attempted murder-ಒಂದೇ ಮನೆಯವರಂತೆ ಆಪ್ತವಾಗಿದ್ದ ಉತ್ತಮ್ಮ ಸ್ನೇಹಿತರಿಭ್ಬರು ಭೀಕರವಾಗಿ ಚಾಕುವಿನಿಂದ ಹೋಡೆದಾಡಿಕೊಂಡ ಘಟನೆಯೋಂದು ಬೆಳಕಿಗೆ ಬಂದಿದೆ .
ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ಗಾಂಧಿಸರ್ಕಲ್ ಬಳಿ ರಾಮು ಎಂಬ ಪಾರಿವಾಳ ಸಾಕುವ ಹವ್ಯಾಸ ಒಬ್ಬರು ವಾಸವಾಗಿದ್ದು ಇವರು ಪಾರಿವಾಳಗಳನ್ನು ಸಾಕುವುದು ಹಾಗೂ ಅದರ ಟೂರ್ನಾಮೆಂಟ್ಗಳನ್ನ ಆಯೋಜನೆ ಮಾಡುವ ಕಾಯಕ ಮಾಡುತ್ತಾರೆ .
ಇದೇ ಏರಿಯಾದಲ್ಲಿನ ಇಮ್ರಾನ್ ಖಾನ್ ಎಂಬುವವನು ರಾಮುವಿನೋಂದಿಗೆ ಪೇಂಟ್ ಮಾಡುವ ಕೆಲಸಕ್ಕೆ ಹೋಗುತ್ತಿದ್ದ,ಈ ರೀತಿಯಾಗಿ ಆಪ್ತವಾದ ಇಮ್ರಾನ್ ಖಾನ್ ಕಳೆದ ಕೆಲವು ದಿನಗಳ ಹಿಂದೆ ಎರಡು ಪಾರಿವಾಳಗಳನ್ನು ಸಾಕಿಕೊಡುವಂತೆ ರಾಮುಗೆ ನೀಡಿದ್ದಾನೆ .
ಆದರೆ ಕ್ಷುಲ್ಲಕ್ ಕಾರಣಕ್ಕೆ ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ರಾಮು ಮನೆಗೆ ಬಂದ ಇಮ್ರಾನ್ಖಾನ್ ತನ್ನ ಪಾರಿವಾಳಗಳನ್ನು ಮರಳಿ ಕೊಡುವಂತೆ ಒತ್ತಾಯ ಮಾಡಿದ್ದಾನೆ.
ಈ ಸಂದರ್ಭದಲ್ಲಿ ರಾಮು ಸಂಜೆ ಸಮಯದಲ್ಲಿ ನಾನು ಪಾರಿವಾಳ ಕೊಡುವುದಿಲ್ಲ ಬೆಳಿಗ್ಗೆ ಬಾ ಕೊಡ್ತೀನಿ ಎಂದು ಹೇಳಿದ್ದಾನೆ. ಈ ವಿಚಾರವಾಗಿ ಇಮ್ರಾನ್ ಖಾನ್ ರಾಮುವಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ .
ಇದನ್ರಾನು ಕೇಳಿಸಿಕೊಂಡ ರಾಮು ಅಣ್ಣ ನಾಗರಾಜ್ ಹೊರಬಂದು ಇಮ್ರಾನ್ ತಿರುಗಿ ಬೈದಿದ್ದಾರೆ. ಗಾಂಜಾ ಹಾಗೂ ಕುಡಿದ ಮತ್ತಿನಲ್ಲಿದ್ದ ಇಮ್ರಾನ್ ಏಕಾಏಕಿ ನಾಗರಾಜ್ ಮೇಲೆ ಚಾಕುವಿನಿಂದ ಮನ ಬಂದಂತೆ ಹಲ್ಲೆ ಮಾಡಿದ್ದಾನೆ.
ಈ ಗಲಾಟೆಯಲ್ಲಿ ಕುಸಿದು ಬಿದ್ದ ನಾಗರಾಜ್ನ ಕಂಡ ರಾಮು, ರಾಮು ಪತ್ನಿ, ಮಕ್ಕಳು, ನಾಗರಾಜ್ ಮಕ್ಕಳು ಎಲ್ಲರೂ ಓಡಿ ಬಂದು ನಾಗರಾಜ್ರನ್ನು ಜಗಳದಿಂದ ಬಿಡಿಸಲು ಬಂದಿದ್ದಾರೆ.
ಮೈ ಮೇಲೆ ಪ್ರಜ್ಞೆ ಇಲ್ಲದ ಇಮ್ರಾನ್ ಯಾರನ್ನೂ ನೋಡದೆ ಮಹಿಳೆಯರು ಮಕ್ಕಳು ಎಲ್ಲರ ಮೇಲೂ ಚಾಕುವಿನಿಂದ ಹಲ್ಲೆ ಮಾಡಿ ಅಲ್ಲಿಂದ ಕಾಲ್ಕಿತದ್ತಿದ್ದಾನೆ.
ಇತ್ತ ಕ್ಷಣಗಳಲ್ಲೆ ಮನೆಯ ಮಂದಿ ನಾಗರಾಜ್, ರಾಮು, ರಾಜೇಶ್ವರಿ, ನಾಗವೇಣಿ, ಚಂದ್ರಕಲಾ, ಕಲ್ಯಾಣಿ ಹೀಗೆ ಸಿಕ್ಕ ಸಿಕ್ಕವರ ಮೇಲೆಲ್ಲಾ ಇಮ್ರಾನ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ನಾಗರಾಜ್ ಗೆ ಮುಖ ಮತ್ತು ಎದೆಯ ಬಾಗದಲ್ಲಿ ಗಂಭೀರ ಗಾಯವಾಗಿದೆ . ಜಗಳ ಬಿಡಿಸಲು ಬಂದ ಇಬ್ಬರು ಹೆಣ್ಣು ಮಕ್ಕಳಿಗೂ ಗಂಭೀರ ಗಾಯಗಳಾಗಿವೆ .
ನಿನ್ನೆ ಗ್ರಹಣದ ವೇಳೆ ಕರೆಂಟ್ ಇಲ್ಲದ ಸಂದರ್ ದಲ್ಲಿ ಈ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಕಲಿಸಲಾಗಿದ್ದು . ಮಾಲೂರು ಪೊಲೀಸ ಠಾಣೆಯಲ್ಲಿ ದೂರು ಧಾಕಲಿಸಲಾಗಿದೆ . ಪ್ರಕರ್ಣದಾಖಲಿಸಿಕೋಂಡು ತಕ್ಷಣ ಸ್ಥಳಕ್ಕೆ ಬಂದ ಮಾಲೂರು ಪೊಲೀಸರು ಆರೋಪಿ ಇಮ್ರಾನ್ನ್ನು ಬಂಧಿಸಿದ್ದಾರೆ.








