Amulya
ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಇಂದು ಮುಂಜಾನೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಮುಂಜಾನೆಯಿಂದಲೇ ಜನರು ಮತಗಟ್ಟೆಗಳತ್ತ ಧಾವಿಸಿ ಮತದಾನ ಮಾಡುತ್ತಿದ್ದಾರೆ. ಅದರಂತೆ ಸ್ಯಾಂಡಲ್ ವುಡ್ ನಟಿ ಅಮೂಲ್ಯ ಸಹ ಇಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಇದನ್ನೂ ಓದಿ : ಸ್ಯಾನಿಟೈಸರ್ ಬಾಟಲ್ ಮೇಲೆ ಬಿಜೆಪಿ ಅಭ್ಯರ್ಥಿ ಚಿತ್ರ
ಪತಿ ಜಗದೀಶ್ ಹಾಗೂ ಅತ್ತೆ-ಮಾವನ ಜೊತೆಗೆ ಮತಗಟ್ಟೆಗೆ ಆಗಮಿಸಿ ಕುಟುಂಬ ಸಮೇತ ಮತದಾನ ಮಾಡಿದ್ದಾರೆ. ನಂತರ ಈ ಬಗ್ಗೆ ಮಾತನಾಡಿದ ಅಮೂಲ್ಯ ”ಎಲ್ಲರೂ ಮತದಾನ ಹಕ್ಕನ್ನು ಚಲಾಯಿಸಿ. ಕೊರೊನಾ ವೈರಸ್ ಭೀತಿಯಿಂದ ಮತದಾನ ಮಾಡುವುದು ಕಳೆದುಕೊಳ್ಳಬೇಡಿ. ಚುನಾವಣ ಆಯೋಗ ಎಲ್ಲ ರೀತಿಯ ಮುಂಜಾಗೃತೆ ವಹಿಸಿದೆ, ಧೈರ್ಯವಾಗಿ ಬಂದ ಮತದಾನ ಮಾಡಬಹುದು ” ಎಂದು ಕರೆ ಕೊಟ್ಟರು. ಬಿಜೆಪಿ ಕಾರ್ಯಕರ್ತೆಯಾಗಿರುವ ಅಮೂಲ್ಯ ಅವರು ಇತ್ತೀಚೆಗೆ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರೊಂದಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಭರ್ಜರಿ ಪ್ರಚಾರ ನಡೆಸಿದ್ರು. ಬೃಹತ್ ರೋಡ್ ಶೋ ಮೂಲಕ ಮತಬೇಟೆ ನಡೆಸಿದ್ದರು.
Amulya
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel