ಮಡಿಕೇರಿ: ಅಮಾಯಕರಿಗೆ ಹಲವು ದಿನಗಳಿಂದ ಕಾಡುತ್ತಿದ್ದ ಅನಾರೋಗ್ಯ ಮತ್ತು ಮನೆಯಲ್ಲಿನ ಸಮಸ್ಯೆಗೆ ಪರಿಹಾರ ಮಾಡಿಕೊಡುವುದಾಗಿ ನಂಬಿಸಿ ವಾಮಾಚಾರದ ನಾಟಕವಾಡಿ ಮಾಡಿ ವಂಚನೆ ಮಾಡುತ್ತಿದ್ದ ಆರೋಪಿ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾನೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಲ್ಯಮಂಡೂರಿನಲ್ಲಿ ತನ್ನ ಮೈಮೇಲೆ ದೇವರು ಬರುತ್ತದೆ, ಅದರಿಂದ ಪರಿಹಾರ ಒದಗಿಸುವುದಾಗಿ ಮಡಿವಾಳರ ರವಿ ಎಂಬಾತ ಜನರನ್ನು ನಂಬಿಸಿ ವಂಚನೆ ಮಾಡುತ್ತಿದ್ದ. ಬೆಳ್ಳೂರು ಗ್ರಾಮದ ವ್ಯಕ್ತಿಯ ಸಮಸ್ಯೆ ಬಗೆಹರಿಸಿಕೊಡುವುದಾಗಿ ನಂಬಿಸಿ ಅವರಿಂದ ಈ ಪೂಜೆ ಕಾರ್ಯಕ್ಕೆ 30 ಸಾವಿರದಷ್ಟು ಹಣ ಖರ್ಚಾಗಲಿದೆ ಎಂದು ನಂಬಿಸುತ್ತಿದ್ದ.

ಅಪರಿಚಿತರು ಮನೆಯ ಸಮೀಪದಲ್ಲಿ ಮಾಟ ಮಾಡಿ ಮಣ್ಣಿನಲ್ಲಿ ಹೂತಿಟ್ಟಿದ್ದಾರೆ, ಅದನ್ನು ತೆಗೆದುಕೊಟ್ಟು ಪರಿಹಾರ ಒದಗಿಸುವುದಾಗಿ ಮಡಿವಾಳರ ರವಿ ನಂಬಿಸುತ್ತಿದ್ದ. ಈ ವಿಚಾರ ಅಮಾಯಕ ವ್ಯಕ್ತಿಯ ಸಂಬಂಧಿಕೊಬ್ಬರಿಗೆ ತಿಳಿದು ಮಾಟ ತೆಗೆಯುವ ದಿನದಂದು ಮನೆಯ ಆವರಣದಲ್ಲೇ ಹಳ್ಳ ತೋಡಿ, ಮೈ ಮೇಲೆ ದೇವರು ಬರುವ ನಾಟಕವಾಡಿ ಕೆಲವು ಸಮಯ ಕತ್ತಲಿನಲ್ಲಿ ದೇವರನ್ನು ಆವಾಹನೆ ಮಾಡಿದಂತೆ ಮಾಡಿ ಇದ್ದಕ್ಕಿಂತೆ ಹಳ್ಳಕ್ಕೆ
ಬೀಳುತ್ತಾನೆ.

ಈ ಸಂದರ್ಭ ತನ್ನ ಪಂಚೆಯಲ್ಲಿ ಮೊದಲೇ ಇರಿಸಿಕೊಂಡಿದ್ದ ತಾಯಿತವನ್ನು ಮಣ್ಣಿನ ಗಡಿಗೆಯೊಳಗೆ ಹಾಕಿ ಮಾಟ ತೆಗೆದಂತೆ ಸನ್ನಿವೇಶ ಸೃಷ್ಟಿ ಮಾಡುತ್ತಿದ್ದ. ಆದರೆ ಈ ಸಂಪೂರ್ಣ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ದೇವರು ಬರುವ ವ್ಯಕ್ತಿ ರವಿಯನ್ನು ವಶಕ್ಕೆ ಪಡೆದು ವಿಚಾರಿಸಿದ ಸಂದರ್ಭ ತಪ್ಪು ಒಪ್ಪುಕೊಂಡಿದ್ದು ಬುದ್ದಿವಾದ ಹೇಳಿ ಬಿಟ್ಟು ಕಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








