ಕೋಲಾರ : ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಟೊಮೆಟೋ ದರ ಗಗನಕ್ಕೆ ಏರಿಕೆ ಕಂಡಿದೆ. ಇದು ರೈತರ ಸಂತಸಕ್ಕೆ ಇದು ಕಾರಣವಾಗಿದೆ.
ಪ್ರತಿ ವರ್ಷ ರಸ್ತೆಗೆ ಟೊಮೆಟೋ ಸುರಿಯುತ್ತಿದ್ದ ರೈತರು, ಸದ್ಯ ಟೊಮೆಟೋ ಕಾಯುವ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಬೆಲೆ ಬಂದಿರುವುದರಿಂದ ಟೊಮೆಟೋ ಕಳ್ಳರ ಹಾವಳಿ ಕೂಡ ಹೆಚ್ಚಾಗುತ್ತಿದೆ. ಇದರ ನಡುವೆ ಟೊಮೆಟೋ ತುಂಬಿಕೊಂಡು ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಲಾರಿ ತೆಲಂಗಾಣದಲ್ಲಿ ಪಲ್ಟಿಯಾಗಿದ್ದು, ಟೊಮೆಟೋ ಲಾರಿಗೆ ಪೊಲೀಸರು ರಕ್ಷಣೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ತುಂಬಿಸಿಕೊಂಡು ಹೊರಟಿದ್ದು, ತೆಲಂಗಾಣದ ಆದಿಲ್ ಬಾದ್ ಜಿಲ್ಲೆಯಲ್ಲಿ ಮುಗುಚಿ ಬಿದ್ದಿದೆ. ಹೀಗಾಗಿ ಟೊಮೆಟೋ ಕಳ್ಳರಿಂದ ರಕ್ಷಣೆ ನೀಡಲು ಮೂವರು ಪೊಲೀಸರನ್ನು ತೆಲಂಗಾಣ ಪೊಲೀಸ್ ಇಲಾಖೆ ನಿಯೋಜಿಸಿತ್ತು.