ADVERTISEMENT
Friday, March 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Karavali Karnataka

ಚರ್ಚೆಗೆ ಗ್ರಾಸವಾದ ಉಡುಪಿ ಮಾಜಿ ಮತ್ತು ಹಾಲಿ ಶಾಸಕರ ಭೇಟಿ

Shwetha by Shwetha
June 15, 2021
in Karavali Karnataka, Newsbeat, ಕರಾವಳಿ ಕರ್ನಾಟಕ, ನ್ಯೂಸ್ ಬೀಟ್
Udupi MLA meet Pramodh Madhwaraj
Share on FacebookShare on TwitterShare on WhatsappShare on Telegram

ಚರ್ಚೆಗೆ ಗ್ರಾಸವಾದ ಉಡುಪಿ ಮಾಜಿ ಮತ್ತು ಹಾಲಿ ಶಾಸಕರ ಭೇಟಿ

ಮಾಜಿ ಮತ್ತು ಹಾಲಿ ಉಡುಪಿ ಶಾಸಕರು ಜೂನ್ 14 ರ ಸೋಮವಾರ ಬೆಳಿಗ್ಗೆ ಒಟ್ಟಿಗೆ ಉಪಾಹಾರ ಸೇವಿಸುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಆಶ್ಚರ್ಯಪಡಿಸಿದ್ದಾರೆ.

Related posts

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

March 13, 2026
ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

March 13, 2026

ಉಡುಪಿ ಶಾಸಕ ರಘುಪತಿ ಭಟ್ ಮತ್ತು ಜಿಲ್ಲೆಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಮಧ್ವರಾಜ್ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಇಬ್ಬರೂ ಇತ್ತೀಚೆಗೆ ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೇತನ ಪಾವತಿಸದ ಬಗ್ಗೆ ಮಾತಿನ ಚಕಮಕಿ ನಡೆಸಿದ್ದರು.
Udupi MLA meet Pramodh Madhwaraj
ಕಾಂಗ್ರೆಸ್ ನಾಯಕರ ಅಧಿಕಾರಾವಧಿಯಲ್ಲಿ ಬೇಜವಾಬ್ದಾರಿ ಕ್ರಮದಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಭಟ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.

ಆದರೆ ಸೋಮವಾರ ಮಾಜಿ ಸಹಪಾಠಿಗಳು ಇಬ್ಬರೂ ಒಟ್ಟಿಗೆ ಉಪಹಾರವನ್ನು ಸೇವಿಸಿದ್ದಾರೆ. ಶಾಸಕ ರಘಪತಿ ಭಟ್ ಅವರ ನೇತೃತ್ವದಲ್ಲಿ ನಡೆದ ಅಮ್ಮುಂಜೆ ನಾಗಬನದ ಬಳಿಯ ಬಂಜರು ಭೂಮಿಯನ್ನು ಸಾಗುವಳಿ ಮಾಡುವ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಧ್ವರಾಜ್ ಭಾಗವಹಿಸಿದ್ದರು.

ಮಧ್ವರಾಜ್ ಅವರು ಈ ಯೋಜನೆಯನ್ನು ಉದ್ಘಾಟಿಸಿ, ಇಂತಹ ರಾಜಕೀಯೇತರ ಯೋಜನೆಯನ್ನು ಪ್ರಾರಂಭಿಸುವುದು ಒಳ್ಳೆಯದು ಎಂದು ಹೇಳಿದರು. ಈ ಯೋಜನೆಯು ಭೂಮಾಲೀಕರಿಗೆ ಸಹಾಯ ಮಾಡುತ್ತದೆ. ಯೋಜನೆಯಲ್ಲಿ ಭಾಗಿಯಾಗಿರುವವರೆಲ್ಲರೂ ಅದರ ಲಾಭವನ್ನು ಪಡೆದುಕೊಳ್ಳಲಿ ಎಂದು ಹಾರೈಸಿದ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ರಘಪತಿ ಭಟ್, ಇದು ರಾಜಕೀಯೇತರ ಯೋಜನೆ. ಈ ಯೋಜನೆಗಾಗಿ ಟ್ರಸ್ಟ್ ರಚಿಸಲಾಗಿದೆ ಮತ್ತು ಉಡುಪಿ ಕ್ಷೇತ್ರದ ಶಾಸಕನಾಗಿ ನಾನು ಅಧ್ಯಕ್ಷನಾಗಿರುತ್ತೇನೆ. ನನ್ನ ಅಧಿಕಾರಾವಧಿಯಲ್ಲಿ ನಾನು ಕೊನೆಯ ಬಾರಿಗೆ ಯಕ್ಷಕ್ಷಾಣ ಟ್ರಸ್ಟ್ ಅನ್ನು ಸ್ಥಾಪಿಸಿದ್ದೆ. ಇದನ್ನು ಮಧ್ವರಾಜ್ ಅವರ ಅಧಿಕಾರಾವಧಿಯಲ್ಲಿ ಮುಂದುವರಿಸಲಾಯಿತು. ಜಮೀನುಗಳ ಕೃಷಿಯಿಂದಾಗಿ ಜಲಮೂಲಗಳೂ ಪುನಶ್ಚೇತನಗೊಳ್ಳುತ್ತವೆ. ಹತ್ತಿರದಲ್ಲಿ ವಾಸಿಸುವ ಮಧ್ವರಾಜ್ ಕೂಡ ಇದರ ಲಾಭ ಪಡೆಯಬಹುದು ಎಂದು ಹೇಳಿದರು. ‌ಮಧ್ವರಾಜ್ ಮತ್ತು ರಘಪತಿ ಭಟ್ ಕೂಡ ಹೊಲಗಳಲ್ಲಿ ಭತ್ತವನ್ನು ನೆಟ್ಟರು. ನಂತರ ಮಧ್ವರಾಜ್ ಆಹ್ವಾನದ ಮೇರೆಗೆ ಅಮ್ಮುಂಜೆ ಮನೆಯ ಗೋಶಾಲೆಗೆ ರಘುಪತಿ ಭಟ್ ಭೇಟಿ ನೀಡಿದರು.

