ಅಧ್ಯಕ್ಷ ಹುದ್ದೆಯೂ ಹೋಯ್ತು, ಈಗ ಸಿಎಂ ಕುರ್ಚಿಗೂ ಕಂಟಕ ತಂದಿಟ್ಟುಕೊಂಡ ಗೆಹ್ಲೋಟ್…
ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಶೋಕ್ ಗೆಹ್ಲೋಟ್ (Ashok Gehlot) ಕೈಯಿಂದ ಜಾರಿ ಹೋಗಿದೆ. ಆದರೆ, ಈಗ ರಾಜಸ್ಥಾನ ಸಿಎಂ ಮೇಲೆಯೂ ಅನುಮಾನ ಮೂಡಿದೆ. ಇನ್ನು ಎರಡು ದಿನದಲ್ಲಿ ರಾಜಸ್ಥಾನ ಸಿಎಂ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. ಈ ಬಗ್ಗೆ ಸೋನಿಯಾ ಗಾಂಧಿ ನಿರ್ಧಾರ ಕೈಗೊಳ್ಳಲಿದ್ದಾರೆ.
ವೇಣುಗೋಪಾಲ್ ಕೂಡ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. ನಾಳೆ ಸಂಜೆಯವರೆಗೂ ಕಾಯಿರಿ, ಕೊನೆಯ ಹೆಸರುಗಳ ಪಟ್ಟಿ ನಿಮ್ಮ ಮುಂದೆ ಇರುತ್ತದೆ ಎಂದು ಹೇಳಿದ್ದಾರೆ. ಗೆಹ್ಲೋಟ್ ಬೆಂಬಲಿಗರ ವರ್ತನೆಯಿಂದ ಹೈಕಮಾಂಡ್ ಅಸಮಾಧಾನಗೊಂಡಿದೆ ಎಂದು ಕಾಂಗ್ರೆಸ್ ಮೂಲಗಳು ನಂಬಿವೆ. ಸೋನಿಯಾ ಗಾಂಧಿಯವರಲ್ಲಿ ಅಶೋಕ್ ಗೆಹ್ಲೋಟ್ ಕ್ಷಮೆಯಾಚಿಸಿದರೂ ಪ್ರಯೋಜನವಾಗಿಲ್ಲ ಎಂದು ತೋರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಚಿನ್ ಪೈಲಟ್ ಇನ್ನೂ ಸಿ ಎಂ ರೇಸ್ ನಲ್ಲಿದ್ದಾರೆ. ಇನ್ನೆರಡು ದಿನಗಳಲ್ಲಿ ರಾಜಸ್ಥಾನದ ರಾಜಕೀಯ ಬೆಳವಣಿಗೆಗಳು ಕುತೂಹಲಕಾರಿಯಾಗಲಿವೆ.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಸಮಯ ಸಿಕ್ಕಿರಲಿಲ್ಲ. ಸಿಕ್ಕರೂ ಸಭೆಯಲ್ಲಿ ವಿಶೇಷವೇನೂ ನಡೆದಿಲ್ಲ. ಕಾರಣ- ಅಶೋಕ್ ಗೆಹ್ಲೋಟ್ ಪತ್ರಿಕಾಗೋಷ್ಠಿಯಲ್ಲಿ ತುಂಬಾ ಅಸಮಾಧಾನಗೊಂಡಿದ್ದರು. ರಾಜಸ್ಥಾನದಲ್ಲಿ ಭಾನುವಾರ ನಡೆದ ಘಟನೆ ನಡೆಯಬಾರದಿತ್ತು ಎಂದು ಒಪ್ಪಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅನುಪಸ್ಥಿತಿಯ ನಂತರ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ತುಂಬಲು ಬಯಸಿದ್ದರು, ಆದರೆ ಈಗ ಅವರು ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಗೆಹ್ಲೋಟ್ ಹೇಳಿದರು. ಅದೇ ಸಮಯದಲ್ಲಿ, ರಾಜಸ್ಥಾನ ಸಿಎಂ ಹುದ್ದೆಯಲ್ಲಿ ಮುಂದುವರಿಯುವ ಪ್ರಶ್ನೆಗೆ, ಸೋನಿಯಾ ಗಾಂಧಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಗೆಹ್ಲೋಟ್ ಹೇಳಿದರು.
Ashok Gehlot’s CM chair also started shaking, Sonia Gandhi will take decision in two days; KC Venugopal says








