ಅಫ್ಗಾನ್ ನಲ್ಲಿ ನರಕ : ‘ಮೃಗಗಳ’ ಅಟ್ಟಹಾಸ , ಮುಸ್ಲಿಂ ರಾಷ್ಟ್ರಕ್ಕೆ ಬೆಂಬಲ ಎಂದ ಇಮ್ರಾನ್ ಸಹೇಬ್ರು ಮಾತಾಡುತ್ತಿಲ್ಲ ಯಾಕೆ..?
ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನರು ಉಗ್ರರೇ ಅಲ್ಲ ಪಾಪ ಸಾಮಾನ್ಯ ನಾಗರಿಕರು ಎಂದಿದ್ರು ಈ ಹಿಂದೆ ಪಾಕ್ ನ ಪ್ರದಾನಿ ಇಮ್ರಾನ್ ಸಾಹೇಬ್ರು.. ಇದೀಗ ಅಫ್ಗಾನ್ ನಲ್ಲಿ ಉಗ್ರರ ಸರ್ಕಾರ ರಚನೆಯಾಗಿದೆ.. ಪರೋಕ್ಷವಾಗಿ ತಾಲೀಬಾನಿಗಳನ್ನ ಕಪಟಿ ಚೀನಾ , ಉಗ್ರರ ಡ್ಯಾಡಿ ಪಾಕಿಸ್ತಾನ ಬೆಂಬಲಿಸಿವೆ.. ತಮ್ಮ ದೇಶದ ಜನ ಬಿಕಾರಿಯಾದ್ರೂ ಪರವಾಗಿಲ್ಲ ಉಗ್ರರು ಚನ್ನಾಗಿದ್ರೆ ಸಾಕು ಅನ್ನೋದು ಪಾಕಿಸ್ತಾನದ ಧ್ಯೇಯೋದ್ದೇಶ.. ಅದಕ್ಕೆ ನೋಡಿ ತಮ್ಮ ದೇಶ ಬಿಕಾರಿಯಾದ್ರೂ ತನ್ನ ಡ್ಯಾಡಿ ಚೀನಾ ಬಳಿ ಕೈ ಕಾಲಿಡಿದು ಸಾಲ ಸೂಲ ಮಾಡಿ ಉಗ್ರರ ಪೋಷಣೆ ಮಾಡುತ್ತಿದೆ.. ಆದ್ರೆ ಮುಸ್ಲಿಂ ರಾಷ್ಟ್ರಗಳಿಗೆ ತಮ್ಮ ಬೆಂಬಲ ಅನ್ನೋ ಮಾನ್ಯ ಇಮ್ರಾನ್ ಖಾನ್ ಅವರು ಮುಸ್ಲಿಂ ರಾಷ್ಟ್ರದ ಜನರಿಗೆ ತಾಲೀಬಾನಿಗಳು ನರಕ ದರ್ಶನ ಮಾಡಿಸುತ್ತಿದ್ರು ತುಟಿ ಬಿಚ್ಚದೇ ಮೌನ ವಹಿಸಿದ್ದಾರೆ.. ಬದಲಾಗಿ ತಾಲಿಬಾನಿಗಳ ವಿಜಯದಲ್ಲಿ ಗೆಲುವಿನ ನಗೆ ಬೀರುತ್ತಿದ್ದಾರೆ..
20 ವರ್ಷಗಳ ಬಳಿಕ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಪತ್ಯ ಸಾಧಿಸಿದ್ದು, ಇತಿಹಾಸ ಕಂಡರಿಯದ ದುರಂತಗಳಿಗೆ ಅಲ್ಲಿನ ಜನರು ಸಾಕ್ಷಿಯಾಗುತ್ತಿದ್ದಾರೆ. ಅಲ್ಲಿನ ಜನರು ಪ್ರಾಣ ಭಯದಿಂದ ಬೇರೆ ದೇಶಗಳತ್ತ ಓಡುತ್ತಿದ್ದಾರೆ. ಈ ಮಧ್ಯೆ ಅಫ್ಘಾನ್ ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಇದೀಗ ಸ್ವದೇಶಕ್ಕೆ ಕರೆತರಲಾಗಿದೆ. ಕಾಬೂಲ್ನಲ್ಲಿದ್ದ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಐಟಿಬಿಪಿ ಸಿಬ್ಬಂದಿ ಸೇರಿದಂತೆ 120 ಮಂದಿ ಭಾರತೀಯರನ್ನು ಭಾರತೀಯ ವಾಯುಪಡೆ ತನ್ನ ಸಿ -17 ವಿಮಾನದಲ್ಲಿ ದೇಶಕ್ಕೆ ಕರೆತಂದಿದೆ. ಬುಕ್ ನಲ್ಲಿ ತಾಲಿಬಾನ್ ಬ್ಯಾನ್ ಆಗಿದೆ. ತಾಲಿಬಾನ್ ಅನ್ನು ಉಗ್ರ ಸಂಘಟನೆಯಾಗಿ ಗುರುತಿಸಿ, ಅದಕ್ಕೆ ಸಂಬಂಧಪಟ್ಟಂತಹ ಎಲ್ಲಾ ರೀತಿಯ ಮಾಹಿತಿ ಸಮಾಚಾರವನ್ನು ಬ್ಯಾನ್ ಮಾಡಲಾಗಿದೆ.
