ADVERTISEMENT
Saturday, September 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹಿತಶತ್ರುಗಳ ವಿರುದ್ಧ “ಬಿಎಸ್ ವೈ ಕಟೀಲಾಸ್ತ್ರ” : ಆಡಿಯೋ ಮರ್ಮಾ.. ಕಾವಿ ಗುರಾಣಿ

Mahesh M Dhandu by Mahesh M Dhandu
July 20, 2021
in Newsbeat, Saaksha Special, ಎಸ್ ಸ್ಪೆಷಲ್
B S Yediyurappa Saakshatv
Share on FacebookShare on TwitterShare on WhatsappShare on Telegram

ಹಿತಶತ್ರುಗಳ ವಿರುದ್ಧ “ಬಿಎಸ್ ವೈ ಕಟೀಲಾಸ್ತ್ರ” : ಆಡಿಯೋ ಮರ್ಮಾ.. ಕಾವಿ ಗುರಾಣಿ

ನಾಯಕತ್ವ ಬದಲಾವಣೆ ವಿಚಾರ ರಾಜ್ಯದಲ್ಲಿ ಬೆಂಕಿ ಬಿರುಗಾಳಿಯನ್ನು ಎಬ್ಬಿಸಿದೆ. ಜುಲೈ 26ಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಕೆಳಗಿಳಿಯುತ್ತಾರೆ ಅನ್ನೋ ಸುದ್ದಿ ರಾಜ್ಯದಲ್ಲಿ ಸಂಚಲನ ಸೃಷ್ಠಿ ಮಾಡಿದೆ. ಮೇಲ್ನೊಟಕ್ಕೆ ಹೈಕಮಾಂಡ್ ನ ನಿರ್ಧಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಲೆ ಬಾಗಿದ್ದಾರೆ ಎಂದು ಕಾಣುತ್ತಿದ್ದರೂ, ಕಾವಿ ಗುರಾಣಿ ಮೂಲಕ ರಾಜಕೀಯ ಆಟ ಶುರು ಮಾಡಿದ್ದಾರೆ.

Related posts

ಸರ್ಕಾರಕ್ಕೆ ಅನುಪಮಾ ಶೆಣೈ ಹೊಸ ಸವಾಲು ನಾನೂ ಗಣಪತಿ ಚಳವಳಿಗೆ ಅಖಾಡ ಸಿದ್ಧ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಸರಸಂಘಚಾಲಕರಾಗಲಿ ಅನುಪಮಾ ಶೆಣೈ ವ್ಯಂಗ್ಯದ ಗುದ್ದು

ಸರ್ಕಾರಕ್ಕೆ ಅನುಪಮಾ ಶೆಣೈ ಹೊಸ ಸವಾಲು ನಾನೂ ಗಣಪತಿ ಚಳವಳಿಗೆ ಅಖಾಡ ಸಿದ್ಧ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಸರಸಂಘಚಾಲಕರಾಗಲಿ ಅನುಪಮಾ ಶೆಣೈ ವ್ಯಂಗ್ಯದ ಗುದ್ದು

September 12, 2026
ಬ್ರಿಕ್ಸ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗ ಚಿದಂಬರಂ ಮತ್ತು ಶಶಿ ತರೂರ್ ನಡುವೆ ಶುರುವಾಯ್ತು ಶೀತಲ ಸಮರ- ಕಾಂಗ್ರೆಸ್ ಸದಾ ಅಸಮಾಧಾನಿತ ಸಂಬಂಧಿಕರಂತೆ ವರ್ತಿಸುತ್ತಿದೆ ಬಿಜೆಪಿ ವ್ಯಂಗ್ಯ

ಬ್ರಿಕ್ಸ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗ ಚಿದಂಬರಂ ಮತ್ತು ಶಶಿ ತರೂರ್ ನಡುವೆ ಶುರುವಾಯ್ತು ಶೀತಲ ಸಮರ- ಕಾಂಗ್ರೆಸ್ ಸದಾ ಅಸಮಾಧಾನಿತ ಸಂಬಂಧಿಕರಂತೆ ವರ್ತಿಸುತ್ತಿದೆ ಬಿಜೆಪಿ ವ್ಯಂಗ್ಯ

September 12, 2026

ಹಿತಶತ್ರುಗಳ ವಿರುದ್ಧ “ಬಿಎಸ್ ವೈ ಕಟೀಲಾಸ್ತ್ರ”

