ADVERTISEMENT
Monday, June 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ದೇಶದ ಅತ್ಯುನ್ನತ ಮಿಲಿಟರಿ ಅಕಾಡೆಮಿ NDA..!!

Namratha Rao by Namratha Rao
May 20, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ದೇಶದ ಅತ್ಯುನ್ನತ ಮಿಲಿಟರಿ ಅಕಾಡೆಮಿ NDA..!!

ಸೇನೆಗೆ ಸೇರುವುದು ಬಹುತೇಕರ ಜೀವಮಾನದ ಕನಸು. ಈ ಕನಸು‌ ನನಸಾಗಿಸಿಕೊಳ್ಳಲು ಚಿಕ್ಕಂದಿನಿಂದಲೇ ತಯಾರಿ ನಡೆಸಿ ಸೇನೆ ಸೇರಿದ ಅದೆಷ್ಟೋ ಧೀರರು ನಮ್ಮ ನಡುವಿದ್ದಾರೆ. ಅದರಲ್ಲೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರುವುದು ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದು ಎಂಬಂತೆ ತಯಾರಿ‌ ನಡೆಸುವವರ ಸಂಖ್ಯೆಗೆ ಕಡಿಮೆ‌ ಇಲ್ಲ.

Related posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

June 15, 2026
ಗೃಹಲಕ್ಷ್ಮಿಯರು ಈಗ ದರಿದ್ರ ಲಕ್ಷ್ಮಿಯರೇ? 3 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟ ಸರ್ಕಾರದ ವಿರುದ್ಧ ಛಲವಾದಿ ಕಿಡಿ

ಗೃಹಲಕ್ಷ್ಮಿಯರು ಈಗ ದರಿದ್ರ ಲಕ್ಷ್ಮಿಯರೇ? 3 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟ ಸರ್ಕಾರದ ವಿರುದ್ಧ ಛಲವಾದಿ ಕಿಡಿ

June 15, 2026

ಅಸಲಿಗೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಎಂದರೇನು? ಅಲ್ಲಿ ಪ್ರವೇಶ ಪಡೆಯಲು‌ ಇರುವ‌ ಮಾನದಂಡಗಳೇನು? ಅಲ್ಲಿ ಸೇರಿದ ಬಳಿಕ ತರಬೇತಿ ಹೇಗಿರುತ್ತದೆ ಎಂಬುದು ಬಹುತೇಕರಿಗೆ ತಿಳಿಯದು. ಮಹಾರಾಷ್ಟ್ರದ ಪುಣೆ ಬಳಿಯ ಖಡಕವಾಸ್ಲಾ‌ದಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಯಲ್ಲಿ ಕಠಿಣ ಮಿಲಿಟರಿ ತರಬೇತಿಯನ್ನು ನೀಡಲಾಗುತ್ತದೆ.

ಜಾಯಿಂಟ್ ಸರ್ವಿಸಸ್ ವಿಂಗ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಸಂಸ್ಥೆಗೆ ೧೯೫೪ ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಎಂದು‌ ಮರುನಾಮಕರಣಗೊಳಿಸಲಾಯಿತು. ಭಾರತದ ಸಶಸ್ತ್ರ ಪಡೆಗಳ ಭಾಗಗಳಾದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಸೇರುವವರಿಗೆ ಒಂದೇ ಸೂರಿನಡಿ ಉತ್ತಮ‌ ತರಬೇತಿ ನೀಡುವುದು ಈ ಸಂಸ್ಥೆಯ ಆರಂಭಕ್ಕೆ ನಾಂದಿಯಾಗಿತ್ತು.‌

ಅಕಾಡೆಮಿಯು ಪ್ರಾರಂಭವಾದಾಗಿನಿಂದ ಪ್ರತಿ ಪ್ರಮುಖ ಸಂಘರ್ಷಗಳಲ್ಲಿ ಭಾರತೀಯ ಸೈನ್ಯವನ್ನು ಕಾರ್ಯಾಚರಣೆಗೆ ಕರೆದಾಗಲೆಲ್ಲಾ ಎನ್‌ಡಿಎ ಹಳೆಯ ವಿದ್ಯಾರ್ಥಿಗಳು ಯುದ್ಧದಲ್ಲಿ ಮಂಚೂಣಿಯಲ್ಲಿದ್ದು ಹೋರಾಡಿದ್ದಾರೆ.

