ಕೊರೊನಾ ಪರಿಸ್ಥಿತಿಯನ್ನ ದಯವಿಟ್ಟು ಲಘುವಾಗಿ ಪರಿಗಣಿಸಬೇಡಿ -ಅನಿರುದ್ಧ
ಬೆಂಗಳೂರು : ಕೊರೊನಾ 2 ನೇ ಅಲೆಗೆ ದೇಶದ ಜನ ಅಕ್ಷರಸಹ ನಲುಗಿಹೋಗಿದ್ದಾರೆ. ಎತ್ತ ನೋಡಿದ್ರು, ನೋವು ನೋವುಗಳೇ, ಕೊರೊನಾದಿಮದ ಬೆಡ್ ಸಿಗದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಆಕ್ಸಿಜನ್ ಕೊರತೆ, ಇಷ್ಟೆಲ್ಲಾ ಸಮಸ್ಯೆಗಳಿಮದ ಜನ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ತಮ್ಮವರನ್ನ ಕಳೆದುಕೊಂಡು ನೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ತಾಯಿದ್ದಾರೆ.
ಇದೀಗ ಕಿರುತೆರೆ ಹಾಗೂ ಸ್ಯಾಂಡಲ್ ವುಡ್ ನ ನಟ ಅನಿರುದ್ಧ ಅವರು ಕೊರೊನಾದ ಕರಾಳ ಅನುಭವವನ್ನ ಬಿಚ್ಚಿಟ್ಟಿದ್ದಾರೆ. ಅನಿರುದ್ಧ ಅವರ ಗೆಳೆಯರೊಬ್ಬರು ಕೋವಿಡ್ ನಿಂದಾಗಿ ಮೃತಪಟ್ಟಿದ್ದು, ಈ ಬಗ್ಗೆ ಮಾತನಾಡಿರುವ ಅವರು, ಸಾಕಷ್ಟು ಸಾವಾಲಿನ ನಂತರ ಪ್ರಭಾವದಿಂದ ಬೆಡ್ ಸಿಕ್ಕಿತ್ತು. ಆದ್ರೂ ಗಡಳೆಯನನ್ನ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.. ಆಂಬ್ಯುಲೆನ್ಸ್ ಗಳಲ್ಲಿಸಾಲು ಸಾಲು ಶವಗಳನ್ನ ತರುತ್ತಿರುವುದನ್ನ ನೋಡಿದ್ರೆ ಆತಂಕವಾಗುತ್ತಿದೆ. ಪರಿಸ್ಥಿತಿ ತೀರ ಹದಗೆಟ್ಟಿದೆ. ಇದನ್ನ ದಯವಿಟ್ಟು ಲಘುವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬದಲಾದ ಸಮಯದಲ್ಲಿ ಬರಲಿದೆ ಕಿರುತೆರೆಯ ‘ಮಹಾನಾಯಕ’..!








