ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾಕೃಷ್ಣ ಧಾರವಾಹಿಯಲ್ಲಿ ಬಲರಾಮನಾಗಿ ಮಿಂಚುತ್ತಿರುವ ನಟ ಬಸಂತ್ ಭಟ್ ಅವರು ಅವರ ಬಲರಾಮನ ಪಾತ್ರದಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ರಾಧಾಕೃಷ್ಣದಲ್ಲಿ ಕೃಷ್ಣ ಅಣ್ಣ ಬಲರಾಮನ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಇವರ ರಿಯಲ್ ಲೈಫ್ ಹೆಸರು ಬಸಂತ್ ಭಟ್ 
ಉತ್ತರಖಂಡದ ಭಾಗೇಶ್ವರದಲ್ಲಿ 23-ಜನವರಿ-1994 ರಲ್ಲಿ ಜನಿಸಿದ್ದು
ಇವರಿಗೆ ಒಬ್ಬ ಸಹೋದರ ( ಪ್ರದೀಪ್ ಭಟ್) ಹಾಗೂ ಓರ್ವ ತಂಗಿಯಿದ್ದಾರೆ
ಪ್ರಸ್ತುತ ಬಸಂತ್ ಪರಿವಾದೊಂದಿಗೆ ಮುಂಬೈನಲ್ಲೇ ನೆಲೆಸಿದ್ದಾರೆ.
ಮುಂಬೈನ ವಿಶ್ವವಿದ್ಯಾಲಯದಲ್ಲಿ ಬಸಂತ್ ಪದವಿಪಡೆದುಕೊಂಡಿದ್ದಾರೆ. 
ಬಸಂತ್ ಭಟ್ ಅವರಿಗೆ ನಟನೆಯ ಹೊರತಾಗಿ ಫಿಟ್ನೆಸ್ ಬಗ್ಗೆಯೂ ಬಹಳ ಕಾಳಜಿ ಇದೆ. ಹಾಗೇ ಫಿಟ್ ನೆಸ್ ಕಾಪಾಡಿಕೊಳುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ.
ಬಸಂತ್ ಮೈಥಾಲಾಜಿಕಲ್ ಧಾರವಾಹಿ ಮುಖಾಂತರವೇ ಡೆಬ್ಯಟ್ ಮಾಡಿ ಸಕ್ಸಸ್ ಕಂಡವರು. 2015ರಲ್ಲಿ ತೆರೆಕಂಡ ಸೂರ್ಯಪುತ್ರ ಕರ್ಣದಲ್ಲಿ ಬಾಲ ಕರ್ಣನ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮನಗೆದ್ದರು. ಇವರ ಅದ್ಭುತ ನಟನೆಯ ಕಾರಣಕ್ಕೆ ಅದೇ ಧಾರವಾಹಿಯಲ್ಲಿ ಮತ್ತೆ ಕರ್ಣನ ಪುತ್ರನ ಪಾತ್ರಕ್ಕೂ ಅವರನ್ನೇ ಆಯ್ಕೆ ಮಾಡಲಾಯ್ತು. ಕರ್ಣನಾಗಿ ಎಲ್ಲರ ಮನಗೆದ್ದ ಬಸಂತ್ ಗೆ ಇದಾದ ಬಳಿಕ ಹಲವಾರು ಆಫರ್ ಕೈಗಳು ಕೈ ಸೇರಿದ್ವು. ಪ್ರಮುಖವಾಗಿ ವಿಘ್ನಹರ ಗಣೇಶ ಹಾಗೂ ರಾಧಾಕೃಷ್ಣದಲ್ಲಿ ಅವರಿಗೆ ಸಿಕ್ಕಿರುವ ಪಾತ್ರಗಳು ಅವರ ವ್ಯಕ್ತಿತ್ವಕ್ಕೆ ತಕ್ಕ ಹಾಗಿದೆ. ವಿಘ್ನಹರ ಗಣೇಶ ಧಾರಾವಾಹಿಯಲ್ಲಿ ಕಾರ್ತಿಕೇಯನಾಗಿ , ರಾಧಾಕೃಷ್ಣದಲ್ಲಿ ಬಲರಾಮನಾಗಿ ಬಸಂತ್ ಮನೆಯಮಾತಾಗಿದ್ದಾರೆ. ಇದರ ಹೊರತಾಗಿ ಬಸಂತ್ ಕ್ರೈಂ ಪೆಟ್ರೋಲ್ ನ ಅನೇಕ ಸಂಚಿಕೆಗಳಲ್ಲೂ ಕಾಣಿಸಿಕೊಂಡಿದ್ದಾರೆ.