ಪೂರ್ವ ಆಫ್ರಿಕಾದಲ್ಲಿನ ಕಾರ್ಯಾಚರಣೆಯ ಸಂದರ್ಭದಲ್ಲಿ ಸೂಡಾನ್ ಯುದ್ಧಕ್ಷೇತ್ರದಲ್ಲಿ ಪ್ರಾಣತ್ಯಾಗ ಮಾಡಿದ ಭಾರತೀಯ ಸೈನಿಕರ ಗೌರವಾರ್ಥವಾಗಿ ಎನ್‌ಡಿಎ ನ ಕಾರ್ಯನಿರ್ವಹಣಾ ಮುಖ್ಯಕೇಂದ್ರಕ್ಕೆ ಸೂಡಾನ್ ಬ್ಲಾಕ್ ಎಂದು ಹೆಸರಿಡಲಾಗಿದೆ. ಎನ್‌ಡಿಎಗೆ ಅರ್ಜಿ ಸಲ್ಲಿಸಿದವರನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಸಾಮಾನ್ಯ ಕೌಶಲ್ಯ, ಮನೋವೈಜ್ಞಾನಿಕ ಪರೀಕ್ಷೆ, ತಂಡ ಕೌಶಲ್ಯಗಳು ಜೊತೆಗೆ ದೈಹಿಕ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಒಳಗೊಂಡ ಸಂದರ್ಶಗಳು ಜೊತೆಗೆ ವೈದ್ಯಕೀಯ ಪರೀಕ್ಷೆಗಳನ್ನೂ ನಡೆಸಲಾಗುತ್ತದೆ. ಪ್ರತಿ ಸೆಮಿಸ್ಟರ್‌ಗೆ ಅಕಾಡೆಮಿಗೆ ಸುಮಾರು 300-350 ಕೆಡೆಟ್‌ಗಳನ್ನು ತೆಗೆದುಕೊಳ್ಳಲಾಗುತ್ತದೆ. ವಾಯು ಸೇನೆಗೆ ಸುಮಾರು 40 ಕೆಡೆಟ್‌ಗಳು, ನೌಕಾ ಸೇನೆಗೆ 50 ಮತ್ತು ಉಳಿದವರನ್ನು ಭೂಸೇನೆಗೆ ತೆಗೆದುಕೊಳ್ಳಲಾಗುತ್ತದೆ.

ಕೆಡೆಟ್‌ಗಳಿಗೆ ಮೂರು ವರ್ಷಗಳ ಅಧ್ಯಯನದ ನಂತರ ಬ್ಯಾಕಲರಿಯೇಟ್ ಪದವಿ ಅಥವಾ ಕಲಾ ವಿಭಾಗದ ಪದವಿ ಅಥವಾ ವಿಜ್ಞಾನ ವಿಭಾಗದ ಪದವಿ ಪಡೆಯುತ್ತಾರೆ.
ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಎಲ್ಲಾ ಆರು ಸೆಮಿಸ್ಟರ್‌ಗಳ ಸಂದರ್ಭದಲ್ಲಿ ಕೆಡೆಟ್‌ಗಳಿಗೆ ಕಟ್ಟುನಿಟ್ಟಿನ ದೈಹಿಕ ತರಬೇತಿಯು ಕಡ್ಡಾಯವಾಗಿದೆ.

ಮುಂಬಯಿ ಭಯೋತ್ಪಾದಕ ದಾಳಿಯ ವೇಳೆ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ವಿದ್ಯಾರ್ಥಿ. ಅಷ್ಟೇ ಅಲ್ಲದೇ ಇಲ್ಲಿ‌ಂದ ತೇರ್ಗಡೆಯಾದ ಅದೆಷ್ಟೋ ಶೂರರು ಹತ್ತು ಹಲವು ಶೌರ್ಯ ಪ್ರಶಸ್ತಿಗಳನ್ನು ಗಳಿಸುವುದರ ಜೊತೆಗೆ ಸಶಸ್ತ್ರ ಸೇನೆಗಳಲ್ಲಿ ಅತ್ಯುಚ್ಛ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಇಂಥ ಧೀರರನ್ನು ದೇಶಕ್ಕೆ ಕೊಡಿಗೆ ನೀಡುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಭಾರತದ ಅತ್ಯುತ್ತಮ ಮಿಲಿಟರಿ ಸಂಸ್ಥೆ.

 

ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.corona cases

Tags: indiamilitary academyNDA
ShareTweetSendShare
Join us on:

Related Posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

by Shwetha
June 15, 2026
0

ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿ ಪಾರದರ್ಶಕ ಆಡಳಿತ ನೀಡಲು ಮುಖ್ಯಮಂತ್ರಿಗಳು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಸಾರ್ವಜನಿಕರಿಗೆ ಕಿರುಕುಳ ನೀಡುವ ಮತ್ತು ಲಂಚ ಕೇಳುವ...

ಗೃಹಲಕ್ಷ್ಮಿಯರು ಈಗ ದರಿದ್ರ ಲಕ್ಷ್ಮಿಯರೇ? 3 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟ ಸರ್ಕಾರದ ವಿರುದ್ಧ ಛಲವಾದಿ ಕಿಡಿ

ಗೃಹಲಕ್ಷ್ಮಿಯರು ಈಗ ದರಿದ್ರ ಲಕ್ಷ್ಮಿಯರೇ? 3 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟ ಸರ್ಕಾರದ ವಿರುದ್ಧ ಛಲವಾದಿ ಕಿಡಿ

by Shwetha
June 15, 2026
0

ಬೆಂಗಳೂರು: ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಸರ್ಕಾರದ ನಡೆಗಳ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ...

ಅಂದು ಕಾಡಿನ ಎಲೆಗಳೇ ಹಾಸಿಗೆ ಇಂದು ರೆಡ್ ಕಾರ್ಪೆಟ್:ರಾಷ್ಟ್ರೀಯ ನಾಯಕನ ಪಯಣದ ಹಿಂದೆ ಅಡಗಿದೆ ಇತಿಹಾಸದ ನೋವು

ಅಂದು ಕಾಡಿನ ಎಲೆಗಳೇ ಹಾಸಿಗೆ ಇಂದು ರೆಡ್ ಕಾರ್ಪೆಟ್:ರಾಷ್ಟ್ರೀಯ ನಾಯಕನ ಪಯಣದ ಹಿಂದೆ ಅಡಗಿದೆ ಇತಿಹಾಸದ ನೋವು

by Shwetha
June 15, 2026
0

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ದೇಶದ ಪ್ರಬಲ ರಾಜಕೀಯ ನಾಯಕರಲ್ಲಿ ಒಬ್ಬರು. ಆದರೆ ಅವರು ಇಂದು ನಡೆದು ಬರುತ್ತಿರುವ ಈ ಯಶಸ್ಸಿನ...

ಬಿಡದಿ ಟೌನ್‌ಶಿಪ್ – ನನ್ನ ಕೂಸು ಅಂದವರಿಗೆ ಕುಮಾರಸ್ವಾಮಿ ಕೊಟ್ರು ಖಡಕ್ ಉತ್ತರ: ಬಿಡದಿಯಲ್ಲಿ ಶುರುವಾಯ್ತು ಹಳೇ ದೋಸ್ತಿಗಳ ಹೊಸ ಸಮರ!

ಬಿಡದಿ ಟೌನ್‌ಶಿಪ್ – ನನ್ನ ಕೂಸು ಅಂದವರಿಗೆ ಕುಮಾರಸ್ವಾಮಿ ಕೊಟ್ರು ಖಡಕ್ ಉತ್ತರ: ಬಿಡದಿಯಲ್ಲಿ ಶುರುವಾಯ್ತು ಹಳೇ ದೋಸ್ತಿಗಳ ಹೊಸ ಸಮರ!

by Shwetha
June 15, 2026
0

ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುತ್ತಿದ್ದಂತೆ ರೈತರು ಆಕ್ರೋಶಗೊಂಡಿದ್ದು, ಅವರ ಬೆಂಬಲಕ್ಕೆ...

ಸಚಿವ ಸ್ಥಾನದ ರೇಸ್‌ನಿಂದ ಜಮೀರ್ ಔಟ್? ಡಿಕೆಶಿ ಮೌನ ಮತ್ತು ಸಿದ್ದರಾಮಯ್ಯ ಅಸಮಾಧಾನದ ಮರ್ಮವೇನು?

ಸಚಿವ ಸ್ಥಾನದ ರೇಸ್‌ನಿಂದ ಜಮೀರ್ ಔಟ್? ಡಿಕೆಶಿ ಮೌನ ಮತ್ತು ಸಿದ್ದರಾಮಯ್ಯ ಅಸಮಾಧಾನದ ಮರ್ಮವೇನು?

by Shwetha
June 15, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಒಂದೊಮ್ಮೆ ಪ್ರಭಾವಿ ಅಲ್ಪಸಂಖ್ಯಾತ ನಾಯಕ ಎಂದು ಬಿಂಬಿತರಾಗಿದ್ದ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜಮೀರ್ ಅಹಮದ್ ಖಾನ್...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram