250 ಲೀಟರ್ ಹಾಲು milk ಚರಂಡಿಗೆ ಸುರಿದ ರೈತ
ಚಿತ್ರದುರ್ಗ : ಅಧಿಕಾರಿಗಳ ವರ್ತನೆಗೆ ಬೇಸತ್ತು ರೈತರು 250 ಲೀಟರ್ ಹಾಲನ್ನ ಚರಂಡಿಗೆ ಸುರಿದಿರುವ ಘಟನೆ ಜಿಲ್ಲೆಯ ಲಕ್ಕವ್ವನಹಳ್ಳಿ ಬಿಎಂಸಿ ಕೇಂದ್ರದ ಬಳಿ ನಡೆದಿದೆ.
ಹಾಲಿನಲ್ಲಿ 3.5 ಶೇಕಡ ಕೊಬ್ಬನಾಂಶ ಕಡಿಮೆ ಇದೆ ಎಂದು ಆರೋಪಿಸಿ ಅಧಿಕಾರಿಗಳು ಹಾಲನ್ನ ವಾಪಸ್ ನೀಡುತಿದ್ದಾರೆ.
ಇದರಿಂದ ರೈತರು ಆಕ್ರೋಶಗೊಂಡಿದ್ದು, ವರ್ಷ ಪೂರ್ತಿ ಲಾಭಗಳಿಸಿ ಈಗ ಹಾಲು ವಾಪಸ್ಸು ಕಳುಹಿಸುತ್ತಿದ್ದಾರೆ.
ನೈಸರ್ಗಿಕದಲ್ಲಿ ಆಗುತ್ತಿರುವ ಬದಲಾವಣೆಯಿಂದ ಕೊಬ್ಬಿನಾಂಶ ಕಡಿಮೆ ಆಗುತ್ತಿದೆ.
ಇದಕ್ಕೆ ರೈತರನ್ನು ಹೊಣೆ ಮಾಡಿ ಅಧಿಕಾರಿಗಳು ಹಾಲು ಖರೀದಿಸದೆ ವಾಪಸ್ ಕಳಿಸುತ್ತಿದ್ದಾರೆ.
ಹೀಗಾಗಿ ಅಧಿಕಾರಿಗಳ ವರ್ತನೆಗೆ ಆಕ್ರೋಶಗೊಂಡು ರೈತರು ಹಾಲು ಚರಂಡಿಗೆ ಚೆಲ್ಲಿದ್ದಾರೆ.
ಸದ್ಯ ಲಾಲ್ ಡೌನ್ ಆಗಿ ರೈತರು ಬದುಕುವುದೇ ದುಸ್ತರವಾಗಿದೆ. ಇದರಲ್ಲಿ ಅಧಿಕಾರಿಗಳು ಕೂಡ ಈ ರೀತಿ ನಡೆದುಕೊಳ್ಳುತ್ತಿದ್ದಾರೆ.
ಅಧಿಕಾರಿಗಳ ಈ ವರ್ತನೆ ಮುಂದುವರೆದರೆ ಆತ್ನಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.
ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರ ಹಾಲು ಖರೀದಿಸುವಂತೆ ಸೂಚನೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.









