ದಕ್ಷಿಣ ಭಾರತದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಿದ ಅಪ್ಪ-ಮಕ್ಕಳು ಯಾರ್ಯಾರು..?
ನವದೆಹಲಿ : ಇಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಮೂಲಕ ತಮ್ಮ ತಂದೆ ಎಸ್.ಆರ್.ಬೊಮ್ಮಾತಿ ಯಾವ ಸ್ಥಳದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೋ ಅದೇ ಸ್ಥಳದಲ್ಲಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೇರಿದ ಅಪ್ಪ-ಮಕ್ಕಳು ಯಾರ್ಯಾರು..?
ಎಸ್. ಆರ್ ಬೊಮ್ಮಾಯಿ ಅವರು 1988 ರಿಂದ 1989 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿದ್ದರು. ಇದೀಗ ಅವರ ಪುತ್ರ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.
ಹೆಚ್.ಡಿ ದೇವೇಗೌಡ – ಹೆಚ್.ಡಿ ಕುಮಾರಸ್ವಾಮಿ
ಇಂದು ಪ್ರಮಾಣ ವಚನ ಸ್ವೀಕರಿಸಿದ ಬೊಮ್ಮಾಯಿ ಅವರಿಗಿಂತ ಮೊದಲು ರಾಜ್ಯದಲ್ಲಿ ದೊಡ್ಡಗೌಡರ ಕುಟುಂಬ ಈ ಸಾಧನೆ ಮಾಡಿತ್ತು. ದೇಶದ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿರುವ ದೇವೇಗೌಡರು, ರಾಜ್ಯದ ಸಿಎಂ ಕೂಡ ಆಗಿದ್ದರು. ಇನ್ನು ಮೈತ್ರಿ ಸರ್ಕಾರಗಳ ಮೂಲಕ ಹೆಚ್ ಡಿ ಕುಮಾರಸ್ವಾಮಿ ಕೂಡ ರಾಜ್ಯದಲ್ಲಿ 2 ಬಾರಿ ಸಿಎಂಯಾಗಿದ್ದಾರೆ.
ತಮಿಳುನಾಡಲ್ಲಿ ಎಂ. ಕರುಣಾನಿಧಿ – ಎಂ.ಕೆ ಸ್ಟಾಲಿನ್
ದ್ರಾವಿಡ ನಾಡು ತಮಿಳುನಾಡಲ್ಲಿ ಕೂಡ ತಂದೆ – ಮಕ್ಕಳು ಸಿಎಂ ಸ್ಥಾನಕ್ಕೇರಿದ್ದಾರೆ. ಸದ್ಯ ತಮಿಳುನಾಡಿನ ಸಿಎಂ ಆಗಿರುವ ಎಂ.ಕೆ.ಸ್ಟಾಲಿನ್ ಅವರು ಮಾಜಿ ಸಿಎಂ ಎಂ ಕರುಣಾ ನಿಧಿ ಅವರ ಮಗನಾಗಿದ್ದಾರೆ.
ಆಂಧ್ರದಲ್ಲಿ ರಾಜಶೇಖರ ರೆಡ್ಡಿ- ವೈ. ಎಸ್ ಜಗನ್ ಮೋಹನ್ ರೆಡ್ಡಿ
ಸದ್ಯ ಆಂಧ್ರದಲ್ಲಿ ಅಧಿಕಾರದ ಚಕ್ರ ತಿರುಗಿಸುತ್ತಿರುವ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಆಂಧ್ರ ಪ್ರದೇಶದ ಮಾಜಿ ಸಿಎಂ ರಾಜಶೇಖರ್ ರೆಡ್ಡಿ ಅವರ ಮಗ. ಈ ಹಿಂದೆ ಕಾಂಗ್ರೆಸ್ ನ ನಾಯಕರಾಗಿದ್ದ ವೈ ಎಸ್ ರಾಜಶೇಖರ್ ರೆಡ್ಡಿ, ಎರಡು ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು.










