BIGGBOSS 8 : ದಿವ್ಯಾ ನನ್ನನ್ನು ಈಗಾಗಲೇ ಚೂಸ್ ಮಾಡಿ ಆಯ್ತು – ಅರವಿಂದ್
ಕೊರೊನಾ ಲಾಕ್ ಡೌನ್ ನಿಂದಾಗಿ ಬಿಗ್ಬಾಸ್ ಸೀಸನ್ 8 ಅರ್ಧಕ್ಕೆ ನಿಂತು ಹೋಗಿದೆ… ಇದಾದ ಬಳಿಕ ಬೈಕ್ ರೇಸರ್ ಅರವಿಂದ್ ಕೆ ಪಿ ಮೊದಲ ಬಾರಿಗೆ ಲೈವ್ ಗೆ ಬಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.. ಈ ವೇಳೆ ಬಹುತೇಕ ಪ್ರಶ್ನೆಗಳು ದಿವ್ಯಾ ಉರುಡುಗ ಹಾಗೂ ಅರವಿಂದ್ ಸಂಬಂಧದ ಬಗ್ಗೆಯೇ ಕೇಳಲಾಗಿದ್ದು, ಅರವಿಂದ್ ಸಹ ಕೆಲವಕ್ಕೆ ಇಂಟರೆಸ್ಟಿಂಗ್ ಆಗಿಯೇ ಉತ್ತರಿಸಿದ್ದಾರೆ..
ಅಂದ್ಹಾಗೆ ದಿವ್ಯಾ ಉರುಡುಗ ಹಾಗೂ ಅರವಿಂದ್ ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಪಕ್ಷಿಗಳಂತೆ ಸದಾ ಒಟ್ಟಾಗಿಯೇ ಇರುತ್ತಿದ್ದರು.. ಇವರಿಬ್ಬರ ನಡುವಿನ ಕ್ಯೂಟ್ ಕೆಮಿಸ್ಟ್ರಿಗೆ ಅನೇಕರು ಫಿದಾ ಆಗಿದ್ದರು. ಸಾಲದಕ್ಕೆ ಟ್ವಿಟ್ಟರ್ ನಲ್ಲಿ ಈ ಜೋಡಿಯ ಹೆಸರಲ್ಲಿ #arviya ಸಹ ಟ್ರೆಂಡ್ ಆಗಿತ್ತು. ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂದೇ ಎಲ್ಲರೂ ಹೇಳುತ್ತಿದ್ದರು.. ಆದ್ರೆ ಬಿಗ್ ಬಾಸ್ ನಿಂತು ಹೋಗುವುದಕ್ಕೂ ಕೆಲ ದಿನಗಳ ಹಿಂದೆ ಅನಾರೋಗ್ಯದ ಕಾರಣದಿಂದಾಗಿ ಬಿಗ್ ಬಾಸ್ ನಿಂದ ದಿವ್ಯಾ ಹೊರನಡೆದಿದ್ದರು.. ಇದ್ರಿಂದ ತೀರ ದುಃಖಕ್ಕೆ ಒಳಗಾಗಿದ್ದ ಅರವಿಂದ್ ಪದೇ ಪದೇ ದಿವ್ಯಾ ನೆನಪಲ್ಲಿ ಕಣ್ಣೀರಿಟ್ಟಿದ್ದರು.
ಇನ್ನೂ ಅರವಿಂದ್ ಗೆ ಲೈವ್ ವೇಳೆ ಅಭಿಮಾನಿಯೊಬ್ಬರು ದಿವ್ಯಾ ಉರುಡುಗ ಅಥವಾ ಬಿಗ್ಬಾಸ್ ಶೋನಲ್ಲಿ ಗೆಲ್ಲುವುದು ಈ ಎರಡರ ಮಧ್ಯೆ ನೀವು ಯಾವುದನ್ನು ಆಯ್ಕೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅರವಿಂದ್ ದಿವ್ಯಾ ಉರುಡುಗರವರು ನನ್ನನ್ನು ಚೂಸ್ ಮಾಡಿಬಿಟ್ಟಿದ್ದಾರೆ. ಹಾಗಾಗಿ ನಾನು ಅವರನ್ನು ಚೂಸ್ ಮಾಡುವುದೇನಿಲ್ಲ. ಬಿಗ್ಬಾಸ್ ಮನೆಗೆ ಎಲ್ಲರೂ ಬರುವುದು ಗೆಲ್ಲುವುದಕ್ಕೆ, ನಾನು ಹೋಗಿದ್ದು ಒಳಗಡೆ ಅಲ್ಲಿ ಯಾರನ್ನು ಫ್ರೆಂಡ್ ಮಾಡಿಕೊಳ್ಳುವುದಕ್ಕೆ ಅಲ್ಲ. ಆಟ ಆಡುವ ವೇಳೆ ನಿಮಗೆ ಗೊತ್ತಾಗುತ್ತದೆ. ಇದು ಬಿಗ್ಬಾಸ್. ಡಿ ಯೂ ನನ್ನನ್ನು ಈಗಾಗಲೇ ಚೂಸ್ ಮಾಡಿ ಬಿಟ್ಟಿದ್ದಾರೆ ಎಂದು ಉತ್ತರಿಸಿದ್ದಾರೆ. 
ನಂತರ ಇದೇ ಲೈವ್ನಲ್ಲಿ ಅರವಿಂದ್ ನಾನು ಈಚೆ ಬಂದ ಮೇಲೆ ದಿವ್ಯಾ ಉರುಡುಗಗೆ ಕರೆ ಮಾಡಿದ್ದೆ. ಅವರು ನಿನ್ನೆ ತಾನೇ ಮನೆಗೆ ತೆರಳಿದ್ದಾರೆ. ಚೇತರಿಸಿಕೊಂಡಿದ್ದಾರೆ ಮತ್ತು ಖುಷಿಯಾಗಿದ್ದಾರೆ. ಆದರೆ ಅವರಿಗೆ ಹುಷಾರಾಗಲು ಕೊಂಚ ಸಮಯ ಬೇಕಾಗುತ್ತದೆ. ಇನ್ನೂ ಅವರು ಕೊಟ್ಟಿರುವ ರಿಂಗ್ ನನ್ನ ಕೈನಲ್ಲಿಯೇ ಇದೆ ಅದನ್ನು ಯಾವಾಗಲೂ ತೆಗೆಯುವುದಿಲ್ಲ. ಅವರು ನನಗೆ ಒಲವಿನ ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಬಹಳ ವಾಲ್ಯೂ ಇದೆ. ಅದನ್ನು ಎಂದಿಗೂ ಬಿಚ್ಚಿ ಇಡುವುದಿಲ್ಲ. ಆದರೆ ಸ್ವಲ್ಪ ಟೈಟ್ ಇದೆ ಅದನ್ನು ಯಾವಾಗ ಆಗುತ್ತದೆಯೋ ಅವಾಗ ಸರಿಮಾಡಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಗೆ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.
========0








