ಸಿದ್ದರಾಮಯ್ಯ ಸೋನಿಯಾ ಗಾಂಧಿ ಮುಂದೆ ರೋಪ್ ಹಾಕ್ತಾರಾ : ಜಿ.ಎಸ್.ಬಸವರಾಜ್
ತುಮಕೂರು : ಸಿದ್ದರಾಮಯ್ಯ ಸೋನಿಯಾ ಗಾಂಧಿ ಮುಂದೆ ಹೋಗಿ ರೋಪ್ ಹಾಕ್ತಾರಾ? ಹಾಗೇನೇ ಯಡಿಯೂರಪ್ಪ ಹೋಗಿ ಮೋದಿ ಅವರನ್ನು ಬೈಯೋಕಾಗುತ್ತಾ ಎಂದು ಸಂಸದ ಜಿ.ಎಸ್.ಬಸವರಾಜ್ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರ ಹಮಾರಾ ಕುತ್ತಾ ಹಮಾರ ಗಲಿಮೇ ಶೇರ್ ಹೇಳಿಕೆಯನ್ನು ತುಮಕೂರಿನಲ್ಲಿ ಖಂಡಿಸಿದ ಜಿ.ಎಸ್.ಬಸವರಾಜ್, ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ.
ಹಾಗಾಗಿ ಸಿಎಂ ಯಡಿಯೂರಪ್ಪರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಜನರನ್ನು ಆಕರ್ಷಣೆ ಮಾಡಲು ಸಿದ್ದರಾಮಯ್ಯ ಈ ರೀತಿ ಮಾತನಾಡಬಹುದು, ಆದರೆ ಅವರ ಮಾತು ಸರಿಯಲ್ಲ ಎಂದರು.
ಇನ್ನು ಸೋನಿಯಾ ಗಾಂಧಿ ಮುಂದೆ ಸಿದ್ದರಾಮಯ್ಯ ರೋಪ್ ಹಾಕ್ತಾರಾ..? ಅವರ ಮುಂದೆ ನಿಂತು ಕೈ ಮುಗಿತಾರೆ, ಹೊರತು ಏನೂ ಮಾಡಲ್ಲ. ಹಾಗೇನೇ ಯಡಿಯೂರಪ್ಪ ಹೋಗಿ ಮೋದಿ ಅವರನ್ನು ಬೈಯೋಕಾಗುತ್ತಾ? ಎಂದು ಪ್ರಶ್ನಿಸಿದರು.
ಸಿಎಂ ಬದಲಾವಣೆ ವಿಚಾರ ಕುರಿತು ಮಾತನಾಡಿದ ಅವರು, ಯಡಿಯೂರಪ್ಪ ಸ್ವಂತ ಕ್ವಾಲಿಟಿ ಹೊಂದಿದ್ದಾರೆ. ಪಕ್ಷದಲ್ಲಿ ಹಿಡಿತ ಸಾಧಿಸಿದ್ದಾರೆ. ಪ್ರಬಲ ಸಮುದಾಯವನ್ನು ಪ್ರತಿನಿಸುತ್ತಿದ್ದಾರೆ. ಯಡಿಯೂರಪ್ಪರನ್ನು ಬಿಟ್ಟರೆ ಪರ್ಯಾಯ ನಾಯಕರು ಬಿಜೆಪಿಯಲ್ಲಿ ಇಲ್ಲ ಎಂದರು.