ಎಂದ ಸಚಿವ ಪ್ರಿಯಾಂಕ್ ಖರ್ಗೆ

by Shwetha
August 31, 2026
0

ಬೆಂಗಳೂರು: ರಾಜ್ಯ ರಾಜಕಾರಣದ ಇಬ್ಬರು ಪ್ರಮುಖ ನಾಯಕರ ನಡುವಿನ ವಾಗ್ವಾದ ಈಗ ತಾರಕಕ್ಕೇರಿದೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ...

ಇಸ್ಲಾಂ ಧರ್ಮವೇ ಶ್ರೇಷ್ಠ ಎಂದ ಸಚಿವ ರಾಯರೆಡ್ಡಿ:ಮಠ ಮಂದಿರಗಳಿಗೆ ಹೋಗಲ್ಲ,ಹಜ್ ಯಾತ್ರೆಗೆ ಹೋಗುವ ಆಸೆ ಬಿಚ್ಚಿಟ್ಟ ಕಾಂಗ್ರೆಸ್ ನಾಯಕ

ಇಸ್ಲಾಂ ಧರ್ಮವೇ ಶ್ರೇಷ್ಠ ಎಂದ ಸಚಿವ ರಾಯರೆಡ್ಡಿ:ಮಠ ಮಂದಿರಗಳಿಗೆ ಹೋಗಲ್ಲ,ಹಜ್ ಯಾತ್ರೆಗೆ ಹೋಗುವ ಆಸೆ ಬಿಚ್ಚಿಟ್ಟ ಕಾಂಗ್ರೆಸ್ ನಾಯಕ

by Shwetha
August 31, 2026
0

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಬಸವರಾಜ ರಾಯರೆಡ್ಡಿ ಅವರ ಮಾತುಗಳು ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ...

ನಾಗೇಂದ್ರ ಖಾಲಿ ಮಾಡಿದ ಕುರ್ಚಿಗೆ ಕಾಂಗ್ರೆಸ್ ನಲ್ಲಿ ಬಿರುಸಿನ ಪೈಪೋಟಿ- ಬಳ್ಳಾರಿ ಕೋಟಾದ ಮೇಲೆ ಕಣ್ಣಿಟ್ಟ ಅನ್ನಪೂರ್ಣ ತುಕರಾಮ್:ಲಕ್ಷ್ಮಿ ಹೆಬ್ಬಾಳ್ಕರ್ ಪ್ರಭಾವಕ್ಕೆ ಬೀಳುತ್ತಾ ಬ್ರೇಕ್!

ನಾಗೇಂದ್ರ ಖಾಲಿ ಮಾಡಿದ ಕುರ್ಚಿಗೆ ಕಾಂಗ್ರೆಸ್ ನಲ್ಲಿ ಬಿರುಸಿನ ಪೈಪೋಟಿ- ಬಳ್ಳಾರಿ ಕೋಟಾದ ಮೇಲೆ ಕಣ್ಣಿಟ್ಟ ಅನ್ನಪೂರ್ಣ ತುಕರಾಮ್:ಲಕ್ಷ್ಮಿ ಹೆಬ್ಬಾಳ್ಕರ್ ಪ್ರಭಾವಕ್ಕೆ ಬೀಳುತ್ತಾ ಬ್ರೇಕ್!

by Shwetha
August 31, 2026
0

ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಆ ಖಾಲಿ ಇರುವ ಕುರ್ಚಿಯನ್ನು ಅಲಂಕರಿಸಲು ಕಾಂಗ್ರೆಸ್ ಪಡಶಾಲೆಯಲ್ಲಿ...

ಭಾರತದಲ್ಲಿ ಮುಸ್ಲಿಮರಿರಬಾರದು ಎಂದು ಬಯಸುವಾತ ಹಿಂದುವೇ ಅಲ್ಲ: ಹಿಂದುತ್ವ ಎಂದರೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿ-ಅಮೆರಿಕದಲ್ಲಿ ಮೋಹನ್ ಭಾಗವತ್ ಸೌಹಾರ್ದತೆಯ ಮಂತ್ರ

ಭಾರತದಲ್ಲಿ ಮುಸ್ಲಿಮರಿರಬಾರದು ಎಂದು ಬಯಸುವಾತ ಹಿಂದುವೇ ಅಲ್ಲ: ಹಿಂದುತ್ವ ಎಂದರೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿ-ಅಮೆರಿಕದಲ್ಲಿ ಮೋಹನ್ ಭಾಗವತ್ ಸೌಹಾರ್ದತೆಯ ಮಂತ್ರ

by Shwetha
August 31, 2026
0

ನ್ಯೂಯಾರ್ಕ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಅಮೆರಿಕ ಪ್ರವಾಸದ ವೇಳೆ ಹಿಂದುತ್ವ ಮತ್ತು ಮುಸ್ಲಿಮರ ಕುರಿತು ಅತ್ಯಂತ ಮಹತ್ವದ ಹಾಗೂ ಸ್ಫೋಟಕ ಹೇಳಿಕೆ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram