ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಜ್ವಲ್ ರೇವಣ್ಣ ಅವರನ್ನು ತಾಯಿ ಭವಾನಿ ರೇವಣ್ಣ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಜೈಲಿನಲ್ಲಿರುವ ಮಗನನ್ನು ಭೇಟಿ ಮಾಡಲು ಕಾರು ಡ್ರೈವರ್ ಹಾಗೂ ಪಿಎ ಜೊತೆಗೆ ಆಗಮಿಸಿದ್ದಾರೆ. ಆದರೆ, ಅವರ ಕಾಲಿಗೆ ಪೆಟ್ಟಾಗಿದೆ. ಹೀಗಾಗಿ ಕುಂಟುತ್ತಲೇ ಮಗನನ್ನ ನೋಡಲು ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಬಂದಿದ್ದಾರೆ. ಕಾಲಿಗೆ ಪೆಟ್ಟಾಗಿದ್ದರಿಂದ ಓಡಾಡಲು ಆಗದೆ ಇದ್ದರೂ ಸ್ಟಿಕ್ ಆಸರೆಯೊಂದಿಗೆ ಮಗನ ನೋಡಲು ಆಗಮಿಸಿದ್ದಾರೆ.
ಜೈಲಿನಲ್ಲಿ ಮಗನನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಆ ನಂತರ ಪರಪ್ಪನ ಅಗ್ರಹಾರ ಜೈಲಿನಿಂದ ನಿರ್ಗಮಿಸಿದ್ದಾರೆ. ಆದರೆ, ಮಾಧ್ಯಮಗಳಿಗೆ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ, ಅವರನ್ನು ಗಮನಿಸಿದರೆ ಮಕ್ಕಳು ಜೈಲು ಸೇರಿದ್ದರಿಂದಾಗಿ ಭವಾನಿ ರೇವಣ್ಣ ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿದಂತೆ ಕಂಡು ಬಂದಿದ್ದಾರೆ.