ಇಬ್ಬರು ನಾಯಕರ ಭೇಟಿ ಸ್ನೇಹಪರ ಸೂಚಕವಾಗಿದ್ದರೂ, ಪಕ್ಷದ ಕಾರ್ಯಕರ್ತರು ಈಗಾಗಲೇ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ದಾರೆ.
wearing masks
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

ಸಂಚಾರದ ಹಾದಿಯಲ್ಲಿ ದುರ್ವಿದಿಯ ಆಟಕ್ಕೆ ಬಲಿಯಾದ ನಟ ಸಂಚಾರಿ ವಿಜಯ್#Kannadaactor #SanchariVijay https://t.co/nFmJpi53YE

— Saaksha TV (@SaakshaTv) June 15, 2021

ತಪ್ಪಾದ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾದರೆ ಹಿಂಪಡೆಯುವುದು ಹೇಗೆ?#bankaccount https://t.co/TJ0loQb3cQ

— Saaksha TV (@SaakshaTv) June 12, 2021

ಸೋಯಾ ಚಂಕ್ಸ್ ಮಂಚೂರಿ#soyaChuck #Manchurian https://t.co/Hhd2pyUlPt

— Saaksha TV (@SaakshaTv) June 11, 2021

ಕೊರೋನಾ ಸಮಯದಲ್ಲಿ ‌ಅಮೃತ ಬಳ್ಳಿ ಕಷಾಯದ ಆರೋಗ್ಯ ಪ್ರಯೋಜನಗಳು#Saakshatv #healthtips #Giloy https://t.co/z4DsWOV94S

— Saaksha TV (@SaakshaTv) June 11, 2021

ಮೂತ್ರಪಿಂಡದ ಕಲ್ಲು/ಕಿಡ್ನಿ ಸ್ಟೋನ್ ಗೆ ಕಾರಣವಾಗುವ ಅಂಶಗಳು#Saakshatv #healthtips #kidney #stone https://t.co/myw8kCsv0i

— Saaksha TV (@SaakshaTv) June 12, 2021

ಕೇರಳ – ಒಂದೇ ತಿಂಗಳಿನಲ್ಲಿ 28000 ಬೆಕ್ಕು ಕಚ್ಚಿದ ಪ್ರಕರಣ ವರದಿ#catbites https://t.co/fd0OH45LQA

— Saaksha TV (@SaakshaTv) June 12, 2021

#UdupiMLA #PramodhMadhwaraj

Tags: Udupi MLA meet Pramodh Madhwaraj
ShareTweetSendShare
Join us on:

Related Posts

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

by Shwetha
March 13, 2026
0

ಸದಾ ನಗುಮುಖದಿಂದಲೇ ಎಲ್ಲರ ಮನಸ್ಸು ಗೆದ್ದಿರುವ ರಶ್ಮಿಕಾ ಮಂದಣ್ಣ ಇದೀಗ ತೀವ್ರವಾಗಿ ಗರಂ ಆಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್, ನೆಗೆಟಿವ್ ಕಮೆಂಟ್...

ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

by Shwetha
March 13, 2026
0

ಬಿ. ವೈ. ವಿಜಯೇಂದ್ರ ರಾಜ್ಯ ಸರ್ಕಾರದ 2026-27ನೇ ಸಾಲಿನ ಬಜೆಟ್ ಕುರಿತು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ನೋಡಿದರೆ ಸರ್ಕಾರದ ಆರ್ಥಿಕ...

ಪ್ರೀತಿಗಾಗಿ ಗಡಿ ದಾಟಿದ ಜೋಡಿ ಮನೆಯವರ ವಿರೋಧದ ನಡುವೆ ಕೇರಳದಲ್ಲಿ ಹಸೆಮಣೆ ಏರಿದ ನಟಿ ಮೊನಾಲಿಸಾ ಭೋಸ್ಲೆ ಮತ್ತು ಮೊಹಮ್ಮದ್ ಫರ್ಮಾನ್

ಪ್ರೀತಿಗಾಗಿ ಗಡಿ ದಾಟಿದ ಜೋಡಿ ಮನೆಯವರ ವಿರೋಧದ ನಡುವೆ ಕೇರಳದಲ್ಲಿ ಹಸೆಮಣೆ ಏರಿದ ನಟಿ ಮೊನಾಲಿಸಾ ಭೋಸ್ಲೆ ಮತ್ತು ಮೊಹಮ್ಮದ್ ಫರ್ಮಾನ್

by Shwetha
March 13, 2026
0

ಕುಂಭಮೇಳದಲ್ಲಿ ಕಾಣಿಸಿಕೊಂಡು ರಾತ್ರೋರಾತ್ರಿ ಜನಪ್ರಿಯತೆ ಗಳಿಸಿ, ಬಳಿಕ ಆಲ್ಬಮ್ ಹಾಡುಗಳು ಹಾಗೂ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದ ಉದಯೋನ್ಮುಖ ನಟಿ ಮೊನಾಲಿಸಾ ಭೋಸ್ಲೆ ಇದೀಗ ತಮ್ಮ ದಿಟ್ಟ ನಿರ್ಧಾರದ...

ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿಗೆ ಅಪಮಾನ: ವಿಜಯಪುರದಲ್ಲಿ ಭುಗಿಲೆದ್ದ ಜನಾಕ್ರೋಶ, ಜಾಲತಾಣದಲ್ಲಿ ವಿಕೃತಿ ಮೆರೆದ ಸೈಬರ್ ಕಿಡಿಗೇಡಿ

ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿಗೆ ಅಪಮಾನ: ವಿಜಯಪುರದಲ್ಲಿ ಭುಗಿಲೆದ್ದ ಜನಾಕ್ರೋಶ, ಜಾಲತಾಣದಲ್ಲಿ ವಿಕೃತಿ ಮೆರೆದ ಸೈಬರ್ ಕಿಡಿಗೇಡಿ

by Shwetha
March 13, 2026
0

ಸಮಾನತೆಯ ಹರಿಕಾರ, ಕಾಯಕಯೋಗಿ ಬಸವಣ್ಣ ಹಾಗೂ ಅಪ್ರತಿಮ ಶಿವಶರಣೆ ಅಕ್ಕಮಹಾದೇವಿಯವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೀಳುಮಟ್ಟದ ಹಾಗೂ ವಿಕೃತ ಪೋಸ್ಟ್ ಹಾಕಿರುವ ಘಟನೆ ಇಡೀ ನಾಡಿನಾದ್ಯಂತ...

ಶಿಕ್ಷಕರಿಗೆ ಪಾಠ ಬಿಡಿಸಿ ಬೀದಿ ನಾಯಿ ಕಾಯುವ ಕೆಲಸ: ಸರ್ಕಾರದ ಅವೈಜ್ಞಾನಿಕ ಆದೇಶದ ವಿರುದ್ಧ ಶಶೀಲ್ ಜಿ. ನಮೋಶಿ ತೀವ್ರ ಆಕ್ರೋಶ

ಶಿಕ್ಷಕರಿಗೆ ಪಾಠ ಬಿಡಿಸಿ ಬೀದಿ ನಾಯಿ ಕಾಯುವ ಕೆಲಸ: ಸರ್ಕಾರದ ಅವೈಜ್ಞಾನಿಕ ಆದೇಶದ ವಿರುದ್ಧ ಶಶೀಲ್ ಜಿ. ನಮೋಶಿ ತೀವ್ರ ಆಕ್ರೋಶ

by Shwetha
March 13, 2026
0

ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರ ಮೇಲಿನ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ, ರಾಜ್ಯ ಸರ್ಕಾರವು ತೆಗೆದುಕೊಂಡಿರುವ ಒಂದು ಅಚ್ಚರಿಯ ನಿರ್ಧಾರ ತೀವ್ರ ವಿವಾದಕ್ಕೆ ಕಾರಣವಾಗಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram