ಮತಾಂತರ ಕಾಯ್ದ, ಇದು ಸಿದ್ದರಾಮಯ್ಯನವರ ಸರ್ಕಾರದ್ದೇ ಪ್ರಸ್ತಾಪ ಎಂದ ಸರ್ಕಾರ
ಬೆಳಗಾವಿ ಸುವರ್ಣ ಸೌಧದಲ್ಲಿ ಮತಾಂತರ ವಿರೋಧಿ ಮಸೂದೆಯ ಕುರಿತು ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ಬಿರುಸಿನ ಚರ್ಚೆ ಏರ್ಪಟ್ಟಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಜೆ ಸಿ ಮಾಧುಸ್ವಾಮಿ ನಡುವೆ ಸವಾಲು ಪ್ರತಿ ಸವಾಲಿಗೆ ಸಾಕ್ಷಿಯಾಯಿತು.
ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ “ಈ ಮಸೂದೆಯನ್ನು ವಾಸ್ತವವಾಗಿ 2016 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಶುರು ಮಾಡಿದ್ದು ಎಂದ ಹೇಳಿಕೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಅಲ್ಲದೆ ಈ ವಿಚಾರ ಕಾಂಗ್ರೇಸ್ ಅನ್ನ ಇಕ್ಕಟ್ಟಿಗೆ ಸಿಲುಕಿಸಿತು.
2016ರ ನವೆಂಬರ್ 16ರಂದು ಕಾಂಗ್ರೆಸ್ ಕಾನೂನು ಆಯೋಗಕ್ಕೆ ವಿಧೇಯಕವನ್ನು ಮಂಡಿಸುವ ಕುರಿತು ಬರೆದಿದ್ದ ಪತ್ರ ಮತ್ತು ಪರಿಶೀಲನಾ ಸಮಿತಿ ಮುಂದೆ ಬಂದಿದ್ದನ್ನು ಪ್ರಸ್ತಾಪಿಸಿತು. ಸ್ಪೀಕರ್ ಇದನ್ನ ಓದಿ ಹೇಳುತ್ತಿದ್ದಂತೆ ಬಿಜೆಪಿ ಶಾಸಕರು ಜೋರಾಗಿ ಮೇಜು ತಟ್ಟಿ ಸಂಭ್ರಮಿಸಿದರು.
ಇದಕ್ಕೆ ಸಿದ್ದರಾಮಯ್ಯ ಉತ್ತರಿಸಿ ಕ್ಯಾಬಿನೆಟ್ ಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಗಿಲ್ಲ, ಚರ್ಚಿಸಲಾಗಿಲ್ಲ ಮತ್ತು ಅಂಗೀಕರಿಸಲಾಗಿಲ್ಲ. 2016 ರಲ್ಲಿ ಸಿದ್ಧಪಡಿಸಲಾದ ಕರಡು ಮಸೂದೆಯು ಪ್ರಸ್ತುತ ರಾಜ್ಯ ಸರ್ಕಾರವು 2021 ರಲ್ಲಿ ರಚಿಸಿದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಹೇಳಿದರು.
ಎಸ್ಸಿ/ಎಸ್ಟಿಯ ಪರಿಸ್ಥಿತಿ ನಮಗೆ ತಿಳಿದಿದೆ. ಅವರನ್ನು ನಿರ್ಲಕ್ಷಿಸಲಾಗಿದೆ ಮತ್ತು ದುರ್ಬಲವಾಗಿ ಉಳಿಯುತ್ತದೆ. ಈ ಮಸೂದೆಯನ್ನು ತರುವುದರ ಹಿಂದೆ ಎಸ್ಸಿ/ಎಸ್ಟಿ ಸಮುದಾಯಗಳು ಮತ್ತು ಮಹಿಳೆಯರ ರಕ್ಷಣೆ ನಮ್ಮ ಉದ್ದೇಶ: ಬಸವರಾಜ ಬೊಮ್ಮಾಯಿ, ವಿಧಾನಸಭೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ








