ಬೆಂಗಳೂರು | ತಿಂಡಿಗಾಗಿ ಇಂದಿರಾ ಕ್ಯಾಂಟೀನ್ ಮುಂದೆ ಕ್ಯೂ Bangalore
ಬೆಂಗಳೂರು : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡ ಕಾರ್ಮಿಕರು, ವಲಸಿಗರು ಹಾಗೂ ನಿರ್ಗತಿರಕರಿಗಾಗಿ ಸರ್ಕಾರ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ತಿಂಡಿ, ಊಟದ ವ್ಯವಸ್ಥೆ ಮಾಡಿದೆ.
ಈ ಹಿನ್ನೆಲೆ ಇಂದಿನಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಪಹಾರ, ಊಟ ನೀಡಲಾಗುತ್ತಿದ್ದು, ಜನ ಸಾಲುಗಟ್ಟಿ ನಿಂತು ತಿಂಡಿ ಪಡೆದಿದ್ದಾರೆ.
ಕಾರ್ಪೋರೇಷನ್ ಸರ್ಕಲ್, ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್ ಸೇರಿದಂತೆ ಬೆಂಗಳೂರಿನ ಎಲ್ಲ ಇಂದಿರಾ ಕ್ಯಾಂಟೀನ್ ಗಳ ಮುಂದೆ ಜನ ತುಂಬಿದ್ದಾರೆ.
ಬೆಳಗ್ಗೆ 7.30ರಿಂದ ಉಚಿತವಾಗಿ ತಿಂಡಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೂರಾರು ಜನ ಉಚಿತ ಊಟಕ್ಕಾಗಿ ಇಂದಿರಾ ಕ್ಯಾಂಟೀನ್ ಮುಂದೆ ಕ್ಯೂ ನಿಂತಿದ್ದಾರೆ.
ರಾಜ್ಯ ಸರ್ಕರ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ದಿನಕ್ಕೆ ಮೂರು ಹೊತ್ತು ಆಹಾರ ನೀಡಲು ಆದೇಶಿಸಿದೆ. ಜನರು ತಮ್ಮ ಹೆಸರು, ವಿಳಾಸದ ಮಾಹಿತಿ ನೀಡಿ ಜನ ತಿಂಡಿ ಪಡೆಯುತ್ತಿದ್ದಾರೆ.










