ಮಿಸ್ ಆಗಿ ಮತ್ತೊಬ್ಬರ ಖಾತೆಗೆ 18.60 ಲಕ್ಷ ರೂ : ದುಡ್ಡು ವಾಪಸ್ ಕೇಳಿದ ಮಹಿಳೆಗೆ ಕಾದಿತ್ತು ಶಾಕ್..!
ಬೆಂಗಳೂರು : ನಾವು ಎಷ್ಟೋ ಬಾರಿ ಮಿಸ್ ಆಗಿ ಯಾರಿಗೋ ಕಳುಹಿಸಬೇಕಾಗಿದ್ದ ಹಣವನ್ನ ಮತ್ಯಾರಿಗೋ ಕಳುಗಹಿಸುತ್ತೇವೆ.. ಕೆಲವೊಂದು ವಾಪಸ್ ಬರುತ್ತೆ. ಕೆಲವೊಮ್ಮೆ ಕಳೆದುಕೊಂಡಿದ್ದು ನೀರಿನಲ್ಲಿ ಹೋಮವಾದಂತೆ ಅಷ್ಟೇ ಅಂತ ಬಿಟ್ಟು ಬಿಡ್ತೇವೆ. ಆದ್ರೆ ಇದೇ ರೀತಿಯಾಗಿ ಮಹಿಳೆಯೊಬ್ಬರು ಒಂದಲ್ಲಾ ಎರೆಡಲ್ಲಾ ಬರೋಬ್ಬರಿ 18.60 ರೂಪಾಯಿ ಹಣವನ್ನ ಕಳೆದುಕೊಂಡಿದ್ದಾರೆ. ತನ್ನ ಸ್ನೇಹಿತಿಗೆ ಹಣ ವರ್ಗಾವಣೆ ಮಾಡೋವಾಗ ಮಿಸ್ ಆಗಿ ಬೇರೊಬ್ಬರ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಬಳಿಕ ತಪ್ಪನ್ನ ಅರಿತು ಹಣ ಹಿಂದಿರುಗಿಸುವಂತೆ ಖಾತೆಯ ಮಾಲೀಕನ ಬಳಿ ಕೇಳಿಕೊಂಡಿದ್ದಾರೆ. ಆದ್ರೆ ಆ ಆಸಾಮಿ ಹಣ ವಾಪಸ್ ಮಾಡೋ ಬದಲು ಹಣ ಕೇಳದಂತೆ ಧಮ್ಕಿ ಹಾಕಿದ್ದಾನೆ.
ಕನ್ನಡ ಬಿಗ್ ಬಾಸ್ ಸೀಸನ್ 8 : ದೊಡ್ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ..?
ಇನ್ನೂ ಹಣ ಕಳೆದುಕೊಂಡಿರುವ ಸಿ ಕೆ ಅಚ್ಚುಕಟ್ಟು ನಿವಾಸಿ ಜ್ಯೋತಿ ಇದೀಗ ಹಣ ವಾಪಸ್ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಶಾಂತರತ್ನಂ ಎಂಬಾತನ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಮಹಿಳೆಯ ದೂರಿನ ಾಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಲವರ್ ನ ಬಿಡಲ್ಲ ಅಂದ ಮಗನ ಮೇಲಿನ ಸಿಟ್ಟಿಗೆ ಹೀಗಾ ಮಾಡೋದು..!
ಹಣ ಕಾಸಿನ ಸಮಸ್ಯೆ ಎದುರಿಸುತ್ತಿದ್ದ ಸ್ನೇಹಿತೆಗೆ ಜೂನ್ 19 ರಂದು ಸುಕನ್ಯಾ ಹೆಸರಿನಲ್ಲಿರುವ ಐಡಿಬಿಐ ಬ್ಯಾಂಕ್ ಖಾತೆಗೆ 18.60 ಲಕ್ಷ ರೂಪಾಯಿ ಆರ್ ಟಿಜಿಎಸ್ ಮೂಲಕ ವರ್ಗಾಯಿಸಲು ಮುಂದಾಗಿದ್ದರು. ಆದರೆ ವರ್ಗಾವಣೆ ವೇಳೆ ಸ್ನೇಹಿತೆ ಬ್ಯಾಂಕ್ ಖಾತೆಯ ಸಂಖ್ಯೆ ತಪ್ಪಾಗಿ ನಮೂದಿಸಿದ್ದಾರೆ. ಇದರಿಂದ ಶಾಂತರತ್ನಂ ಎಂಬಾತನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ. ಇನ್ನೂ ಖಾತೆಗೆ ಹಣ ಬಂದಿರೋದು ಗೊತ್ತಾಗ್ತಿದ್ದಂತೆ ಶಾಂತರತ್ನಂ ಯಾರದ್ದೋ ದುಡ್ಡ ಎಲ್ಲಮನ ಜಾತ್ರೆ ಅಂತ ಉಡಾಯಿಸಿದ್ದಾನೆ. ಬ್ಯಾಂಕ್ನಿಂದ 1.60 ಲಕ್ಷ ಹಣ ಡ್ರಾ ಮಾಡಿಕೊಂಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ಉಳಿದ ಹಣವನ್ನಾದರೂ ನೀಡುವಂತೆ ಬೇಡಿಕೊಂಡ ಮಹಿಳೆಗೆ ಹಣ ವಾಪಸ್ ಕೇಳದಂತೆ ಧಮ್ಕಿ ಹಾಕಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel