ಬೆಂಗಳೂರಿಗರ ಗಮನಕ್ಕೆ : ಇಂದಿನಿಂದ ಆ.15ರವರೆಗೆ ವಿವಿಧ ಭಾಗಗಳಲ್ಲಿ ಕರೆಂಟ್ ಕಟ್
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಆಗಸ್ಟ್ 15ರವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.
ನಿಗದಿತ ನಿರ್ವಹಣಾ ಕಾರ್ಯದಿಂದಾಗಿ ಜಯನಗರ ಉಪವಿಭಾಗದ ಅಡಿಯಲ್ಲಿ ಬರುವ ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಎಲ್ಲೆಲ್ಲಿ ಯಾವಾಗ ಕರೆಂಟ್ ಕಟ್..?
ಇವತ್ತು ಎಸ್ಜೆ ಪಾರ್ಕ್, ಕಿಮ್ಸ್, ಆರ್ಟಿ ರಸ್ತೆ, ಸಿಟಿ ರೋಡ್, ಚಿಕ್ಕಪೇಟೆ, ಎಸ್.ಪಿ ರೋಡ್, ಟೌನ್ ಹಾಲ್, ಜೆಸಿ ರಸ್ತೆ, ಕೆಜಿ ರಸ್ತೆ, ವಿಕ್ಟೋರಿಯಾ ಆಸ್ಪತ್ರೆ, ಕಲಾಸಿಪಾಳ್ಯ, ಸಿಟಿ ಮಾರ್ಕೆಟ್, ಬಿವಿಕೆ, ಅಯ್ಯಂಗಾರ್ ರಸ್ತೆ, ಎಂಎಂ ರೋಡ್, ಶಂಕರಪುರ ಮತ್ತು ಮೆಡಿಕಲ್ ಕಾಲೇಜು ರಸ್ತೆ ವಿದ್ಯುತ್ ಕಡಿತವಾಗಿದೆ.
ಆಗಸ್ಟ್ 9 ರಂದು ಪದ್ಮನಾಭನಗರ ಪ್ರದೇಶಗಳು, ಕೆ.ಆರ್ ಲೇಔಟ್ ಪುಟ್ಟೇನಹಳ್ಳಿ ಕೆರೆ, ಅಶ್ವಥ್ ನಾರಾಯಣ್ ಲೇಔಟ್, ಅಣ್ಣಯ್ಯ ರೆಡ್ಡಿ ಲೇಔಟ್, ವಿವೇಕಾನಂದ ನಗರ, ಕತ್ರಿಗುಪ್ಪೆ ಪೂರ್ವ, ಬನಶಂಕರಿ ಹಂತ 3, ಪುಟ್ಟೇನಹಳ್ಳಿ ವೃತ್ತ, ಬನಶಂಕರಿ ಹಂತ 5, ಜೆ.ಪಿ ನಗರ 6ನೇ ಹಂತ, ಕಾವೇರಿ ನಗರ ಕರೆಂಟ್ ಕೈಕೊಡಲಿದೆ.
ಆಗಸ್ಟ್ 10 ರಂದು ಆಗಸ್ಟ್ 10 ರಂದು ಪದ್ಮನಾಭನಗರ, ಜರಗನಹಳ್ಳಿಯ 1 ಮತ್ತು 6 ಹಂತಗಳು, ಇಟ್ಟಮಾಡು, ನಾಗಾರ್ಜುನ ಎನ್ಕ್ಲಾವ್, ಆರ್ಚಳ್ಳಿ ಮುಖ್ಯ ರಸ್ತೆ, ಕೆಇಬಿ ಲೇಔಟ್, ರಾಮರಾವ್ ಲೇಔಟ್, ಬನಶಂಕರಿ ಹಂತ 2 ಸಿಂಧೂರ್ ಚೌಲ್ಟ್ರಿ, ಕತ್ರಿಗುಪ್ಪೆ ಮುಖ್ಯ ರಸ್ತೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ.
ಆಗಸ್ಟ್ 11, 12 ಮತ್ತು 13 ರಂದು ಸುದಮ್ ನಗರ, ಜರಗನಹಳ್ಳಿ ಸಿ.ಎಸ್ ಲೇಔಟ್, ಭುವನೇಶ್ವರಿ ನಗರ, ಇಟ್ಟಮಾಡು, ಸಿದ್ದಣ್ಣ ಲೇಔಟ್, ಶ್ರೀನಿಧಿ ಲೇಔಟ್, ಚುಂಚನಘಟ್ಟ ಗ್ರಾಮ, ಜೆ.ಪಿ ನಗರ 5ನೇ ಹಂತ, ಕಾಮಾಕ್ಯ ಲೇಔಟ್, ನಾಯ್ಡು ಲೇಔಟ್, ಬಸವರಾಜು ಲೇಔಟ್, ಅಯ್ಯಪ್ಪ ದೇವಸ್ಥಾನ, ಜೆಪಿ ನಗರ 2, 3 ಮತ್ತು 5ನೇ ಹಂತಗಳು, 100 ಫೀಟ್ ರಿಂಗ್ ರೋಡ್, ಕೃಷ್ಣಪ್ಪ ಲೇಔಟ್, ಭುವನೇಶ್ವರಿ ನಗರ ಮತ್ತು ಪದ್ಮನಾಭನಗರ ಭಾಗಗಳಲ್ಲಿ ವಿದ್ಯುತ್ ಕಡಿತ.
ಆಗಸ್ಟ್ 14, 15 ರಂದು ಕರ್ನಾಟಕ ಬ್ಯಾಂಕ್ ರಸ್ತೆ, ಪದ್ಮನಾಭನಗರ ಬಿಡಬ್ಲ್ಯೂಎಸ್ಎಸ್ಬಿ ಕಚೇರಿ, ಹಳ್ಳಿ ಎಸ್ಬಿಎಂ ರಸ್ತೆ, ಎಚ್ ಸಿದ್ದಯ್ಯ ರಸ್ತೆ ಇತ್ಯಾದಿ ಪ್ರದೇಶಗಳು ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.