ಈ ಮಧ್ಯೆ ಕಾಬೂಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದ ತಾಲಿಬಾನ್ ಇದೀಗ ಮಹತ್ವದ ಪ್ರಕಟಣೆಯೊಂದು ಘೋಷಣೆ ಮಾಡಿದ್ದು, ಸರ್ಕಾರಿ ಉದ್ಯೋಗಿಗಳು ಕೆಲಸಕ್ಕೆ ಮರಳುವಂತೆ ಮನವಿ ಮಾಡಿದೆ. ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಕೆಲವು ವಿದ್ಯಾಮಾನಗಳ ಬಗ್ಗೆ ಕ್ಷಮೆ ಇರಲಿ, ಎಲ್ಲರನ್ನೂ ಕ್ಷಮೆ ಕೇಳುತ್ತೇವೆ. ನೀವು ನಿಮ್ಮ ದಿನನಿತ್ಯದ ಜೀವನವನ್ನು ಪ್ರಾರಂಭಿಸಬೇಕು. ಪ್ರತಿದಿನದ ಜೀವನದಂತೆ ಮತ್ತೆ ನಿಮ್ಮ ಜೀವನ ಪ್ರಾರಂಭ ಮಾಡಿ, ಸರ್ಕಾರಿ ಉದ್ಯೋಗಿಗಳು ಮತ್ತೆ ತಮ್ಮ ಕೆಲಸಕ್ಕೆ ಮರಳುವಂತೆ ಮನವಿ ಮಾಡಿಕೊಂಡಿದೆ. 
ಯುದ್ಧ ಪೀಡಿತ ಅಫಗಾನಿಸ್ತಾನದಿಂದ ಅಮೆರಿಕಾ ತನ್ನ ಸೇನೆ ಹಿಂಪಡೆಯುತ್ತಿದ್ದಂತೆ ಬಾಲ ಮುದುರಿಕೊಂಡಿದ್ದ ತಾಲೀಬಾನಿ ಉಗ್ರರು ಬಿಲಗಳಿಂದ ಹೊರಬಂದು ತಮ್ಮ ಅಟ್ಟಹಾಸ ಮುಂದುವರೆಸಿ ಕಡೆಗೂ ಅಪ್ಗಾನ್ ನಲ್ಲಿ ಉಗ್ರ ಸಂಘಟನೆ ರಚನೆ ಮಾಡಿಯೇ ಬಿಟ್ಟಿದ್ದಾರೆ.. ಆದ್ರೆ ಅಲ್ಲಿನ ಮಹಿಳೆಯರಿಗೆ ಇನ್ಮುಂದೆ ಕರಾಳ ದಿನಗಳು ಶುರುವಾಗಿದೆ.. ಸ್ವಾತಂತ್ರ್ಯವಿಲ್ಲದೇ , ಹೊರಗಡೆ ಒಬ್ಬರೇ ಓಡಾಡೋಕು ಇನ್ನೊಬ್ಬರ ಜೊತೆಯೇ ಹೋಗುವಂತಹ ಪರಿಸ್ಥಿತಿ ತಂದಿಟ್ಟಿದ್ದಾರೆ ತಾಲೀಬಾನಿ ಉಗ್ರರು.. ಮತ್ತೆ ಮೇಲ್ನೋಟಕ್ಕೆ ನಾವು ಮಹಿಳೆಯರನ್ನ ಗೌರವಿಸುತ್ತೇವೆ ಎನ್ನುವ ತಾಲೀಬಾನಿಗಳು ಮಹಿಳೆಯರಿಗೆ ಚಿತ್ರ ಹಿಂಸೆ ನೀಡುವುದನ್ನೇ ಗೌರವ ಎಂದು ಕರೆಯುತ್ತಿದ್ದಾರೆ..
ತಾಲಿಬಾನ್ ಆಕ್ರಮಿತ ಆಫ್ಘಾನಿಸ್ತಾನದಲ್ಲಿ ದೇಶ ಬಿಟ್ಟು ಪಲಾಯನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಭಾನುವಾರದಿಂದ ಆರಂಭವಾದ ಈ ಬೆಳವಣಿಗೆ ಇಂದಿಗೂ ಕಡಿಮೆಯಾಗಿಲ್ಲ. ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಮಂದಿ ವಿಮಾನ ನಿಲ್ದಾಣಗಳಿಗೆ ಆಗಮಿಸುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿಗೆ ವೀಸಾ ಮತ್ತು ಪಾಸ್ಪೋರ್ಟ್ ಇಲ್ಲ. ಯಾವ ದಾಖಲೆ ಇಲ್ಲದೆ ಇದ್ದರೂ ಬೇರೆ ದೇಶಕ್ಕೆ ಹೋಗ ಬಹುದು ಎಂಬ ವದ್ಧಂತಿಗಳು ಹರಡಿವೆ. ಅದನ್ನು ನಂಬಿ ಬಹಳಷ್ಟು ಮಂದಿ ವಿಮಾನ ನಿಲ್ದಾಣಗಳಿಗೆ ಆಗಮಿಸುತ್ತಿದ್ದಾರೆ. ಸ್ಥಳೀಯವಾಗಿ ನೂಕುನುಗ್ಗಲಿನಲ್ಲಿ ಬಸ್ ಹತ್ತುವಂತೆ ನಿಂತಿದ್ದ ವಿಮಾಣಗಳಿಗೆ ತುಂಬಿಕೊಳ್ಳುತ್ತಿದ್ದಾರೆ. ಭಾನುವಾರ ರಾತ್ರಿಯಿಂದಲೇ ಆಫ್ಘಾನಿಸ್ತಾನದಲ್ಲಿ ಅಂತರರಾಷ್ಟ್ರೀಯ ಎಲ್ಲಾ ವಿಮಾನ ಸಂಚಾರಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಇತ್ತ ಆಫ್ಘಾನ್ ಬಾವುಟ ಹಿಡಿದು ಪ್ರತಿಭಟಿಸುತ್ತಿದ್ದ ಇಬ್ಬರು ಪ್ರತಿಭಟನಾಕಾರರನ್ನು ತಾಲಿಬಾನ್ ಬಂಡುಕೋರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ಘಟನೆ ಆಫ್ಘಾನ್ನ ಜಲಾಲಬಾದ್ನಲ್ಲಿ ನಡೆದಿದ್ದು, ಡಜನ್ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಪ್ರತಿಭಟನಾಕಾರರು ಆಫ್ಘಾನ್ ಬಾವುಟ ಹಿಡಿದು ತಾಲಿಬಾನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ತಾಲಿಬಾನಿಗಳು ಆಫ್ಘಾನ್ ಬಾವುಟವನ್ನು ಕಿತ್ತೆಸೆದು ತಾಲಿಬಾನ್ ಬಾವುಟವನ್ನು ಹಾರಿಸಿದ್ದು, ಮತ್ತೆ ಆಫ್ಘಾನ್ ಬಾವುಟವನ್ನು ಮರುಸ್ಥಾಪಿಸಿ ಎಂದು ಒಂದು ಗುಂಪು ಪ್ರತಿಭಟನೆ ನಡೆಸುವಾಗ ತಾಲಿಬಾನಿಗಳು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ತಾಲಿಬಾನಿಗಳ ಆಡಳಿತ ಆರಂಭಗೊಂಡ ಬಳಿಕ ಮೊದಲ ಬಾರಿಗೆ ಮಾಧ್ಯಮಗೋಷ್ಠಿ ನಡೆಸಿದ ತಾಲಿಬಾನ್ ತಾನು ಬದಲಾಗಿದ್ದು, ಎಲ್ಲರನ್ನೂ ಕ್ಷಮಿಸಿದ್ದಾಗಿ ಹೇಳಿಕೊಂಡಿದೆ. ಅಲ್ಲದೇ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹೀದ್ ಮಹಿಳೆಯರ ಹಕ್ಕುಗಳನ್ನು ರಕ್ಷಣೆ ಮಾಡಲಿದ್ದೇವೆ ಎಂದು ಹೇಳಿದ್ದಾನೆ. ಆದರೆ ಅದು ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ ಎಂದು ಸ್ಪಷ್ಟಪಡಿಸಿದ್ದಾನೆ. ಅವಿವಾಹಿತ ಮಹಿಳೆಯರು ಉಗ್ರರನ್ನ ಮದುವೆಯಾಗುವಂತೆ ಒತ್ತಡ ಹೇರ್ತಿದ್ದಾರೆ.. ಈ ಹಿಂದೆ 21 ವರ್ಷದ ಯುವತಿ ಬಿಗಿ ಬುರ್ಖಾ ಹಾಕಿದ್ದ ಕಾರಣಕ್ಕೆ ಆಕೆಗೆ ಗುಂಡಿಟ್ಟು ಕೊಂದಿದ್ದರು ಪಾಪಿಗಳು.. ಇದರ ಜೊತೆಗೆ ಲೈಂಗಿಕ ಕಿರುಕುಳ , ಮಹಿಳೆಯರಿಗೆ ಹಿಂಸೆ ಸಹ ನೀಡಿರುವುದು ವರದಿಯಾಗಿದೆ.
ಅಫ್ಘಾನಿಸ್ತಾನದಲ್ಲಿ ತಾಲೀಬಾನಿಗಳ ಅಟ್ಟಹಾಸ: ಚೀನಾ – ಪಾಕಿಸ್ತಾನ ಪರೋಕ್ಷ ಬೆಂಬಲ , ಭಾರತದ ವಿರುದ್ಧ ರಣತಂತ್ರ..!








