Belgaum | ಮುಂದುವರೆದ ಆಪರೇಷನ್ ಚಿರತೆ ( Leopard ) ಕಾರ್ಯಾಚರಣೆ
ಬೆಳಗಾವಿ : ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಆಪರೇಷನ್ ಚಿರತೆ ಕಾರ್ಯಾಚರಣೆ ಮುಂದುವರೆದಿದೆ.
24 ನೇ ದಿನವೂ ಕೂಡ ಚಿರತೆ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಚಿರತೆ ಅರಣ್ಯ ಸಿಬ್ಬಂದಿಗೆ ಪದೇ ಪದೇ ಚಳ್ಳೆಹಣ್ಣು ತಿನ್ನಿಸುತ್ತಿದ್ದು, ಕಾರ್ಯಾಚರಣೆಗೆ ಇದೀಗ ಮಳೆ ಅಡ್ಡಿಯಾಗಿದೆ.
ಇನ್ನೂ ಮೂರು ದಿನ ಬೆಳಗಾವಿ ಜಿಲ್ಲೆಯಲ್ಲಿ ಯೆಲೋ ಅರ್ಲಟ್ ಘೋಷಣೆ ಮಾಡಲಾಗಿದೆ.

ಹೀಗಾಗಿ ಮಳೆ ನೋಡಿಕೊಂಡು ಫೀಲ್ಡ್ ಗೆ ಇಳಿಯಲು ಸಿಬ್ಬಂದಿ ಮೈದಾನಕ್ಕೆ ಇಳಿಯಲಿದ್ದಾರೆ.
ಸಿಸಿಎಫ್ ಮಂಜುನಾಥ, ಡಿಎಫ್ಒ ಅಂಥೋನಿ, ಎಸಿಎಫ್ ಮಲ್ಲಿನಾಥ ಕುಸನಾಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಇಂದು ಮಳೆ ಕಾರಣಕ್ಕೆ ಬರೀ 80 ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸಲಾಗುವುದು.
ಟ್ರ್ಯಾಪ್ ಕ್ಯಾಮೆರಾ, ಬಲೆ ಹಾಕಿ, ಜೆಸಿಬಿಗಳನ್ನ ಬಳಸಿ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಹೆಜ್ಜೆ ಗುರುತು ಆಧರಿಸಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಚಿರತೆ ಬೆಳಗಾವಿ ಜನರ ನಿದ್ದೆಗೆಡಿಸಿದೆ. Leopard Belgaum Continued Operation Leopard