ಹೌದು..! ಮುಖ್ಯಮಂತ್ರಿ ಬಿಎಸ್ ವೈ ದೆಹಲಿ ಪ್ರವಾಸ ಮುಗಿಸಿ ಬರುತ್ತಿದ್ದಂತೆ ನಾಯಕತ್ವ ಬದಲಾವಣೆ ವಿಚಾರಕ್ಕೆ ರೆಕ್ಕೆಪುಕ್ಕಗಳು ಬಂದಿವೆ. ಪಕ್ಷದ ಬಿಗ್ ಬಾಸ್ ಗಳು ಬಿ ಎಸ್ ಯಡಿಯೂರಪ್ಪ ಅವರನ್ನ ಕೆಳಗಿಳಿಸಲು ನಿರ್ಧರಿಸಿದ್ದು, ಇದಕ್ಕಾಗಿ ಬ್ಲೂ ಪ್ರಿಂಟ್ ರೆಡ್ಡಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನ ಅರಿತಿರುವ ಯಡಿಯೂರಪ್ಪ ಮೇಲ್ನೋಟಕ್ಕೆ ಹೈಕಮಾಂಡ್ ವಿಧೇಯನಾಗಿದ್ದುಕೊಂಡೇ ರಾಜಕೀಯ ದಾಳ ಉರುಳಿಸಿದ್ದಾರಾ..? ಅನ್ನೋ ಪ್ರಶ್ನೆ ಈಗ ಉದ್ಭವವಾಗಿದೆ. ಯಾಕಂದ್ರೆ ಸದ್ಯ ಚರ್ಚೆಗೆ ಕಾರಣವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋ ಹಿಂದೆ ಬಿಎಸ್ ವೈ ರಾಜಕೀಯ ತಂತ್ರ ಇದ್ಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

B S Yediyurappa Saaksha tv

ಕಟೀಲ್ ಆಡಿಯೋದಲ್ಲಿ ಶೆಟ್ಟರ್, ಈಶ್ವರಪ್ಪ ಟೀಂ ಅನ್ನು ಗುರಿಯಾಗಿಸಿಕೊಂಡು ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ. ಇದು ಅನುಮಾನಕ್ಕೆ ಕಾರಣವಾಗಿದ್ದು, ಸಿಎಂ ಬದಲಾವಣೆ ಮಾಡೋದಾದ್ರೆ ಶೆಟ್ಟರ್, ಈಶ್ವರಪ್ಪಗೆ ಯಾಕೆ ಕೋಕ್ ಕೊಡಬೇಕು..? ಅದರಲ್ಲೂ ಶೆಟ್ಟರ್, ಈಶ್ವರಪ್ಪ ಅವರ ಪಕ್ಷ ನಿಷ್ಠೆಯಲ್ಲಿ ಯಾವುದೇ ಲೋಪವಿಲ್ಲ. ಪಕ್ಷ ಕಾಲಲ್ಲಿ ತೋರಿಸುವ ಕೆಲಸವನ್ನು ಈ ಇಬ್ಬರು ತಲೆ ಮೇಲೆ ಹೊತ್ತಿಕೊಂಡು ಮಾಡುತ್ತಾರೆ. ಇಂತಹ ನಾಯಕರ ಬಗ್ಗೆ ಕಟೀಲ್ ಮಾತನಾಡಿದ್ದೇಕೆ ಅನ್ನೋ ಪ್ರಶ್ನೆ ಸದ್ಯ ರಾಜಕೀಯ ಪಂಡಿತರಲ್ಲಿ ಕಾಡುತ್ತಿದೆ.

ಸಿಎಂ ಬದಲಾವಣೆಗೆ ಶೆಟ್ಟರ್, ಈಶ್ವರಪ್ಪ ಕುಮ್ಮಕ್ಕು

ಶೆಟ್ಟರ್, ಈಶ್ವರಪ್ಪ ಬಹಿರಂಗವಾಗಿ ಎಲ್ಲರೆದುರು ಬಿಎಸ್ ವೈಗೆ ಜೈ ಎನ್ನುತ್ತಿದ್ದರೂ ಅವರ ಕುರ್ಚಿ ಕೆಡವಲು ಈ ಇಬ್ಬರು ನಾಯಕರು ಪರೋಕ್ಷವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಎಂ ವಿರುದ್ಧ ಈಶ್ವರಪ್ಪಗೆ ಮುನಿಸಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇತ್ತ ಶೆಟ್ಟರ್ ಉತ್ತರ ಕರ್ನಾಟಕದವರಿಗೆ ಸಿಎಂ ಪಟ್ಟ ಸಿಗಬೇಕು ಅನ್ನೋ ಕಾರಣದಿಂದ ಬಿಎಸ್ ವೈ ಖೆಡ್ಡಾ ತೋಡುತ್ತಿದ್ದಾರೆ ಅನ್ನೋದು ಬಿಜೆಪಿ ಪಡಸಾಲೆಯಲ್ಲಿ ಸುತ್ತುತ್ತಿರುವ ಸುದ್ದಿ.

