ಇದು ಹಾಸ್ಯವೋ, ಗಂಭೀರ ವಿಷಯವೋ ಗೊತ್ತಿಲ್ಲ. ಆದರೆ, ವ್ಯಕ್ತಿಯೊಬ್ಬ ತಾನು ಚಪ್ಪಲಿ ಕಳೆದುಕೊಂಡಿದ್ದೇನೆ ಎಂದು ದೂರು ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿನ ಸಿವಿಲ್ ಲೈನ್ ನ ಭೈರವ ಬಾಬಾ ದೇವಸ್ಥಾನದಲ್ಲಿ. ದಬೌಲಿ ನಿವಾಸಿಯಾಗಿರುವ ಕಾಂತಿಲಾಲ್ ನಿಗಮ್ ಅವರು ದೇವರದರ್ಶನಕ್ಕೆ ತೆರಳಿದ್ದಾರೆ. ಅವರು ಚಪ್ಪಲಿಯನ್ನು ಹೊರಗೆ ಬಿಟ್ಟು ಹತ್ತಿರದಲ್ಲಿಯೇ ಇದ್ದ ಹತ್ತಿರದಲ್ಲೇ ಇದ್ದ ಅಂಗಡಿಯೊಂದರಿಂದ ಪೂಜಾ ಸಾಮಗ್ರಿ ತೆಗೆದುಕೊಂಡು ಹೋಗಿದ್ದಾರೆ. ನಂತರ ದೇವರ ದರ್ಶನ ಮಾಡಿಕೊಂಡು ಹೊರಗೆ ಬಂದು ನೋಡಿದಾಗ ಅವರ ಚಪ್ಪಲಿ ಕಣ್ಮರೆಗಳಾಗಿವೆ. ಆಗ ಅವರು ಹುಡುಕಾಟ ನಡೆಸಿದರೂ ಅವರ ಚಪ್ಪಲಿ ಸಿಕ್ಕಿಲ್ಲ. ಹೀಗಾಗಿ ಕಾಂತಿಲಾಲ್ ಪೊಲೀಸರ ಬಳಿ ಹೋಗಿದ್ದಾರೆ. ನನ್ನ ಚಪ್ಪಲಿ ಕಾಣೆಯಾಗಿದೆ ಎಂದು ಇ-ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡ ದೂರು ಸ್ವೀಕರಿಸಿ ಎಫ್ಆರ್ ದಾಖಲಿಸಿಕೊಂಡಿದ್ದಾರೆ.