ಈ ಕಾರಣಕ್ಕಾಗಿ ಹಾಗೂ ಬಿಜೆಪಿ ಬಿಗ್ ಬಾಸ್ ಗಳಿಗೆ ತಮ್ಮ ತಾಕತ್ತು ತೋರಿಸಲು ಬಿಎಸ್ ಯಡಿಯೂರಪ್ಪ ಕಟೀಲಾಸ್ತ್ರ ಪ್ರಯೋಗಿಸಿದ್ದಾರಾ ಅನ್ನೋ ಪ್ರಶ್ನೆಗೆ ನಾಂದಿಯಾಡಿದೆ. ಯಾಕಂದ್ರೆ ಸಿಎಂ ದೆಹಲಿಯಿಂದ ಬರುತ್ತಿದ್ದಂತೆ ಕಟೀಲ್ ಆಡಿಯೋ ವೈರಲ್ ಆಯ್ತು. ಇದರ ಬೆನ್ನಲ್ಲೆ ಸಿಎಂ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಆದ್ರೂ ಬಿಎಸ್ ವೈ ಮಾತ್ರ ಎಲ್ಲೂ ತುಟಿ ಬಿಚ್ಚಿಲ್ಲ. ಇದಕ್ಕೆ ಕಾರಣವೇನು..?

ಕಟೀಲ್ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಲ್ಲ ಯಾಕೆ..? ಅನ್ನೋ ಪ್ರಶ್ನೆಯ ಜೊತೆಗೆ ಈ ಆಡಿಯೋವನ್ನು ಬಳಸಿಕೊಂಡು ತಮ್ಮ ವಿರೋಧಿಗಳಿಗೆ ಸಿಎಂ ಚೆಕ್ ಮೇಟ್ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮ್ಮ ಬತ್ತಳಿಕೆಯಲ್ಲಿದ್ದ ಕಾವಿ ಅಸ್ತ್ರವನ್ನು ಮುಂದೆ ಬಿಟ್ಟು ರಾಜಕೀಯ ತಂತ್ರ ರೂಪಿಸಿ, ಪಕ್ಷದ ಹೈಕಮಾಂಡ್ ಮತ್ತು ವಿರೋಧಿಗಳಿಗೆ ತಮ್ಮನ್ನ ಸಿಎಂ ಸ್ಥಾನದಿಂದ ಕೆಳಗಿಳಿಸೋದು ಸುಲಭವಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರಾ ಯಡಿಯೂರಪ್ಪ ಕುತೂಹಲಕಾರಿ ಪ್ರಶ್ನೆ ಕಾಡುತ್ತಿದೆ.

Tags: #Saaksha TVB.s YediyurappaBJPCongressKarnatakacmNalin Kumar Kateel
ShareTweetSendShare
Join us on:

Related Posts

ಸರ್ಕಾರಕ್ಕೆ ಅನುಪಮಾ ಶೆಣೈ ಹೊಸ ಸವಾಲು ನಾನೂ ಗಣಪತಿ ಚಳವಳಿಗೆ ಅಖಾಡ ಸಿದ್ಧ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಸರಸಂಘಚಾಲಕರಾಗಲಿ ಅನುಪಮಾ ಶೆಣೈ ವ್ಯಂಗ್ಯದ ಗುದ್ದು

ಸರ್ಕಾರಕ್ಕೆ ಅನುಪಮಾ ಶೆಣೈ ಹೊಸ ಸವಾಲು ನಾನೂ ಗಣಪತಿ ಚಳವಳಿಗೆ ಅಖಾಡ ಸಿದ್ಧ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ಸರಸಂಘಚಾಲಕರಾಗಲಿ ಅನುಪಮಾ ಶೆಣೈ ವ್ಯಂಗ್ಯದ ಗುದ್ದು

by Shwetha
September 12, 2026
0

ಬೆಂಗಳೂರು: ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಈಗ ಸರ್ಕಾರದ ವಿರುದ್ಧ ಮತ್ತೊಂದು ಸಮರಕ್ಕೆ ಸಿದ್ಧತೆ ನಡೆಸಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ವಿಚಾರ ಮತ್ತು ಸರ್ಕಾರಿ ನೌಕರರ ಹಿತರಕ್ಷಣೆಯನ್ನು...

ಬ್ರಿಕ್ಸ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗ ಚಿದಂಬರಂ ಮತ್ತು ಶಶಿ ತರೂರ್ ನಡುವೆ ಶುರುವಾಯ್ತು ಶೀತಲ ಸಮರ- ಕಾಂಗ್ರೆಸ್ ಸದಾ ಅಸಮಾಧಾನಿತ ಸಂಬಂಧಿಕರಂತೆ ವರ್ತಿಸುತ್ತಿದೆ ಬಿಜೆಪಿ ವ್ಯಂಗ್ಯ

ಬ್ರಿಕ್ಸ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗ ಚಿದಂಬರಂ ಮತ್ತು ಶಶಿ ತರೂರ್ ನಡುವೆ ಶುರುವಾಯ್ತು ಶೀತಲ ಸಮರ- ಕಾಂಗ್ರೆಸ್ ಸದಾ ಅಸಮಾಧಾನಿತ ಸಂಬಂಧಿಕರಂತೆ ವರ್ತಿಸುತ್ತಿದೆ ಬಿಜೆಪಿ ವ್ಯಂಗ್ಯ

by Shwetha
September 12, 2026
0

ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯು ಭಾರತದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ವಿಶೇಷವೆಂದರೆ, ಈ ಅಂತರಾಷ್ಟ್ರೀಯ ಮಟ್ಟದ ವಿಚಾರದಲ್ಲಿ ದೇಶದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್...

ನನಗಾದ ಅನ್ಯಾಯಕ್ಕೆ ನಾನೂ ಜಿರಳೆಯಾಗಬೇಕಿತ್ತೇ?ಸಾಲಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೂ ನನ್ನನ್ನು ದೇಶಭ್ರಷ್ಟ ಎನ್ನುವುದೇಕೆ? :ಭಾರತ ಸರ್ಕಾರದ ವಿರುದ್ಧ ವಿಜಯ್ ಮಲ್ಯ ಆಕ್ರೋಶ

ನನಗಾದ ಅನ್ಯಾಯಕ್ಕೆ ನಾನೂ ಜಿರಳೆಯಾಗಬೇಕಿತ್ತೇ?ಸಾಲಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೂ ನನ್ನನ್ನು ದೇಶಭ್ರಷ್ಟ ಎನ್ನುವುದೇಕೆ? :ಭಾರತ ಸರ್ಕಾರದ ವಿರುದ್ಧ ವಿಜಯ್ ಮಲ್ಯ ಆಕ್ರೋಶ

by Shwetha
September 12, 2026
0

ಸುಮಾರು 9,000 ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ, ಭಾರತೀಯ ತನಿಖಾ ಸಂಸ್ಥೆಗಳು...

ಪಂಚ ಗ್ಯಾರಂಟಿಗಳಲ್ಲಿ ನಾಲ್ಕು ನನ್ನ ಕಲ್ಪನೆ, ಅನ್ನಭಾಗ್ಯ ಮಾತ್ರ ಸಿದ್ದರಾಮಯ್ಯ ಅವರದ್ದು: ಸಿಎಂ ಡಿ.ಕೆ. ಶಿವಕುಮಾರ್

ಪಂಚ ಗ್ಯಾರಂಟಿಗಳಲ್ಲಿ ನಾಲ್ಕು ನನ್ನ ಕಲ್ಪನೆ, ಅನ್ನಭಾಗ್ಯ ಮಾತ್ರ ಸಿದ್ದರಾಮಯ್ಯ ಅವರದ್ದು: ಸಿಎಂ ಡಿ.ಕೆ. ಶಿವಕುಮಾರ್

by Shwetha
September 12, 2026
0

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಪಂಚ ಗ್ಯಾರಂಟಿಗಳ ಪೈಕಿ 10 ಕೆ.ಜಿ. ಅಕ್ಕಿ...

ಸರ್ಕಾರದ ನಿಲುವು ತಿಳಿಸಲು ಎಂಟು ಸಾರಥಿಗಳು ಸಚಿವ ಸಂಪುಟದ ಪ್ರಭಾವಿ ನಾಯಕರಿಗೆ ಹೊಸ ಜವಾಬ್ದಾರಿ

ಸರ್ಕಾರದ ನಿಲುವು ತಿಳಿಸಲು ಎಂಟು ಸಾರಥಿಗಳು ಸಚಿವ ಸಂಪುಟದ ಪ್ರಭಾವಿ ನಾಯಕರಿಗೆ ಹೊಸ ಜವಾಬ್ದಾರಿ

by Shwetha
September 12, 2026
0

ಮಾಧ್ಯಮಗಳು ಸೇರಿದಂತೆ ವಿವಿಧ ಸಾರ್ವಜನಿಕ ವೇದಿಕೆಗಳಲ್ಲಿ ರಾಜ್ಯ ಸರ್ಕಾರದ ನಿಲುವುಗಳನ್ನು ಸಮರ್ಥವಾಗಿ ಮಂಡಿಸಲು ಹಾಗೂ ಸರ್ಕಾರದ ಪರವಾಗಿ ಅಧಿಕೃತ ಸ್ಪಷ್ಟೀಕರಣ ನೀಡುವ ಮಹತ್ವದ ಜವಾಬ್ದಾರಿಯನ್ನು ಎಂಟು ಮಂದಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram